
ಕೋಲ್ಕತಾ(ನ.01): ಇದೇ ತಿಂಗಳ 5ರಂದು ಕತಾರ್ನಲ್ಲಿ ನಡೆಯಲಿರುವ ಎಎಫ್'ಸಿ ಫೈನಲ್ ಪಂದ್ಯವು ತಮ್ಮ ವೃತ್ತಿಜೀವನದ ಮಹತ್ವದ ಪಂದ್ಯವೆಂದು ಬೆಂಗಳೂರು ಫುಟ್ಬಾಲ್ ಕ್ಲಬ್ (ಎಎಫ್'ಸಿ) ತಂಡದ ನಾಯಕ ಸುನಿಲ್ ಛೆಟ್ರಿ ಹೇಳಿದ್ದಾರೆ.
ಇತ್ತೀಚೆಗಷ್ಟೇ ನಡೆದಿದ್ದ ಟೂರ್ನಿಯ ಸೆಮಿಫೈನಲ್ ಪಂದ್ಯಗಳಲ್ಲಿ ಜೊಹರ್ ತಂಡವನ್ನು ಮಣಿಸಿದ್ದ ಬಿಎಫ್'ಸಿ ತಂಡ ಫೈನಲ್ ತಲುಪಿತ್ತಲ್ಲದೆ, ಈ ಸಾಧನೆ ಮಾಡಿದ ಮೊಟ್ಟ ಮೊದಲ ಭಾರತೀಯ ಫುಟ್ಬಾಲ್ ಕ್ಲಬ್ ಎಂಬ ಹಿರಿಮೆ ಗಳಿಸಿದೆ.
ಈ ಬಗ್ಗೆ ಹೇಳಿಕೊಂಡಿರುವ ಛೆಟ್ರಿ, ‘‘ಅಸ್ತಿತ್ವಕ್ಕೆ ಬಂದ ಮೂರೇ ವರ್ಷಗಳಲ್ಲಿ ಬಿಎಫ್'ಸಿ ಮಾಡಿದಂಥ ಸಾಧನೆಯನ್ನು ಈವರೆಗೆ ಯಾವುದೇ ಪುಟ್ಬಾಲ್ ಕ್ಲಬ್ ಮಾಡಿಲ್ಲ. ಹಾಗಾಗಿ, ಎಎಫ್'ಸಿ ಫೈನಲ್ನಲ್ಲಿ ಗೆದ್ದು ಬಿಎಫ್'ಸಿಗೆ ಮತ್ತೊಂದು ಕಿರೀಟ ತರುವ ಆಸೆಯಿದೆ’’ ಎಂದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.