ಚೆಂಡು ವಿರೂಪ ಪ್ರಕರಣ: ಕೊನೆಗೂ ತುಟಿಬಿಚ್ಚಿದ ಕೋಚ್ ಲೆಹಮಾನ್ ಹೇಳಿದ್ದೇನು..?

By Suvarna Web DeskFirst Published Mar 28, 2018, 10:10 PM IST
Highlights

ಈ ಮೂರು ಕ್ರಿಕೆಟಿಗರು ದೊಡ್ಡ ತಪ್ಪು ಮಾಡಿದ್ದಾರೆ. ಆದರೆ ಅವರು ಕೆಟ್ಟವರಲ್ಲ. ಮಾನವೀಯ ದೃಷ್ಟಿಯಿಂದ ನೋಡಿದರೆ, ಅಭಿಮಾನಿಗಳು ಇನ್ನೊಂದು ಅವಕಾಶ ಮಾಡಿಕೊಡಬೇಕು ಎಂದು ಲೆಹಮಾನ್ ಹೇಳಿದ್ದಾರೆ.  

ಸಿಡ್ನಿ(ಮಾ.28): ಚೆಂಡು ವಿರೂಪಗೊಳಿಸಿದ ಪ್ರಕರಣದ ಬಗ್ಗೆ ಆಸ್ಟ್ರೇಲಿಯಾ ಕೋಚ್ ಡೇರನ್ ಲೆಹಮಾನ್ ಕೊನೆಗೂ ತುಟಿ ಬಿಚ್ಚಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ವೇಳೆ ಆಸೀಸ್ ನಾಯಕ ಸ್ಟೀವ್ ಸ್ಮಿತ್, ಉಪನಾಯಕ ಡೇವಿಡ್ ವಾರ್ನರ್ ಹಾಗೂ ಕ್ಯಾಮರೋನ್ ಬೆನ್'ಕ್ರಾಪ್ಟ್ ಬಾಲ್ ಟ್ಯಾಂಪರಿಂಗ್ ಮಾಡುವ ವೇಳೆ ಸಿಕ್ಕಿಬಿದ್ದಿದ್ದರು. ಆ ಬಳಿಕ ವಿಚಾರಣೆ ನಡೆಸಿದ ಕ್ರಿಕೆಟ್ ಆಸ್ಟ್ರೇಲಿಯಾ ಸ್ಮಿತ್ ಹಾಗೂ ವಾರ್ನರ್'ಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ಬೆನ್'ಕ್ರಾಪ್ಟ್'ಗೆ 9 ತಿಂಗಳು ನಿಷೇಧ ವಿಧಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಲೆಹಮಾನ್, ಮೂರು ಆಟಗಾರರು ದೊಡ್ಡ ತಪ್ಪು ಮಾಡಿರಬಹುದು, ಆದರೆ ಅವರಿಗೆ ತಪ್ಪು ತಿದ್ದಿಕೊಳ್ಳಲು ಮತ್ತೊಂದು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

ಈ ಮೂರು ಕ್ರಿಕೆಟಿಗರು ದೊಡ್ಡ ತಪ್ಪು ಮಾಡಿದ್ದಾರೆ. ಆದರೆ ಅವರು ಕೆಟ್ಟವರಲ್ಲ. ಮಾನವೀಯ ದೃಷ್ಟಿಯಿಂದ ನೋಡಿದರೆ, ಅಭಿಮಾನಿಗಳು ಇನ್ನೊಂದು ಅವಕಾಶ ಮಾಡಿಕೊಡಬೇಕು ಎಂದು ಲೆಹಮಾನ್ ಹೇಳಿದ್ದಾರೆ.  

click me!