
ನವದೆಹಲಿ(ಮಾ.13): ನಾಗ್ಪುರದ ಕ್ರಿಕೆಟ್ ಜ್ಯೋತಿಷಿ ನರೇಂದ್ರ ಬುಂಡೆ, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಟಿ20 ಹಾಗೂ ಏಕದಿನ ವಿಶ್ವಕಪ್ ಗೆಲ್ಲಲಿದೆ. 2025ರ ವೇಳೆಗೆ ಸಚಿನ್ ತೆಂಡುಲ್ಕರ್'ರ 100 ಶತಕಗಳ ದಾಖಲೆಯನ್ನು ಕೊಹ್ಲಿ ಮುರಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
‘ನಾನು ಈ ಹಿಂದೆ ಹೇಳಿದ್ದೆಲ್ಲಾ ನಿಜವಾಗಿದೆ. 2018ರಲ್ಲಿ ಕೊಹ್ಲಿ, ಕ್ರಿಕೆಟ್ ಲೋಕ ಹಿಂದೆಂದೂ ಕೇಳರಿಯದ ಮೊತ್ತದ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ’ ಎಂದು ನರೇಂದ್ರ ಹೇಳಿದ್ದಾರೆ. ಈ ಹಿಂದೆ ಸಚಿನ್'ಗೆ ಭಾರತ ರತ್ನ ಸಿಗಲಿದೆ, 2011ರ ವಿಶ್ವಕಪ್ ಗೆಲುವು ಸೇರಿ ಅನೇಕ ವಿಚಾರಗಳ ಬಗ್ಗೆ ಅವರು ಭವಿಷ್ಯ ನುಡಿದಿದ್ದರು.
ಜ್ಯೋತಿಷಿ ನರೇಂದ್ರ ಬುಂಡೆ ಬಳಿ ಸೌರವ್ ಗಂಗೂಲಿ, ಜಹೀರ್ ಖಾನ್, ಗೌತಮ್ ಗಂಭೀರ್, ಸುರೇಶ್ ರೈನಾ ಸೇರಿದಂತೆ ಪ್ರಮುಖ ಕ್ರಿಕೆಟಿಗರು ಸಲಹೆ ಪಡೆದುಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.