ಬೌಲರ್ಸ್ ಮ್ಯಾಚ್ ವಿನ್ನರ್ಸ್ ಆಗಿದ್ದೇಗೆ..?: ಬಯಲಾಯ್ತು ಬಿಸಿಸಿಐ ಪ್ಲಾನ್!

Published : Oct 28, 2017, 03:17 PM ISTUpdated : Apr 11, 2018, 01:06 PM IST
ಬೌಲರ್ಸ್ ಮ್ಯಾಚ್ ವಿನ್ನರ್ಸ್ ಆಗಿದ್ದೇಗೆ..?: ಬಯಲಾಯ್ತು ಬಿಸಿಸಿಐ ಪ್ಲಾನ್!

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಬೌಲರ್ಸ್ ಮ್ಯಾಚ್ ವಿನ್ನರ್​ ಆಗ್ತಿದ್ದಾರೆ. ಅವರೇ ಪ್ರತಿ ಪಂದ್ಯದ ಟ್ರಂಪ್​ಕಾರ್ಡ್​ಗಳಾಗ್ತಿದ್ದಾರೆ. ಹಾಗಾದ್ರೆ ಬೌಲರ್ಸ್​ ಇದ್ದಕ್ಕಿದಂತೆ ಶೈನ್ ಆಗಲು ಕಾರಣವೇನು. ಅವರ ಯಶಸ್ಸಿನ ಗುಟ್ಟೇನು. ಇಲ್ಲಿದೆ ವಿವರ

ಟೀಂ  ಇಂಡಿಯಾ ಸ್ಟ್ರೆಂಥ್ ಬ್ಯಾಟಿಂಗ್. ಆದ್ರೆ ಇತ್ತೀಚಿನ ದಿನಗಳಲ್ಲಿ ಬೌಲಿಂಗ್ ಭಾರತೀಯ ಸ್ಟ್ರೆಂಥ್ ಆಗ್ತಿದೆ. ಪಂದ್ಯದ ಗೆಲುವಿನ ರೂವಾರಿಗಳು ಅವರೇ ಆಗ್ತಿದ್ದಾರೆ. ಮ್ಯಾನ್ ಆಫ್ ದ ಮ್ಯಾಚ್​ ಮತ್ತು ಮ್ಯಾನ್ ಆಫ್ ದ ಸಿರೀಸ್ ಅವರ ಪಾಲಾಗ್ತಿದೆ. ಪ್ರತಿ ಪಂದ್ಯದಲ್ಲೂ ಅವರ ಕಮಾಲ್ ನಡೆದೇ ಇದೆ. ಭಾರತ ಗೆದ್ದ ಪಂದ್ಯಗಳಲ್ಲಿ ಬ್ಯಾಟ್ಸ್​​ಮನ್​ಗಳಿಗಿಂತ ಬೌಲರ್​ಗಳ ಕೊಡುಗೆ ಜಾಸ್ತಿ ಇದೆ. ಸದ್ಯಕ್ಕೆ ಟೀಂ ಇಂಡಿಯಾ ಗೆಲುವಿಗೆ ಬೌಲರ್​ಗಳೇ ಕಾರಣಕರ್ತರು. ಪುಣೆ ಪಂದ್ಯವನ್ನೂ ಗೆಲ್ಲಿಸಿದ್ದು ಅದೇ ಬೌಲರ್ಸ್​.

ಬೌಲರ್​ಗಳ ಯಶಸ್ಸಿನ ಗುಟ್ಟೇನು ಗೊತ್ತಾ..?

ಅಷ್ಟಕ್ಕೂ ಬೌಲರ್'​ಗಳ ಯಶಸ್ಸಿನ ಗುಟ್ಟೇನು. ಇಷ್ಟು ದಿನ ವಿಕೆಟ್ ಪಡೆಯಲು ಪರದಾಡುತ್ತಿದ್ದ ಬೌಲರ್ಸ್​, ಚಾಂಪಿಯನ್ಸ್ ಟ್ರೋಫಿ ನಂತರ ಹೆಚ್ಚಾಗಿ ವಿಕೆಟ್​ಗಳನ್ನ ಪಡೆಯುತ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ಶಿಸ್ತುಬದ್ಧವಾಗಿ ಬೌಲಿಂಗ್ ಮಾಡ್ತಿದ್ದಾರೆ. ಇದಕ್ಕೆ ಕಾರಣ ಬಿಸಿಸಿಐ ಮಾಸ್ಟರ್ ಪ್ಲಾನ್. ಹಾಗಾದ್ರೆ ಟೀಮ್ ಮ್ಯಾನೇಜ್​ಮೆಂಟ್ ಮತ್ತು ಸೆಲೆಕ್ಟರ್ಸ್ ಮಾಡ್ತಿರೋ ಪ್ಲಾನ್ ಆದ್ರೂ ಏನು ಗೊತ್ತಾ..?

ರೋಟೇಶನ್ ಪಾಲಿಸಿ ಯಶಸ್ಸಿನ ಗುಟ್ಟು

ಮೂರು ಮಾದರಿ ಕ್ರಿಕೆಟ್​ಗೂ ಬೌಲರ್​ಗಳು ಬದಲಾಗ್ತಿದ್ದಾರೆ. ಇದೇ ಬೌಲರ್​ಗಳ ಯಶಸ್ಸಿನ ಗುಟ್ಟಾಗಿದೆ. ಟೆಸ್ಟ್​, ಏಕದಿನ ಮತ್ತು ಟಿ20 ಪಂದ್ಯಗಳಿಗೆ ಬ್ಯಾಟ್ಸ್​ಮನ್​ಗಳು ಹೆಚ್ಚಾಗಿ ಬದಲಾಗಲ್ಲ. ಆದ್ರೆ ಬೌಲರ್ಸ್ ಪೂರ್ತಿ ಬದಲಾಗುತ್ತಾರೆ. ಬೌಲಿಂಗ್ ಬಲಿಷ್ಠಗೊಳಿಸಬೇಕು ಅನ್ನೋ ಉದ್ದೇಶದಿಂದ ರೋಟೇಶನ್ ಪಾಲಿಸಿ ಮಾಡಲಾಗ್ತಿದೆ. 2019ರ ವಿಶ್ವಕಪ್ ವೇಳೆಗೆ ಬೌಲಿಂಗ್ ವಿಭಾಗ ಬಲಿಷ್ಠಗೊಳಿಸಿ ಟಾಪ್ ಕ್ಲಾಸ್ ಬೌಲರ್​ಗಳನ್ನ ಮಹಾ ಟೂರ್ನಿಯಲ್ಲಿ ಆಡಿಸೋ ಪ್ಲಾನ್​ನಲ್ಲಿದೆ ಬಿಸಿಸಿಐ. ಹೀಗಾಗಿಯೇ ಪದೇಪದೇ ಬೌಲರ್ಸ್ ಚೇಂಜ್ ಆಗ್ತಿರೋದು.

ಚಹಲ್​-ಕುಲ್​ದೀಪ್ ಸೀಮಿತ ಓವರ್​​​​​​​​​​​​​​​​​ಗಳ ಪಂದ್ಯಕ್ಕೆ ಫಿಕ್ಸ್

ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ಪಾಕಿಸ್ತಾನ ಬ್ಯಾಟ್ಸ್​ಮನ್​ಗಳಿಂದ ಭಾರತೀಯ ಬೌಲರ್ಸ್​ ಹಿಗ್ಗಾಮುಗ್ಗಿ ದಂಡಿಸಿಕೊಂಡಿದ್ದೇ ಬಂತು, ಟೀಂ  ಇಂಡಿಯಾ ಪ್ಲಾನೇ ಚೇಂಜ್ ಆಯ್ತು. ಅಲ್ಲಿಂದ ಡಿಸೈಡ್ ಆಯ್ತು. ಬ್ಯಾಕ್ ಅಪ್ ಬೌಲರ್ಸ್​ ಇಟ್ಟುಕೊಳ್ಳಬೇಕು ಅಂತ. ಹೀಗಾಗಿ ಈಗ ಭುವನೇಶ್ವರ್ ಕುಮಾರ್ ಮತ್ತು ಜಸ್​ಪ್ರೀತ್ ಬುಮ್ರಾ ಸೀಮಿತ ಓವರ್​ಗಳ ಪಂದ್ಯಗಳಿಗೆ ಫಿಕ್ಸ್​ ಆಗಿದ್ದಾರೆ. ಅವರಿಬ್ಬರಿಗೆ ಖಾಯಂ ಸ್ಥಾನ. ಕೇವಲ ಒಂಡೇ-ಟಿ20 ಆಡುವ ಈ ಇಬ್ಬರು ಬೌಲರ್ಸ್ ಸದ್ಯಕ್ಕೆ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ.

ಇನ್ನು ಯುಜವೇಂದ್ರ ಚಹಾಲ್ ಮತ್ತು ಕುಲ್​ದೀಪ್ ಯಾದವ್ ಸಹ ಸೀಮಿತ ಓವರ್​ಗಳಿಗೆ ಫಿಕ್ಸ್ ಆಗಿದ್ದಾರೆ. ಶ್ರೀಲಂಕಾ ಸರಣಿಗೆ ಪ್ರಯೋಗಕ್ಕೆ ಆಡಿಸಲಾಯ್ತು. ಆದ್ರೆ ಅವರು ಕ್ಲಿಕ್ ಆದ್ರು. ಅಲ್ಲಿಂದ ಅವರಿಗೆ ಸೀಮಿತ ಓವರ್​ಗಳ ಪಂದ್ಯಗಳಿಗೆ ಸ್ಥಾನ ನೀಡಲಾಗ್ತಿದೆ. ಅವರು ಸಹ ಉತ್ತಮ ಪ್ರದರ್ಶನವನ್ನೇ ನೀಡ್ತಿದ್ದಾರೆ.

ಟೆಸ್ಟ್ ಆಡಲಿದ್ದಾರೆ ಶಮಿ-ಉಮೇಶ್

ಈಗಾಗಲೇ ಮೂರು ಮಾದರಿ ಕ್ರಿಕೆಟ್​ನಲ್ಲಿ ಬೆಸ್ಟ್ ಬೌಲರ್​ ಎನಿಸಿಕೊಂಡಿರುವ ಮೊಹಮ್ಮದ್ ಶಮಿ, ಉಮೇಶ್ ಯಾದವ್, ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಸದ್ಯ ಸೀಮಿತ ಓವರ್​ಗಳ ಪಂದ್ಯಗಳನ್ನ ಆಡ್ತಿಲ್ಲ. ಅವರು ಕೇವಲ ಟೆಸ್ಟ್​ ಪಂದ್ಯಗಳಿಗೆ ಫಿಕ್ಸ್ ಆಗಿದ್ದಾರೆ. ಈ ನಾಲ್ವರು ತಾವೇನು ಅನ್ನೋದನ್ನ ಪ್ರೂವ್ ಮಾಡಿದ್ದಾರೆ. ಇವರು ಯಾವಾಗ ಬೇಕಾದ್ರೂ ಸೀಮಿತ ಓವರ್​ಗಳ ಪಂದ್ಯಗಳಿಗೆ ಸೆಲೆಕ್ಟ್ ಆಗ್ಬಹುದು. ಆದ್ರೆ ಸದ್ಯಕ್ಕೆ ಅವರು ಕೇವಲ ಟೆಸ್ಟ್​ಗೆ ಸೀಮಿತವಾಗಿದ್ದಾರೆ ಅಷ್ಟೇ.

ವಿಶ್ವಕಪ್'​ಗೆ ಬೆಸ್ಟ್​ ಬೌಲರ್ಸ್​ ಸೆಲೆಕ್ಟ್

ಸದ್ಯ ಬೆಸ್ಟ್​ ಬೌಲರ್​ಗಳ ದಂಡೇ ಟೀಂ ಇಂಡಿಯಾದಲ್ಲಿದೆ. ಆದ್ರೆ 2019ರ ವಿಶ್ವಕಪ್​​​​​​​​​​​​​ ಇವರಲ್ಲಿ ಯಾರು ಬೆಸ್ಟ್​ ಅನ್ನೋದು ಗೊತ್ತಾಗಲಿದೆ. ಅಂತ ಬೌಲರ್​ಗಳು ಮಾತ್ರ ವರ್ಲ್ಡ್​ಕಪ್​​ಗೆ ಸೆಲೆಕ್ಟ್ ಮಾಡಲಾಗುತ್ತೆ. ಅಲ್ಲಿಯವರೆಗೂ ಈ ರೊಟೇಶನ್ ಪಾಲಿಸಿ ಮುಂದುವರೆಯುತ್ತೆ. ಯಾರ ಸ್ಥಾನವೂ ತಂಡದಲ್ಲಿ ಖಾಯಂ ಇಲ್ಲ. ಹೀಗಾಗಿ ಟೀಮ್​ನಿಂದ ಯಾರು ಡ್ರಾಪ್ ಆದ್ರು ಬೇಸರಪಟ್ಟುಕೊಳ್ಳೋ ಅವಶ್ಯಕತೆ ಇಲ್ಲ.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್‌-19 ಏಷ್ಯಾಕಪ್‌: ಪಾಕ್‌ನ ಮೊಹ್ಸಿನ್ ನಖ್ವಿಯಿಂದ ಪದಕ ಸ್ವೀಕರಿಸದ ಭಾರತ ತಂಡ!
'ಕುಸಿದು ಹೋಗಿದ್ದೆ, ನಾನ್ಯಾವತ್ತೂ ಕ್ರಿಕೆಟ್ ಆಡಬಾರದು ಅಂದುಕೊಂಡಿದ್ದೆ: ಆ ನೋವು ಇನ್ನೂ ಮರೆತಿಲ್ಲ ಎಂದ ರೋಹಿತ್ ಶರ್ಮಾ!