ಚೆನ್ನೈ ಟೆಸ್ಟ್`ನಲ್ಲಿ ಭಾರತದ ದಿಗ್ವಿಜಯ: 4-0 ಅಂತರದಿಂದ ಸರಣಿ ಜಯ

Published : Dec 19, 2016, 12:28 PM ISTUpdated : Apr 11, 2018, 01:04 PM IST
ಚೆನ್ನೈ ಟೆಸ್ಟ್`ನಲ್ಲಿ ಭಾರತದ ದಿಗ್ವಿಜಯ: 4-0 ಅಂತರದಿಂದ ಸರಣಿ ಜಯ

ಸಾರಾಂಶ

ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5ನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇನ್ನಿಂಗ್ಸ್ ಮತ್ತು 75 ರನ್`ಗಳ ಅದ್ಬುತ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ತಂಡ 5 ಪಂದ್ಯಗಳ ಟೆಸ್ಟ್ ಸರಣಿಯನ್ನ 4-0 ಅಂತರದಿಂದ ಗೆದ್ದುಕೊಂಡಿದೆ.

ಚೆನ್ನೈ(ಡಿ.20): ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 5ನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಇನ್ನಿಂಗ್ಸ್ ಮತ್ತು 75 ರನ್`ಗಳ ಅದ್ಬುತ ಗೆಲುವು ಸಾಧಿಸಿದೆ. ಈ ಮೂಲಕ ಭಾರತ ತಂಡ 5 ಪಂದ್ಯಗಳ ಟೆಸ್ಟ್ ಸರಣಿಯನ್ನ 4-0 ಅಂತರದಿಂದ ಗೆದ್ದುಕೊಂಡಿದೆ. ಮೊದಲ ಇನ್ನಿಂಗ್ಸ್`ನಲ್ಲಿ ಟೀಮ್ ಇಂಡಿಯಾ ಪಡೆದಿದ್ದ 282 ರನ್`ಗಳ ಲೀಡ್ ಮೀರಲೂ ಇಂಗ್ಲೆಂಡ್ ಬ್ಯಾಟ್ಸ್`ಮನ್`ಗಳಿಗೆ ಸಾಧ್ಯವಾಗಲಿಲ್ಲ. 7 ವಿಕೆಟ್ ಕಬಳಿಸಿದ ರವೀಂದ್ರ ಜಡೇಜಾ ಗೆಲುವಿನ ರೂವಾರಿಯಾದರು.

ಭಾರತದ 282 ರನ್`ಗಳ ಲೀಡ್`ಗೆ ಪ್ರತಿಯಾಗಿ 2ನೇ ಇನ್ನಿಂಗ್ಸ್ ಬ್ಯಾಂಟಿಂಗ್ ಆರಂಭಿಸಿದ ಇಂಗ್ಲೆಂಡ್ ಉತ್ತಮ ಆರಂಭವನ್ನೇ ಪಡೆಯಿತು. ಕ್ಯಾಚ್ ಡ್ರಾಪ್ ಮಾಡಿದ ಲಾಭವನ್ನ ಬಳಸಿಕೊಂಡ ನಾಯಕ ಅಲಿಸ್ಟರ್ ಕುಕ್  49 ರನ್ ಗಳಿಸಿದರೆ, ಜೆನ್ನಿಂಗ್ಸ್ 54 ರನ್ ಸಿಡಿಸಿದರು. ಇವರಿಬ್ಬರ ನಿರ್ಗಮನದ ಬಳಿಕ ಇಂಗ್ಲೆಂಡ್`ನ ಪತನ ಆರಂಭವಾಯಿತು.ಭಾರತದ ಬೌಲಿಂಗ್ ದಾಳಿ ಎದುರು ಆಂಗ್ಲರು ಪರದಾಡಿದರು.

ಭೋಜನ ವಿರಾಮದ ಬಳಿಕ ದಿಕ್ಕು ಬದಲಿಸಿದ ಜಡೇಜಾ: ಭೋಜನ ವಿರಾಮಕ್ಕೂ ಮುನ್ನ ಇಂಗ್ಲೆಂಡ್ 4 ವಿಕೆಟ್`ಗಳನ್ನಷ್ಟೇ ಕಳೆದುಕೊಂಡಿತ್ತು. ಭೋಜನದ ಬಳಿಕ ಫ್ಲಾಟ್ ಪಿಚ್`ನಲ್ಲೂ ರವೀಂದ್ರ ಜಡೇಜಾರ ಸ್ಪಿನ್ ದಾಳಿಗೆ ಆಂಗ್ಲರ ಬಳಿ ಉತ್ತರವೇ ಇರಲಿಲ್ಲ. ಉತ್ತಮ ಬೌಲಿಂಗ್ ಪ್ರದರ್ಶಿಸಿದ ಜಡೇಜಾ ಡ್ರಾ ಎನ್ನಲಾಗುತ್ತಿದ್ದ ಪಂದ್ಯವನ್ನ ಗೆಲುವಿನ ಟ್ರ್ಯಾಕ್`ಗೆ ತಂದು ನಿಲ್ಲಿಸಿದರು. ಕೇವಲ 48 ರನ್ ನೀಡಿ 7 ವಿಕೆಟ್ ಉರುಳಿಸಿದ ಜಡೇಜಾ ಗೆಲುವಿನ ರೂವಾರಿಯಾದರು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್: 477 ಮತ್ತು 207

ಭಾರತ 759/7 ಡಿಕ್ಲೇರ್

ಬ್ಯಾಟಿಂಗ್:

ಕೆ.ಎಲ್. ರಾಹುಲ್ - 199 ರನ್

ಕರುಣ್ ನಾಯರ್ - ಅಜೇಯ 303 ರನ್

ಬೌಲಿಂಗ್:

ರವೀಂದ್ರ ಜಡೇಜಾ - 48/7

ಫಲಿತಾಂಶ: ಭಾರತಕ್ಕೆ ಇನ್ನಿಂಗಸ್್ ಮತ್ತು 75 ರನ್ ಜಯ

 

 

.  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?