ಭೀಕರ ಭಯೋತ್ಪಾದಕರ ದಾಳಿ ಮರೆತು ಮತ್ತೆ ಲಂಕಾ ತಂಡದಿಂದ ಪಾಕ್ ಪ್ರವಾಸ!

Published : Aug 24, 2019, 10:56 AM IST
ಭೀಕರ ಭಯೋತ್ಪಾದಕರ ದಾಳಿ ಮರೆತು ಮತ್ತೆ ಲಂಕಾ ತಂಡದಿಂದ ಪಾಕ್ ಪ್ರವಾಸ!

ಸಾರಾಂಶ

ಪಾಕಿಸ್ತಾನ ಭಯೋತ್ಪಾದಕರ ಭೀಕರ ದಾಳಿ, ಮೈದಾನದಲ್ಲೇ ಗುಂಡಿನ ಮೊರೆತದ ಶಬ್ಧ ಶ್ರೀಲಂಕಾ ಆಟಗಾರರಿಗೆ ಇನ್ನೂ ಹಸಿಹಸಿಯಾಗಿದೆ.  ಇದೀಗ ಈ ಕಹಿ ಘಟನೆಯನ್ನು ಮರೆತು ಶ್ರೀಲಂಕಾ ತಂಡ ಮತ್ತೆ ಪಾಕಿಸ್ತಾನ ಪ್ರವಾಸಕ್ಕೆ ಒಪ್ಪಿಕೊಂಡಿದೆ.  

ಕರಾ​ಚಿ(ಆ.24): ಪಾಕಿ​ಸ್ತಾನಕ್ಕೆ ನಿಧಾ​ನ​ವಾಗಿ ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ವಾಪ​ಸಾ​ಗು​ತ್ತಿದೆ. ಭಯೋತ್ಪಾದಕರ ದಾಳಿಯಿಂದ ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿ ಸಂಪೂರ್ಣ ನಿಂತು ಹೋಗಿತ್ತು. ಇದೀಗ ಚೇತರಿಸಿಕೊಂಡಿರುವ ಪಾಕ್, ಪ್ರತಿ ತಂಡಕ್ಕೂ ಆಹ್ವಾನ ನೀಡುತ್ತಿದೆ. ಆದರೆ ಹಲವು ತಂಡಗಳು ನಿರಾಕರಿಸಿದರೆ, ಶ್ರೀಲಂಕಾ ಪ್ರವಾಸಕ್ಕೆ ಮುಂದಾಗಿದೆ. ಮುಂದಿನ ತಿಂಗಳು 3 ಪಂದ್ಯಗಳ ಟಿ20, 3 ಪಂದ್ಯ​ಗಳ ಏಕ​ದಿನ ಸರ​ಣಿ​ಯ​ನ್ನಾ​ಡಲು ಪಾಕಿ​ಸ್ತಾನಕ್ಕೆ ತೆರ​ಳಲು ಶ್ರೀಲಂಕಾ ಒಪ್ಪಿ​ಕೊಂಡಿದೆ. 

ಇದನ್ನೂ ಓದಿ: ಲಂಕಾ ಅಭಿಮಾನಿಗಳ ಹೃದಯ ಗೆದ್ದ ಕೇನ್ ವಿಲಿಯಮ್ಸನ್!

ಸೆ.27ರಿಂದ-ಅ.2ರ ವರೆಗೂ ಕರಾ​ಚಿ​ಯಲ್ಲಿ ಏಕ​ದಿನ ಸರ​ಣಿ ನಡೆ​ಯ​ಲಿದ್ದು, ಅ.5ರಿಂದ ಅ.9ರ ವರೆಗೂ ಲಾಹೋರ್‌ನಲ್ಲಿ ಟಿ20 ಸರಣಿ ನಡೆ​ಯ​ಲಿದೆ. 2009ರಲ್ಲಿ ತನ್ನ ಆಟ​ಗಾ​ರರ ಮೇಲೆ ಭಯೋ​ತ್ಪಾ​ದ​ಕರ ದಾಳಿ ನಡೆದ ಬಳಿಕ 8 ವರ್ಷಗಳ ಕಾಲ ಲಂಕಾ, ಪಾಕಿ​ಸ್ತಾ​ನಕ್ಕೆ ತೆರ​ಳಿ​ರ​ಲಿಲ್ಲ. ಅಲ್ಲಿ ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಂಪೂರ್ಣವಾಗಿ ನಿಂತು ಹೋಗಿತ್ತು. 2017ರಲ್ಲಿ ಲಂಕಾ ಟಿ20 ಸರಣಿ ಆಡಲು ಪಾಕಿ​ಸ್ತಾ​ನ ಪ್ರವಾಸ ಕೈಗೊಂಡಿತ್ತು. 2015ರಲ್ಲಿ ಜಿಂಬಾಬ್ವೆ ತಂಡ ಸಹ ಪಾಕ್‌ನಲ್ಲಿ ಸರಣಿ ಆಡಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್ ಆಗೋದು ಯಾರು? ಅಚ್ಚರಿ ಭವಿಷ್ಯ ನುಡಿದ AI
ವಿರಾಟ್ ಕೊಹ್ಲಿ to ಕೆಎಲ್ ರಾಹುಲ್, ಭಾರತೀಯ ಕ್ರಿಕೆಟಿಗರಲ್ಲಿದೆ ಅತೀ ದುಬಾರಿ ಕಾರು