ಧೋನಿಗಾಗಿ ಪೈಜಾಮ ಮಾರಲೂ ರೆಡಿ ಎಂದ ಶಾರುಖ್ ಖಾನ್!

Published : Apr 27, 2017, 04:38 AM ISTUpdated : Apr 11, 2018, 12:56 PM IST
ಧೋನಿಗಾಗಿ ಪೈಜಾಮ ಮಾರಲೂ ರೆಡಿ ಎಂದ ಶಾರುಖ್ ಖಾನ್!

ಸಾರಾಂಶ

ಎಂ.ಎಸ್​​ ಧೋನಿ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅವರ ಮ್ಯಾಚ್​​​ ವಿನ್ನಿಂಗ್​​ ಅಬಿಲಿಟಿಗೆ ವಿಶ್ವವೇ ತಲೆಬಾಗುತ್ತದೆ. IPL ಫ್ರಾಂಚೈಸಿಗಳಂತೂ ಧೋನಿ ನಮ್ಮ ತಂಡದಲ್ಲಿದ್ದಿದ್ದರೆ ಹೇಗಿರುತ್ತಿತ್ತಪ್ಪ ಅಂತ ಕನಸು ಕಾಣುತ್ತಾರೆ. ಆದರೆ ಸದ್ಯ  IPL ಫ್ರಾಂಚೈಸಿಯೊಬ್ಬ ಧೋನಿ ಏನಾದರೂ ಹರಾಜಿಗೆ ಬಂದರೆ ತನ್ನ ಪೈಜಾಮವನ್ನಾದರೂ ಮಾರಿ ಅವರನ್ನು ಖರಿದಿಸುತ್ತಾರಂತೆ. ಅಷ್ಟಕ್ಕೂ ಆ ಫ್ರಾಂಚೈಸಿ ಹೀಗೆ ಹೇಳಲು ಕಾರಣವೇನು.? ಈ ರೀತಿಯ ಹೇಳಿಕೆ ನೀಡಿದ ಆ ಫ್ರಾಂಚೈಸಿ ಯಾವುದು? ಇಲ್ಲಿದೆ ವಿವರ.

ನವದೆಹಲಿ(ಎ.27): ಎಂ.ಎಸ್​​ ಧೋನಿ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅವರ ಮ್ಯಾಚ್​​​ ವಿನ್ನಿಂಗ್​​ ಅಬಿಲಿಟಿಗೆ ವಿಶ್ವವೇ ತಲೆಬಾಗುತ್ತದೆ. IPL ಫ್ರಾಂಚೈಸಿಗಳಂತೂ ಧೋನಿ ನಮ್ಮ ತಂಡದಲ್ಲಿದ್ದಿದ್ದರೆ ಹೇಗಿರುತ್ತಿತ್ತಪ್ಪ ಅಂತ ಕನಸು ಕಾಣುತ್ತಾರೆ. ಆದರೆ ಸದ್ಯ  IPL ಫ್ರಾಂಚೈಸಿಯೊಬ್ಬ ಧೋನಿ ಏನಾದರೂ ಹರಾಜಿಗೆ ಬಂದರೆ ತನ್ನ ಪೈಜಾಮವನ್ನಾದರೂ ಮಾರಿ ಅವರನ್ನು ಖರಿದಿಸುತ್ತಾರಂತೆ. ಅಷ್ಟಕ್ಕೂ ಆ ಫ್ರಾಂಚೈಸಿ ಹೀಗೆ ಹೇಳಲು ಕಾರಣವೇನು.? ಈ ರೀತಿಯ ಹೇಳಿಕೆ ನೀಡಿದ ಆ ಫ್ರಾಂಚೈಸಿ ಯಾವುದು? ಇಲ್ಲಿದೆ ವಿವರ.

ಬ್ಯಾಟ್​​'ನಿಂದಲೇ ಉತ್ತರಿಸುತ್ತಿರುವ ಬೆಸ್ಟ್​​ ಫಿನಿಷರ್​​​​

ಆತ ವಿಶ್ವ ಕಂಡ ಬೆಸ್ಟ್​​​ ಕ್ಯಾಪ್ಟನ್​​, ಟೀಂ ಇಂಡಿಯಾದ ಮ್ಯಾಚ್​​ ವಿನ್ನರ್. ಲೈಟನ್ನಿಂಗ್​​ ಸ್ಪೀಡ್​​ ಕೀಪರ್. ಎಂಥಹ ಕಠಿಣ ಪಂದ್ಯಾವಾದರೂ ಸರಾಗವಾಗಿ ಮ್ಯಾಚ್​​ ಫಿನಿಷ್​​ ಮಾಡಬಲ್ಲ ಚಾಣಾಕ್ಷ. ಇದು ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್​​ಮನ್​​ ಎಂ.ಎಸ್​​ ಧೋನಿಯ ಫ್ರೋಫೈಲ್​​​​​​.

ಧೋನಿ ವಿಶ್ವದ ಲೆಜೆಂಡ್​​​ ಕ್ರಿಕೆಟರ್​​​ ಅನ್ನಿಸಿದರೂ ಇವರ ಮೇಲಿನ ಟೀಕೆ ಟಿಪ್ಪಣಿಗಳು ಕಮ್ಮಿಯಾಗಿಲ್ಲ. ಅದರಲ್ಲೂ ಟೀಂ ಇಂಡಿಯಾದ ನಾಯಕತ್ವ ತೊರೆದ ಮೇಲಂತೂ ಧೋನಿಯ ಮೇಲೆ ಟೀಕಾಕಾರರು ಎರಗಿ ಬೀಳುತ್ತಿದ್ದಾರೆ. ಇವರು ಕ್ರಿಕೆಟ್​​'ಗೆ ವಿದಾಯ ಹೇಳುವುದೇ ಉತ್ತಮ ಅಂತೆಲ್ಲಾ ಟೀಕಿಸಿದ್ದಾರೆ. ಸ್ವತಃ ಧೋನಿ ಪ್ರತಿನಿಧಿಸುತ್ತಿರುವ ಪುಣೆ ತಂಡದ ಮಾಲಿಕನೇ ಧೋನಿಯ ಆಟ ಮುಗೀತು ಅಂತೆಲ್ಲಾ ಪರೋಕ್ಷವಾಗಿ ಟೀಕಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ತಂಡದ ನಾಯಕತ್ವದಿಂದಲೂ ಕೆಳಗಿಳಿಸಿದ್ದಾರೆ.

ಟೀಕೆಗಳ ನಡುವಲ್ಲೇ IPL ಫ್ರಾಂಚೈಸಿ ಬಿಗ್​ ಬಾಂಬ್​​​: ಧೋನಿಗಾಗಿ ಪೈಜಾಮ ಮಾರಲು ಶಾರೂಖ್​​ ರೆಡಿ

ಸದ್ಯ ಧೋನಿಯನ್ನು ಟೀಕಿಸುವುದರಲ್ಲೇ ತಲ್ಲೀನರಾಗಿರುವ ಟೀಕಾಕಾರರು ಒಂದು ಕಡೆಯಾದರೆ. ಧೋನಿಯ ಇವರೆಗಿನ ಯಶಸನ್ನು ಆರಾಧಿಸಿ ಅವರನ್ನು ಇನ್ನೂ ನಂಬುವವರು ಒಂದು ಕಡೆ. ಧೋನಿಯನ್ನು ಇನ್ನೂ ಸಹ ನಂಬುವವರಲ್ಲಿ KKR ತಂಡದ ಫ್ರಾಮಚೈಸಿ ಶಾರೂಖ್​​ ಖಾನ್​​ ಕೂಡ ಒಬ್ಬರು. ಸದ್ಯ ಈ ಬಾಲಿವುಡ್​​ ಬಾದ್​ಶಾ ನೀಡಿರುವ ಒಂದು ಹೇಳಿಕೆ ಕೇವಲ ಟೀಕಾಕಾರಿಗಲ್ಲ ಕ್ರಿಕೆಟ್​​​ ಪಂಡಿತರು, ಅಭಿಮಾನಿಗಳಿಗು ದಂಗು ಬಡಿಸಿದೆ.

ಎಂ.ಎಸ್​​ ಧೋನಿ ಏನಾದರೂ ಮುಂದಿನ ವರ್ಷ ಹರಾಜು ಪ್ರಕ್ರಿಯೆಗೆ ಒಳಪಟ್ಟರೆ, ನಾನು ನನ್ನ ಪೈಜಾಮವನ್ನಾದರೂ ಮಾರಿ ಧೋನಿಯನ್ನ ನನ್ನ ತಂಡಕ್ಕೆ ಖರೀಧಿಸುತ್ತೇನೆ. ಎಂದು KKR ಮಾಲಿಕ ಶಾರೂಖ್​​ ಹೇಳಿಕೊಂಡಿದ್ದಾರೆ.

ಶಾರೂಖ್​​ ಹೀಗೆ ಹೇಳಲು ಕಾರಣವೂ ಇದೆ. ಹತ್ತು ವರ್ಷಗಳ ಕಾಲ ಟೀಂ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿ. IPL ನಲ್ಲೂ ಚೆನ್ನೈ ತಂಡವನ್ನು ಎರಡು ಬಾರಿ ಚಾಂಪಿಯನ್​ ಆಗಿಸಿದ ಕೀರ್ತಿ ಧೋನಿಯದ್ದು. ಹೀಗಾಗಿ ಶಾರೂಖ್​​ ಧೋನಿಯ ಆಟಕ್ಕಿಂತ ಅವರ ಬುದ್ಧಿವಂತಿಕೆಗೆ ಹೆಚ್ಚು ಬೆಲೆ ನೀಡಿದ್ದಾರೆ ಶಾರೂಖ್​​.

ಸದ್ಯ ಮುಂದಿನ ವರ್ಷ ರಾಜಸ್ಥಾನ ರಾಯಲ್ಸ್​​ ಮತ್ತು ಚೆನ್ನೈ ಸೂಪರ್​​ ಕಿಂಗ್ಸ್​​ ತಂಡಗಳು ಎರಡು ವರ್ಷದ ನಿಷೇಧದ ಬಳಿಕ ಮತ್ತೆ ಕಮ್ ​ಬ್ಯಾಕ್​ ಮಾಡುತ್ತಿವೆ. ಒಂದು ವೇಳೆ BCCI 10 ತಂಡಗಳಾಡಲು ಅವಕಾಶ ನೀಡದಿದ್ದರೆ ಆಗ ಪುಣೆ ಸೂಪರ್​​ ಜೈಂಟ್​​ ಮತ್ತು ಗುಜರಾತ್​​ ಲಯನ್ಸ್​​ ಟೂರ್ನಿಯಿಂದ ಹೊರ ಬೀಳುತ್ತವೆ. ಆಗ ಆ ಎರಡು ತಂಡದ ಆಟಗಾರರು ಮತ್ತೆ ಹರಾಜಿಗೆ ಬರುತ್ತಾರೆ. ಇಷ್ಟೆಲ್ಲಾ ಆದರೆ ಮುಂದಿನ ವರ್ಷ ಧೋನಿ KKR ತಂಡದಲ್ಲಿ ಆಡುವುದು ಬಹುತೇಕ ಖಚಿತ. ಏನೇ ಆದರೂ ಶಾರೂಖ್'​ರ ಈ ಹೇಳಿಕೆ ದಂಗು ಬಡಿಸುತ್ತಿರುವುದಂತು ಸುಳ್ಳಲ್ಲ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

33 ಎಸೆತದಲ್ಲಿ ಅಲೆನ್ ಶತಕ ದಾಖಲೆ, ಸೌತ್ ಆಫ್ರಿಕಾ ಮಣಿಸಿ ಫೈನಲ್ ಪ್ರವೇಶಿಸಿದ ನ್ಯೂಜಿಲೆಂಡ್
Sanju Weds Charu: ಕ್ರಿಕೆಟಿಗ ಸಂಜು ಸ್ಯಾಮ್ಸನ್​ ಅಂತರ್​ಧರ್ಮೀಯ ರೋಚಕ ಫೇಸ್​ಬುಕ್ ಲವ್​ ಸ್ಟೋರಿ!