
ಸದ್ಯಕ್ಕೆ ಕ್ಯಾಪ್ಟನ್ ಧೋನಿ ಒತ್ತಡದಲ್ಲಿದ್ದಾರೆ. ಒಂದು ಕಡೆ ಸರಣಿ ಗೆಲ್ಲಬೇಕು. ಮತ್ತೊಂದು ಕಡೆ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡಬೇಕು. ತನ್ನ ಅದೃಷ್ಟದ ಮೈದಾನ ಇಂದು ಮಹಿಯ ಅದೃಷ್ಟವನ್ನ ಬದಲಿಸುತ್ತಾ ಅನ್ನೋದು ಸದ್ಯಕ್ಕಿರುವ ಕುತೂಹಲ.
ಧೋನಿಯ ಲಕ್ ಬದಲಿಸಿದ ಮೈದಾನ
ಯಾರು ಏನೇ ಹೇಳಲಿ, ಎಂಎಸ್ ಧೋನಿ ಮಾತ್ರ ಸಂಕಷ್ಟದಲ್ಲಿದ್ದಾರೆ. ಕೇವಲ ನಾಯಕನಾಗಿ ಮಾತ್ರವಲ್ಲ. ಒಬ್ಬ ಆಟಗಾರನಾಗಿಯೂ ಅವರು ಒತ್ತಡಲ್ಲಿದ್ದಾರೆ. ಒಂದು ಕಡೆ ತವರಿನಲ್ಲಿ ಸರಣಿ ಕೈಚೆಲ್ಲುವ ಭಯವಿದೆ. ಮತ್ತೊಂದು ಕಡೆ ರನ್ ಗಳಿಸಲು ಮಹಿ ಪರದಾಡುತ್ತಿದ್ದಾರೆ. ಕೀಪಿಂಗ್ನಲ್ಲಿ ಸೈ ಎನಿಸಿಕೊಂಡ್ರೂ, 4ನೇ ಪಂದ್ಯದಲ್ಲಿ ಧೋನಿ ರನ್ಗಳಿಸಲು ಪರದಾಡಿದ್ದು ಎಲ್ಲರಲ್ಲೂ ಆಘಾತಗೊಳಿಸಿದೆ. ಈಗ ಮಹಿಯ ಅದೃಷ್ಟದ ಮೈದಾನ ಮತ್ತೆ ಅವರ ಅದೃಷ್ಟ ಬದಲಿಸಬೇಕಿದೆ.
ವೈಜಾಕ್ನಲ್ಲಿ ಧೋನಿ ಮೊದಲ ಶತಕ
ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಮೊದಲ 4 ಪಂದ್ಯಗಳಲ್ಲೂ ಧೋನಿ ವಿಫಲರಾಗಿದ್ದರು. ವೈಜಾಕ್ನಲ್ಲಿ ನಡೆದ 5ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಆಡ್ತೀನಿ ಎಂಬ ವಿಶ್ವಾಸವೂ ಮಹಿಗೆ ಇರಲಿಲ್ಲ. ಅದನ್ನ ಅವರ ಜೀವನಾಧಾರಿತ ಚಿತ್ರದಲ್ಲೂ ಹೇಳಿಕೊಂಡಿದ್ದಾರೆ. ಆದರೆ ಆಗಿನ ನಾಯಕ ಸೌರವ್ ಗಂಗೂಲಿ, ಆಡಲು ಚಾನ್ಸ್ ಕೊಟ್ಟಿದ್ದಲ್ಲದೆ ಧೋನಿಯನ್ನ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಟ್ಟರು. ಆಗ ಚೇಂಜ್ ಆಯ್ತು ನೋಡಿ ಮಹಿ ಲಕ್.
ಬದ್ಧವೈರಿಗಳ ಸದೆಬಡಿದ ಧೋನಿ
ಸಿಕ್ಕಿದ್ದೆ ಚಾನ್ಸ್ ಅನ್ನೋ ಹಾಗೆ ಫಸ್ಟ್ ಡೌನ್ನಲ್ಲಿ ಬ್ಯಾಟಿಂಗ್ಗೆ ಬಂದ ಧೋನಿ, ಬದ್ಧವೈರಿ ಪಾಕಿಸ್ತಾನ ಬೌಲರ್ಗಳ ಮನಬಂದಂತೆ ದಂಡಿಸಿದ್ರು. ಅದು ಯಾವ ಮಟ್ಟಕ್ಕೆ ಅಂದ್ರೆ ಪಾಕಿಗಳಿಂದ ಮಹಿಯನ್ನ ಕಂಟ್ರೋಲ್ ಮಾಡಲು ಸಾಧ್ಯವೇ ಆಗಲಿಲ್ಲ. ಧೋನಿ ಬೌಂಡ್ರಿ-ಸಿಕ್ಸ್ಗಳ ಆರ್ಭಟ ನೋಡಿ, ಭಾರತೀಯ ಕ್ರಿಕೆಟ್ ಅಭಿಮಾನಿಗಳಂತೂ ಭಾರತಕ್ಕೆ ಮತ್ತೊಬ್ಬ ಸ್ಫೋಟಕ ಬ್ಯಾಟ್ಸ್ಮನ್ ಸಿಕ್ಕಿದ ಎಂದು ಸಂಭ್ರಮಿಸಿದ್ರು.
ಅಂದು ಧೋನಿ 123 ಬಾಲ್ನಲ್ಲಿ 15 ಬೌಂಡರಿ, 4 ಸಿಕ್ಸ್ ಸಹಿತ 148 ರನ್ ಬಾರಿಸಿದ್ರು. ಮೊದಲ 4 ಪಂದ್ಯಗಳಲ್ಲಿ ಕೆಳ ಕ್ರಮಾಂಕದಲ್ಲಿ ಆಡಿದ್ದ ಮಹಿ, 3ನೇ ಕ್ರಮಾಂಕದಲ್ಲಿ ಮಿಂಚಿದ್ರು. ಅಲ್ಲಿಂದ ಸೀಮಿತ ಓವರ್ಗಳ ಪಂದ್ಯದಲ್ಲಿ ಧೋನಿ ಸ್ಥಾನ ಕನ್ಫರ್ಮ್ ಆಯ್ತು.
ಇಂದು ಸಿಡಿಯುತ್ತಾರಾ ಧೋನಿ..?
ಅದೃಷ್ಟದ ಮೈದಾನದಲ್ಲಿ ಮಹಿ ಇಂದು ಸಿಡಿಯಲೇಬೇಕಿದೆ. ಸರಣಿ ಕೈಚಲ್ಲಿದ್ರೆ ನಾಯಕತ್ವ ಪಟ್ಟ ಅಲುಗಾಡಲಿದೆ. ವೈಯಕ್ತಿಕವಾಗಿಯೂ ಮಿಂಚಬೇಕಿದೆ. ಇದರಿಂದ ಧೋನಿಗೆ ಇಂದು ಮಹತ್ವದ ಪಂದ್ಯ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.