
ಕ್ರಿಕೆಟ್ ಅನ್ನೋ ಮಹಾನ್ ಕ್ರೀಡೆ ಭಾರತಕ್ಕೆ ಕಾಲಿಟ್ಟು ಶತಮಾನವೇ ಕಳೆದು ಹೋಗಿದೆ. ಜಾತಿ,ಧರ್ಮ, ವರ್ಣ ಹೀಗೆ ಯಾವುದರ ಬೇಧವಿಲ್ಲದೆ ಆಡೋ ಕ್ರಿಕೆಟ್ನಲ್ಲಿ ಈಗ ಕೋಮು ರಾಜಕಾರಣ ನುಸುಳಿಬಿಟ್ಟಿದೆ. ದೇಶವನ್ನ ಪ್ರತಿನಿಧಿಸೋ ಟೀಂ ಇಂಡಿಯಾದಲ್ಲಿ ಮೀಸಲಾತಿ ಬೇಕು ಅನ್ನೋ ಮಾತು ಕೇಳಿಬಂದಿದೆ.
ಟ್ವಿಟ್ಟರ್ನಲ್ಲಿ ಸಂಜೀವ್ ಭಟ್ ವಿವಾದಾತ್ಮಕ ಪೋಸ್ಟ್..!
ಟೀಂ ಇಂಡಿಯಾದಲ್ಲಿ ಮುಸ್ಲಿಮರಿಗೆ ಅವಕಾಶ ನೀಡುತ್ತಿಲ್ಲ, ಭಾರತದ ಮುಸ್ಲಿಮ್ ಕ್ರಿಕೆಟ್ ಆಟಗಾರರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಉದ್ಧಟತನದ ಹೇಳಿಕೆಯನ್ನು ಗುಜರಾತ್'ನ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ನೀಡಿದ್ದಾರೆ. ಮೋದಿ ವಿರೋಧಿಯಂದೇ ಬಿಂಬಿತವಾಗಿರೋ ಸಂಜಯ್ ಭಟ್ ಟೀಂ ಇಂಡಿಯಾದಲ್ಲೂ ಬಿಜೆಪಿ ಕೈ ಆಡಿಸುತ್ತಿದೆ ಎಂದು ಇನ್ಡೈರೆಕ್ಟಾಗಿ ತಮ್ಮ ಟ್ವಿಟ್ಟರ್ ಅಕೌಂಟ್ನಲ್ಲಿ ಬರೆದುಕೊಂಡಿದ್ದಾರೆ.
ಸಂಜೀವ್ ಭಟ್'ರ ಈ ಟ್ವೀಟ್ ನೋಡುತ್ತಿದ್ರೆ ಎಂಥಹ ಕ್ರಿಕೆಟ್ ಪ್ರೇಮಿಗಳಿಗೂ ರೋಷ ಉಕ್ಕಿ ಬರುತ್ತೆ. ಸದ್ಯ ಟೀಂ ಇಂಡಿಯಾದಲ್ಲಿ ಯಾರಾದರೂ ಮುಸ್ಲಿಂ ಆಟಗಾರನಿದ್ದಾನಾ..? ಸ್ವತಂತ್ರ ಬಂದಾಗಿನಿಂದ ಎಷ್ಟು ಬಾರಿ ಮುಸ್ಲಿಂ ಆಟಗಾರರಿಲ್ಲದ ಟೀಂ ಇಂಡಿಯಾ ಅಖಾಡಕ್ಕಿಳಿದಿದೆ. ಮುಸ್ಲಿಂರು ಕ್ರಿಕೆಟ್ ಆಡೋದನ್ನ ನಿಲ್ಲಿಸಿಬಿಟ್ರಾ ಅನ್ನೋ ಟ್ವೀಟ್'ನ್ನು ಪೋಸ್ಟ್ ಮಾಡೋ ಮೂಲಕ ಸಂಜೀವ್ ಭಟ್ ಇಡೀ ದೇಶದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸಂಜೀವ್ ಭಟ್ ಟ್ವೀಟ್'ಗೆ ಟರ್ಬೊನೇಟರ್ ತಕ್ಕ ಉತ್ತರ
ಸಂಜೀವ್ ಭಟ್ ಪ್ರಚೋದನಕಾರಿ ಟ್ವೀಟ್ ದೇಶಾದಾದ್ಯಂತ ಸುದ್ದಿ ಮಾಡಿದೆ. ಇದಕ್ಕೆ ಪರ ಮತ್ತು ವಿರೋಧಗಳ ಮಾತುಗಳು ಕೇಳಿಬಂದ್ವು. ಆದ್ರೆ ಟೀಂ ಇಂಡಿಯಾದ ಟರ್ಬೊನೇಟರ್ ಹರ್ಭಜನ್ ಸಿಂಗ್ ಮಾತ್ರ ಟ್ವಿಟ್ಟರ್ ಮೂಲಕವೇ ಭಟ್ಗೆ ಉತ್ತರ ನೀಡಿದ್ರು.
ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತರು ಎಲ್ಲರೂ ಅಣ್ಣ ತಮ್ಮಂದಿರಿದಂತೆ. ಭಾರತ ತಂಡಕ್ಕೆ ಆಡೋ ಪ್ರತಿಯೊಬ್ಬರೂ ಹಿಂದೂಸ್ತಾನಿಯೇ, ಅವರ ಜಾತಿ ಮತ್ತು ಧರ್ಮದ ಬಗ್ಗೆ ಮಾತನಾಡಬಾರದು ಎಂಬ ಪೋಸ್ಟ್ ಅನ್ನ ಟ್ವಿಟ್ಟರ್ನಲ್ಲಿ ಹಾಕಿ ಸಂಜೀವ್ ಭಟ್'ಗೆ ತಕ್ಕ ಉತ್ತರ ನೀಡಿದ್ರು.
ಏನೇ ಆದ್ರೂ ಸಂಜೀವ್ ಭಟ್ ಟೀಂ ಇಂಡಿಯಾ ಕುರಿತು ಕೊಟ್ಟಿರುವ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ತನ್ನ ಬೇಳೆ ಬೇಯಿಸಿಕೊಳ್ಳಲು ಧರ್ಮದ ಹೆಸರನ್ನ ತಂದಿದ್ದು ಎಷ್ಟು ಸರಿ ಅನ್ನೋದೇ ಪ್ರಶ್ನೆ. ಕ್ರಿಕೆಟ್ ಅನ್ನೋ ಪರಿಶುದ್ಧ ಕ್ರೀಡೆಗೆ ಇಂಥವರ ಕೊಂಕು ಹೇಳಿಕೆಗಳು ತೊಡಕಾಗದೇ ಇರಲಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.