ಕ್ರೀಡಾಸ್ಫೂರ್ತಿ ಮರೆತ ಶಕೀಬ್, ನುರುಲ್'ಗೆ ಐಸಿಸಿ ಶಾಕ್..!

By Suvarna Web DeskFirst Published Mar 17, 2018, 8:01 PM IST
Highlights

ಅಂತಿಮ ಓವರ್'ನಲ್ಲಿ ಇಸ್ರೂ ಉಡಾನ್ ಎರಡು ಬೌನ್ಸರ್ ಎಸೆದಿದ್ದರು. ಎರಡನೇ ಬೌನ್ಸರ್ ಅನ್ನು ಅಂಪೈರ್ ನೋಬಾಲ್ ನೀಡಿಲ್ಲವೆಂದು ಮುಷ್ತಾಫಿಜುರ್ ಅವರನ್ನು ವಾಪಾಸ್ ಬರುವಂತೆ ಕರೆದಿದ್ದರು. ಶಕೀಬ್ ಈ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಕೊಲಂಬೊ(ಮಾ.17): ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವೆ ಶುಕ್ರವಾರ ನಡೆದ ಟಿ20 ಪಂದ್ಯದ ಕೊನೆಯ ಓವರ್ ಸಾಕಷ್ಟು ಹೈಡ್ರಾಮಕ್ಕೆ ಸಾಕ್ಷಿಯಾಗಿದ್ದು, ಈ ವೇಳೆ ಅನುಚಿತ ವರ್ತನೆ ತೋರಿದ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಹಾಗೂ ಕಾಯ್ದಿರಿಸಿದ ಆಟಗಾರ ನುರುಲ್ ಹಸನ್‌ ಅವರಿಗೆ ಐಸಿಸಿ ಪಂದ್ಯದ ಸಂಭಾವನೆಯ ಶೇ.25% ದಂಡ ಹಾಗೂ ಒಂದು ಋಣಾತ್ಮಕ ಅಂಕ ನೀಡಿದೆ.

ಅಂತಿಮ ಓವರ್'ನಲ್ಲಿ ಇಸ್ರೂ ಉಡಾನ್ ಎರಡು ಬೌನ್ಸರ್ ಎಸೆದಿದ್ದರು. ಎರಡನೇ ಬೌನ್ಸರ್ ಅನ್ನು ಅಂಪೈರ್ ನೋಬಾಲ್ ನೀಡಿಲ್ಲವೆಂದು ಮುಷ್ತಾಫಿಜುರ್ ಅವರನ್ನು ವಾಪಾಸ್ ಬರುವಂತೆ ಕರೆದಿದ್ದರು. ಶಕೀಬ್ ಈ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಮತ್ತೊಂದು ಪ್ರಕರಣದಲ್ಲಿ ಲಂಕಾ ನಾಯಕ ತಿಸಾರಾ ಪೆರೇರಾ ಅವರತ್ತ ಬೆರಳು ಮಾಡಿ, ಅವರ ಜತೆ ವಾಗ್ವಾದ ನಡೆಸಿದ ಬಾಂಗ್ಲಾ ಹೆಚ್ಚುವರಿ ಆಟಗಾರ ನುರುಲ್ ಹಸನ್‌'ಗೂ ಐಸಿಸಿ ಪಂದ್ಯದ ಸಂಭಾವನೆಯ ಶೇ.25ರಷ್ಟು ದಂಡ ಹಾಗೂ 1 ಋಣಾತ್ಮಕ ಅಂಶ ಹೇರಿದೆ.

ಶಕೀಬ್ ಹಾಗೂ ನುರುಲ್ ಇಬ್ಬರು ಕೆಟ್ಟ ವರ್ತನೆ ತೋರಿದರು, ಹಾಗೂ ಇಂತಹ ತಪ್ಪುಗಳನ್ನು ಒಪ್ಪಲೂ ಸಾಧ್ಯವಿಲ್ಲ ಎಂದು ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ಅಭಿಪ್ರಾಯಪಟ್ಟಿದ್ದಾರೆ.

click me!