ಇತ್ತೀಚಿನ ದಿನಗಳಲ್ಲಿ ಬೌಲರ್ಸ್ ಮ್ಯಾಚ್ ವಿನ್ನರ್ ಆಗ್ತಿದ್ದಾರೆ. ಅವರೇ ಪ್ರತಿ ಪಂದ್ಯದ ಟ್ರಂಪ್ಕಾರ್ಡ್ಗಳಾಗ್ತಿದ್ದಾರೆ. ಹಾಗಾದ್ರೆ ಬೌಲರ್ಸ್ ಇದ್ದಕ್ಕಿದಂತೆ ಶೈನ್ ಆಗಲು ಕಾರಣವೇನು. ಅವರ ಯಶಸ್ಸಿನ ಗುಟ್ಟೇನು. ಇಲ್ಲಿದೆ ವಿವರ
ಟೀಂ ಇಂಡಿಯಾ ಸ್ಟ್ರೆಂಥ್ ಬ್ಯಾಟಿಂಗ್. ಆದ್ರೆ ಇತ್ತೀಚಿನ ದಿನಗಳಲ್ಲಿ ಬೌಲಿಂಗ್ ಭಾರತೀಯ ಸ್ಟ್ರೆಂಥ್ ಆಗ್ತಿದೆ. ಪಂದ್ಯದ ಗೆಲುವಿನ ರೂವಾರಿಗಳು ಅವರೇ ಆಗ್ತಿದ್ದಾರೆ. ಮ್ಯಾನ್ ಆಫ್ ದ ಮ್ಯಾಚ್ ಮತ್ತು ಮ್ಯಾನ್ ಆಫ್ ದ ಸಿರೀಸ್ ಅವರ ಪಾಲಾಗ್ತಿದೆ. ಪ್ರತಿ ಪಂದ್ಯದಲ್ಲೂ ಅವರ ಕಮಾಲ್ ನಡೆದೇ ಇದೆ. ಭಾರತ ಗೆದ್ದ ಪಂದ್ಯಗಳಲ್ಲಿ ಬ್ಯಾಟ್ಸ್ಮನ್ಗಳಿಗಿಂತ ಬೌಲರ್ಗಳ ಕೊಡುಗೆ ಜಾಸ್ತಿ ಇದೆ. ಸದ್ಯಕ್ಕೆ ಟೀಂ ಇಂಡಿಯಾ ಗೆಲುವಿಗೆ ಬೌಲರ್ಗಳೇ ಕಾರಣಕರ್ತರು. ಪುಣೆ ಪಂದ್ಯವನ್ನೂ ಗೆಲ್ಲಿಸಿದ್ದು ಅದೇ ಬೌಲರ್ಸ್.
ಬೌಲರ್ಗಳ ಯಶಸ್ಸಿನ ಗುಟ್ಟೇನು ಗೊತ್ತಾ..?
ಅಷ್ಟಕ್ಕೂ ಬೌಲರ್'ಗಳ ಯಶಸ್ಸಿನ ಗುಟ್ಟೇನು. ಇಷ್ಟು ದಿನ ವಿಕೆಟ್ ಪಡೆಯಲು ಪರದಾಡುತ್ತಿದ್ದ ಬೌಲರ್ಸ್, ಚಾಂಪಿಯನ್ಸ್ ಟ್ರೋಫಿ ನಂತರ ಹೆಚ್ಚಾಗಿ ವಿಕೆಟ್ಗಳನ್ನ ಪಡೆಯುತ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ಶಿಸ್ತುಬದ್ಧವಾಗಿ ಬೌಲಿಂಗ್ ಮಾಡ್ತಿದ್ದಾರೆ. ಇದಕ್ಕೆ ಕಾರಣ ಬಿಸಿಸಿಐ ಮಾಸ್ಟರ್ ಪ್ಲಾನ್. ಹಾಗಾದ್ರೆ ಟೀಮ್ ಮ್ಯಾನೇಜ್ಮೆಂಟ್ ಮತ್ತು ಸೆಲೆಕ್ಟರ್ಸ್ ಮಾಡ್ತಿರೋ ಪ್ಲಾನ್ ಆದ್ರೂ ಏನು ಗೊತ್ತಾ..?
ರೋಟೇಶನ್ ಪಾಲಿಸಿ ಯಶಸ್ಸಿನ ಗುಟ್ಟು
ಮೂರು ಮಾದರಿ ಕ್ರಿಕೆಟ್ಗೂ ಬೌಲರ್ಗಳು ಬದಲಾಗ್ತಿದ್ದಾರೆ. ಇದೇ ಬೌಲರ್ಗಳ ಯಶಸ್ಸಿನ ಗುಟ್ಟಾಗಿದೆ. ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳಿಗೆ ಬ್ಯಾಟ್ಸ್ಮನ್ಗಳು ಹೆಚ್ಚಾಗಿ ಬದಲಾಗಲ್ಲ. ಆದ್ರೆ ಬೌಲರ್ಸ್ ಪೂರ್ತಿ ಬದಲಾಗುತ್ತಾರೆ. ಬೌಲಿಂಗ್ ಬಲಿಷ್ಠಗೊಳಿಸಬೇಕು ಅನ್ನೋ ಉದ್ದೇಶದಿಂದ ರೋಟೇಶನ್ ಪಾಲಿಸಿ ಮಾಡಲಾಗ್ತಿದೆ. 2019ರ ವಿಶ್ವಕಪ್ ವೇಳೆಗೆ ಬೌಲಿಂಗ್ ವಿಭಾಗ ಬಲಿಷ್ಠಗೊಳಿಸಿ ಟಾಪ್ ಕ್ಲಾಸ್ ಬೌಲರ್ಗಳನ್ನ ಮಹಾ ಟೂರ್ನಿಯಲ್ಲಿ ಆಡಿಸೋ ಪ್ಲಾನ್ನಲ್ಲಿದೆ ಬಿಸಿಸಿಐ. ಹೀಗಾಗಿಯೇ ಪದೇಪದೇ ಬೌಲರ್ಸ್ ಚೇಂಜ್ ಆಗ್ತಿರೋದು.
ಚಹಲ್-ಕುಲ್ದೀಪ್ ಸೀಮಿತ ಓವರ್ಗಳ ಪಂದ್ಯಕ್ಕೆ ಫಿಕ್ಸ್
ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಪಾಕಿಸ್ತಾನ ಬ್ಯಾಟ್ಸ್ಮನ್ಗಳಿಂದ ಭಾರತೀಯ ಬೌಲರ್ಸ್ ಹಿಗ್ಗಾಮುಗ್ಗಿ ದಂಡಿಸಿಕೊಂಡಿದ್ದೇ ಬಂತು, ಟೀಂ ಇಂಡಿಯಾ ಪ್ಲಾನೇ ಚೇಂಜ್ ಆಯ್ತು. ಅಲ್ಲಿಂದ ಡಿಸೈಡ್ ಆಯ್ತು. ಬ್ಯಾಕ್ ಅಪ್ ಬೌಲರ್ಸ್ ಇಟ್ಟುಕೊಳ್ಳಬೇಕು ಅಂತ. ಹೀಗಾಗಿ ಈಗ ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ ಸೀಮಿತ ಓವರ್ಗಳ ಪಂದ್ಯಗಳಿಗೆ ಫಿಕ್ಸ್ ಆಗಿದ್ದಾರೆ. ಅವರಿಬ್ಬರಿಗೆ ಖಾಯಂ ಸ್ಥಾನ. ಕೇವಲ ಒಂಡೇ-ಟಿ20 ಆಡುವ ಈ ಇಬ್ಬರು ಬೌಲರ್ಸ್ ಸದ್ಯಕ್ಕೆ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ.
ಇನ್ನು ಯುಜವೇಂದ್ರ ಚಹಾಲ್ ಮತ್ತು ಕುಲ್ದೀಪ್ ಯಾದವ್ ಸಹ ಸೀಮಿತ ಓವರ್ಗಳಿಗೆ ಫಿಕ್ಸ್ ಆಗಿದ್ದಾರೆ. ಶ್ರೀಲಂಕಾ ಸರಣಿಗೆ ಪ್ರಯೋಗಕ್ಕೆ ಆಡಿಸಲಾಯ್ತು. ಆದ್ರೆ ಅವರು ಕ್ಲಿಕ್ ಆದ್ರು. ಅಲ್ಲಿಂದ ಅವರಿಗೆ ಸೀಮಿತ ಓವರ್ಗಳ ಪಂದ್ಯಗಳಿಗೆ ಸ್ಥಾನ ನೀಡಲಾಗ್ತಿದೆ. ಅವರು ಸಹ ಉತ್ತಮ ಪ್ರದರ್ಶನವನ್ನೇ ನೀಡ್ತಿದ್ದಾರೆ.
ಟೆಸ್ಟ್ ಆಡಲಿದ್ದಾರೆ ಶಮಿ-ಉಮೇಶ್
ಈಗಾಗಲೇ ಮೂರು ಮಾದರಿ ಕ್ರಿಕೆಟ್ನಲ್ಲಿ ಬೆಸ್ಟ್ ಬೌಲರ್ ಎನಿಸಿಕೊಂಡಿರುವ ಮೊಹಮ್ಮದ್ ಶಮಿ, ಉಮೇಶ್ ಯಾದವ್, ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಸದ್ಯ ಸೀಮಿತ ಓವರ್ಗಳ ಪಂದ್ಯಗಳನ್ನ ಆಡ್ತಿಲ್ಲ. ಅವರು ಕೇವಲ ಟೆಸ್ಟ್ ಪಂದ್ಯಗಳಿಗೆ ಫಿಕ್ಸ್ ಆಗಿದ್ದಾರೆ. ಈ ನಾಲ್ವರು ತಾವೇನು ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಇವರು ಯಾವಾಗ ಬೇಕಾದ್ರೂ ಸೀಮಿತ ಓವರ್ಗಳ ಪಂದ್ಯಗಳಿಗೆ ಸೆಲೆಕ್ಟ್ ಆಗ್ಬಹುದು. ಆದ್ರೆ ಸದ್ಯಕ್ಕೆ ಅವರು ಕೇವಲ ಟೆಸ್ಟ್ಗೆ ಸೀಮಿತವಾಗಿದ್ದಾರೆ ಅಷ್ಟೇ.
ವಿಶ್ವಕಪ್'ಗೆ ಬೆಸ್ಟ್ ಬೌಲರ್ಸ್ ಸೆಲೆಕ್ಟ್
ಸದ್ಯ ಬೆಸ್ಟ್ ಬೌಲರ್ಗಳ ದಂಡೇ ಟೀಂ ಇಂಡಿಯಾದಲ್ಲಿದೆ. ಆದ್ರೆ 2019ರ ವಿಶ್ವಕಪ್ ಇವರಲ್ಲಿ ಯಾರು ಬೆಸ್ಟ್ ಅನ್ನೋದು ಗೊತ್ತಾಗಲಿದೆ. ಅಂತ ಬೌಲರ್ಗಳು ಮಾತ್ರ ವರ್ಲ್ಡ್ಕಪ್ಗೆ ಸೆಲೆಕ್ಟ್ ಮಾಡಲಾಗುತ್ತೆ. ಅಲ್ಲಿಯವರೆಗೂ ಈ ರೊಟೇಶನ್ ಪಾಲಿಸಿ ಮುಂದುವರೆಯುತ್ತೆ. ಯಾರ ಸ್ಥಾನವೂ ತಂಡದಲ್ಲಿ ಖಾಯಂ ಇಲ್ಲ. ಹೀಗಾಗಿ ಟೀಮ್ನಿಂದ ಯಾರು ಡ್ರಾಪ್ ಆದ್ರು ಬೇಸರಪಟ್ಟುಕೊಳ್ಳೋ ಅವಶ್ಯಕತೆ ಇಲ್ಲ.