
ಮುಂಬೈ[ಮೇ.24]: ಆರ್'ಸಿಬಿ ಪ್ಲೇಆಫ್ ಹಂತ ತಲುಪದೆ ನಿರಾಸೆ ಅನುಭವಿಸಿರುವ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಆಘಾತ ಎದುರಾಗಿದೆ.
ತಾವು ಬಹುನಿರೀಕ್ಷಿತವಾಗಿ ಆಡಬೇಕೆಂದು ಕೊಂಡಿದ್ದ ಇಂಗ್ಲೆಂಡ್ ಕೌಂಟಿಗೆ ಗಾಯದ ಸಮಸ್ಯೆಯಿಂದ ಹೊರಗುಳಿಯುವಂತಾಗಿದೆ. ಕುತ್ತಿಗೆ ನೋವಿನಿಂದ ಬಳಲುತ್ತಿರುವ ಅವರಿಗೆ ಮಾಮೂಲಿನ ಸ್ಥಿತಿಗೆ ಮರಳಲು 3 ವಾರಗಳ ವಿಶ್ರಾಂತಿ ಅಗತ್ಯವಿದ್ದು ಇಂಗ್ಲೆಂಡ್ ಕೌಂಟಿ ಸರ್ರೆ ತಂಡದಲ್ಲಿ ಈ ಬಾರಿ ಆಡುವುದು ಬಹುತೇಕ ಅನುಮಾನವಾಗಿದೆ.
ಬಿಸಿಸಿಐ ಸ್ವತಃ ಅಧಿಕೃತ ಪ್ರಕಟಣೆ ತಿಳಿಸಿದ್ದು ಬೆಂಗಳೂರಿನಲ್ಲಿ ಮೇ.15ರಂದು ನಡೆಯುವ ಫೆಟ್'ನೆಸ್ ಪರೀಕ್ಷೆಯಲ್ಲಿ ಗುಣಮುಖರಾಗಿರುವುದರ ಬಗ್ಗೆ ಮಾಹಿತಿ ನೀಡಿಲಿದೆ. ಬೆಂಗಳೂರಿನಲ್ಲಿ ಜೂ.14ರಂದು ಅಫ್ಘಾನ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ನಡೆಯಲಿದೆ. ನಿನ್ನೆಯಷ್ಟೆ ಆರ್'ಸಿಬಿಯ ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್ ಅಂತರಾಷ್ಟ್ರೀಯ ಕ್ರಿಕೆಟ್'ನಿಂದ ನಿವೃತ್ತಿ ಪ್ರಕಟಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.