
ನವದೆಹಲಿ(ಡಿ.06): ಭಾರತ-ಶ್ರೀಲಂಕಾ ನಡುವಿನ ಮೂರನೇ ಹಾಗೂ ಕೊನೆಯ ಟೆಸ್ಟ್ ರೋಚಕ ಹಂತ ತಲುಪಿದ್ದು ಶ್ರೀಲಂಕಾ ಚಹಾ ವಿರಾಮದ ವೇಳೆಗೆ 5 ವಿಕೆಟ್ ಕಳೆದುಕೊಂಡು 184 ರನ್ ಕಲೆಹಾಕಿದ್ದು, ಗೆಲ್ಲಲು 184 ರನ್'ಗಳ ಅವಶ್ಯಕತೆಯಿದೆ.
ನಾಲ್ಕನೇ ದಿನದಾಟ ಮುಕ್ತಾಯಕ್ಕೆ 3 ವಿಕೆಟ್'ಗೆ 31 ರನ್ ಬಾರಿಸಿದ್ದ ಶ್ರೀಲಂಕಾ ಇಂದು ದಿಟ್ಟ ಆಟ ಪ್ರದರ್ಶಿಸುತ್ತಿದೆ. ಧನಂಜಯ್ ಡಿ ಸಿಲ್ವಾ ನೆಲಕಚ್ಚಿ ಆಡುವ ಮೂಲಕ ಶತಕ ಸಿಡಿಸಿದರೆ(119*) ತಾಳ್ಮೆಯ ಆಟ ಪ್ರದರ್ಶಿಸಿದ ನಾಯಕ ಚಾಂಡಿಮಲ್(36) ಹಾಘೂ ರೊಶನ್ ಸಿಲ್ವಾ(38*)ರನ್ ಗಳಿಸಿದ್ದಾರೆ.
ಧನಂಜಯ್ ಡಿಸಿಲ್ವಾ 119 ರನ್ ಬಾರಿಸಿ ರಿರ್ಟೈರ್ಡ್ ಹರ್ಟ್ ಆಗಿದ್ದು, ಕೊನೆಯ ಸೆಷನ್ ಸಾಕಷ್ಟು ಕುತೂಹಲ ಮೂಡಿಸಿದೆ.
ಭಾರತ ಗೆಲ್ಲಲು 5 ವಿಕೆಟ್ ಅಗತ್ಯವಿದ್ದರೆ, ಶ್ರೀಲಂಕಾ ಚೊಚ್ಚಲ ಜಯ ಕಾಣಲು ಇನ್ನೂ 184 ರನ್ ಗಳಿಸಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.