ವೀರೂ ಸಾಧನೆಗೆ ಮತ್ತೊಂದು ಗರಿ; ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಲಿದೆ ಡಿಡಿಸಿಎಯ ಈ ನಡೆ

Published : Oct 31, 2017, 04:47 PM ISTUpdated : Apr 11, 2018, 12:34 PM IST
ವೀರೂ ಸಾಧನೆಗೆ ಮತ್ತೊಂದು ಗರಿ; ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಲಿದೆ ಡಿಡಿಸಿಎಯ ಈ ನಡೆ

ಸಾರಾಂಶ

ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದ ಗೇಟ್ ನಂ.2ಕ್ಕೆ ಲೋಕಲ್ ಹೀರೋ ವಿರೇಂದ್ರ ಸೆಹ್ವಾಗ್ ಹೆಸರಿಡಲಾಗಿದ್ದು, ಸ್ವತಃ ಸೆಹ್ವಾಗ್ ಅದನ್ನು ಉದ್ಘಾಟಿಸಿದರು.

ನವದೆಹಲಿ(ಅ.31): ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸಾಧನೆಗೆ ಮತ್ತೊಂದು ಗರಿ ಸಿಕ್ಕಂತಾಗಿದೆ.

ಹೌದು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದ ಗೇಟ್ ನಂ.2ಕ್ಕೆ ಲೋಕಲ್ ಹೀರೋ ವಿರೇಂದ್ರ ಸೆಹ್ವಾಗ್ ಹೆಸರಿಡಲಾಗಿದ್ದು, ಸ್ವತಃ ಸೆಹ್ವಾಗ್ ಅದನ್ನು ಉದ್ಘಾಟಿಸಿದರು. ಡೆಲ್ಲಿ ಕ್ರಿಕೆಟ್ ಅಸೋಸಿಯೇಶನ್(ಡಿಡಿಸಿಎ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸೆಹ್ವಾಗ್, ಕ್ರೀಡಾಂಗಣದ ಗೇಟ್, ಡ್ರೆಸ್ಸಿಂಗ್ ಕೊಠಡಿ, ಸ್ಟ್ಯಾಂಡ್ಸ್'ಗಳಿಗೆ ನನ್ನಂತಹ ಮಾಜಿ ಕ್ರಿಕೆಟಿಗರ ಹೆಸರಿಡುವುದು ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಲಿದೆ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಸಂದರ್ಭದಲ್ಲಿ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಸೇರಿದಂತೆ, ಭಾರತ ತಂಡದ ಮಾಜಿ ಹಾಗೂ ಹಾಲಿ ಆಟಗಾರರು ಹಾಜರಿದ್ದರು.

ವಿರೇಂದ್ರ ಸೆಹ್ವಾಗ್ ಭಾರತ ಪರ ಟೆಸ್ಟ್ ಕ್ರಿಕೆಟ್'ನಲ್ಲಿ 2 ತ್ರಿಶತಕ ಸಿಡಿಸಿದ ಆಟಗಾರ ಎನ್ನುವ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಆದರೆ ಡೆಲ್ಲಿ ಕ್ರಿಕೆಟ್ ಸಂಸ್ಥೆ ಟೆಸ್ಟ್ ಕ್ರಿಕೆಟ್'ನಲ್ಲಿ ತ್ರಿಶತಕ ಸಿಡಿಸಿದ ಏಕೈಕ ಭಾರತೀಯ ಬ್ಯಾಟ್ಸ್'ಮನ್ ಎಂದು ಬರೆಯುವ ಮೂಲಕ ಕನ್ನಡಿಗ ಕರುಣ್ ನಾಯರ್ ಸಾಧನೆಯನ್ನು ಮರೆತಿದೆ.

ಆದರೆ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಆಟಗಾರ ಕರುಣ್ ನಾಯರ್ ತ್ರಿಶತಕ ಬಾರಿಸಿದ್ದನ್ನು ಡಿಡಿಸಿಎ ಮರೆತಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

RCB ಇವತ್ತು ರೆಡ್ ಜೆರ್ಸಿ ಬಿಟ್ಟು ಗ್ರೀನ್ ಜೆರ್ಸಿ ತೊಟ್ಟು ಕಣಕ್ಕಿಳಿದಿದ್ದೇಕೆ? ಗ್ರೀನ್ ಜೆರ್ಸಿ ಸ್ಪೆಷಾಲಿಟಿ ಏನು ಗೊತ್ತಾ?
ಆಗ ಬಾಲಿವುಡ್​ ನಟಿ, ಈಗ ಜರ್ಮನ್​ ಬ್ಯೂಟಿ: ವಿರಾಟ್​ ಕೊಹ್ಲಿ ರಾತ್ರಿಯ 'Like' ಸೃಷ್ಟಿಸಿದೆ ಹಲ್​ಚಲ್​