
ಸಿಡ್ನಿ(ಮಾ.29): ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವರ್ಷ ನಿಷೇಧದ ಶಿಕ್ಷೆಗೆ ಗುರಿಯಾಗಿರುವ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಕೊನೆಗೂ ಮೌನ ಮುರಿದಿದ್ದು, ಸುದ್ದಿಗೋಷ್ಠಿಯಲ್ಲೇ ಮಾಡಿದ ತಪ್ಪಿಗೆ ಕಣ್ಣೀರಿಟ್ಟಿದ್ದಾರೆ.
ನಾನು ಯಾರೊಬ್ಬರನ್ನು ದೂಷಿಸುವುದಿಲ್ಲ. ಕಳೆದ ಶನಿವಾರ ನಡೆದ ಘಟನೆಯ ಕುರಿತಂತೆ ಆಸ್ಟ್ರೇಲಿಯಾ ತಂಡದ ನಾಯಕನಾಗಿ ಎಲ್ಲಾ ಹೊಣೆಹೊರುತ್ತೇನೆ. ಇದು ನನ್ನ ನಾಯಕತ್ವದ ಅತಿ ದೊಡ್ಡ ಪ್ರಮಾದ ಎಂದು ಸ್ಮಿತ್ ಹೇಳಿದ್ದಾರೆ.
ಇದನ್ನು ನೋಡಿ: ಸ್ಟೀವ್ ಸ್ಮಿತ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು ಹೀಗೆ....
ಕ್ರಿಕೆಟ್ ಜಗತ್ತಿನ ಶ್ರೇಷ್ಠ ಕ್ರೀಡೆ. ಕ್ರಿಕೆಟ್ ನನ್ನೆಲ್ಲ ಜಗತ್ತು, ನಾನು ಮತ್ತೆ ಕಮ್'ಬ್ಯಾಕ್ ಮಾಡುತ್ತೇನೆ. ನನ್ನನ್ನು ಕ್ಷಮಿಸಿ ಎಂದು ಅಭಿಮಾನಿಗಳ ಕ್ಷಮೆ ಕೋರಿದ್ದಾರೆ.
ಒಂದಂತೂ ಸತ್ಯ, ಈ ಘಟನೆ ಬೇರೆಯವರಿಗೆ ಒಂದು ಪಾಠವಾಗಲಿದೆ, ನಾನು ಇದರಿಂದ ಪಾಠ ಕಲಿತಿದ್ದು, ಮುಂದಿನ ದಿನಗಳಲ್ಲಿ ಕಳೆದುಕೊಂಡ ಗೌರವವನ್ನು ಮರಳಿ ಪಡೆಯುತ್ತೇನೆ ಎಂದು ಸ್ಮಿತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.