ಸಿಯೊಲ್ (ಸೆ.30): ಕೊರಿಯಾ ಬ್ಯಾಡ್ಮಿಂಟನ್ ಓಪನ್ ಪಂದ್ಯಾವಳಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ಪದಕ ನಿರೀಕ್ಷೆ ಮೂಡಿಸಿದ್ದ ಪರುಪಳ್ಳಿ ಕಶ್ಯಪ್ ಹಾಗೂ ಕೆ. ಶ್ರೀಕಾಂತ್ ಅವರು ಟೂರ್ನಿಯ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದರು. ಇದೀಗ, ಅಜಯ್ ಜಯರಾಮ್ ಕೂಡ ಇಂದು ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ದ. ಕೊರಿಯಾದವರೇ ಆದ ಲೀ ಹ್ಯುನ್ ಇಲ್ ವಿರುದ್ಧ 23-25, 13-21 ಗೇಮ್ಗಳ ಅಂತರದಲ್ಲಿ ಸೋಲು ಕಂಡರು.
ಇನ್ನು, ಪುರುಷರ ಸಿಂಗಲ್ಸ್ನಲ್ಲಿ ಮತ್ತೊಬ್ಬ ಭಾರತೀಯ ಆಟಗಾರ ಬಿ. ಸಾಯಿ ಪ್ರಣೀತ್ ಸಹ ದಕ್ಷಿಣ ಕೊರಿಯಾದ ಸೊನ್ ವ್ಯಾನ್ ಹೊ ವಿರುದ್ಧ ಪರಾಭವಗೊಂಡರು.