ಒಂದು ಕಾಲದಲ್ಲಿ ಸಚಿನ್'ರನ್ನೇ ತಂಡದಿಂದ ಕೈಬಿಡುವ ಪ್ರಯತ್ನ ನಡೆದಿತ್ತಾ? ಸಂದೀಪ್ ಪಾಟೀಲ್ ಬಿಚ್ಚಿಟ್ಟ ಸತ್ಯ

Published : Sep 22, 2016, 07:45 AM ISTUpdated : Apr 11, 2018, 12:55 PM IST
ಒಂದು ಕಾಲದಲ್ಲಿ ಸಚಿನ್'ರನ್ನೇ ತಂಡದಿಂದ ಕೈಬಿಡುವ ಪ್ರಯತ್ನ ನಡೆದಿತ್ತಾ? ಸಂದೀಪ್ ಪಾಟೀಲ್ ಬಿಚ್ಚಿಟ್ಟ ಸತ್ಯ

ಸಾರಾಂಶ

ಮುಂಬೈ(ಸೆ.22): ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆರಾಧ್ಯ ದೈವ, ಮಾಸ್ಟರ್ ಬ್ಲಾಸ್ಟರ್, ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್ ಅವರಿಗೆ ನಿವೃತ್ತಿ ಪಡೆಯುವಂತೆ ಒತ್ತಡ ಹೇರಲಾಗಿತ್ತು ಎನ್ನುವ ಸತ್ಯವನ್ನು ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಮಾಜಿ ಮುಖ್ಯ ಆಯ್ಕೆಗಾರ ಸಂದೀಪ್ ಪಾಟೀಲ್ ಬಿಚ್ಚಿಟ್ಟಿದ್ದಾರೆ. 

ಏಕದಿನ ಕ್ರಿಕೆಟ್ ನಿಂದ ನಿವೃತ್ತರಾಗದೆ ಹೋಗಿದ್ದರೆ ಸಚಿನ್ ಅವರನ್ನು 2012ರಲ್ಲಿ ತಂಡದಿಂದ ಕೈ ಬಿಡಲಾಗುತಿತ್ತು ಎಂಬ ಸತ್ಯವನ್ನು ಸಂದೀಪ್ ಪಾಟೀಲ್ ಒಪ್ಪಿಕೊಂಡಿದ್ದಾರೆ. ಈ ಕುರಿತು ರಾಷ್ಟ್ರೀಯಾ ಮಾಧ್ಯಮಗಳು ವರದಿ ಮಾಡಿವೆ.  

ಭಾರತೀಯ ಕ್ರಿಕೆಟ್ ಟೀಮ್'ಗೆ ಸಚಿನ್ ಕೊಡುಗೆಯನ್ನು ಯಾರು ಸಹ ಮರೆಯುವಂತೆ ಇಲ್ಲ, ಎರಡು ದಶಕಗಳ ಕಾಲ ತಂಡಕ್ಕೆ ಬೆನ್ನೆಲುಬಾಗಿದ್ದ ಸಚಿನ್ ತಮ್ಮ ಜೀವನವನ್ನು ಕ್ರಿಕೆಟ್'ಗೆ ಮುಡಿಪಾಗಿ ಇಟ್ಟವರು ಎಂದರೆ ತಪ್ಪಾಗುವುದಿಲ್ಲ. 2013ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದ ತೆಂಡೂಲ್ಕರ್, 2012ರಲ್ಲಿ ಏಕದಿನ ಕ್ರಿಕೆಟ್ ನಿಂದ ನಿವೃತ್ತಿರಾಗಿದ್ದರು.

ಆದರೆ ಸಚಿನ್ ಏಕದಿನ ನಿವೃತ್ತಿ ಘೋಷಿಸದೆ ಹೋಗಿದ್ದರೆ ಅವರನ್ನು ತಂಡದಿಂದ ಕೈ ಬಿಡಲಾಗುತಿತ್ತು. ಈ ವಿಷಯ ತಿಳಿದ ಸಚಿನ್ ಸ್ವತಃ ತಾವೇ ನಿವೃತ್ತಿ ಘೊಷಿಸಿದರು ಎಂದು ಆಯ್ಕೆ ಸಮಿತಿಯ ಚಿಫ್ ಸೆಲೆಕ್ಟರ್ ಸಂದೀಪ್ ಪಾಟೀಲ್ ಸತ್ಯ ಹೊರ ಹಾಕಿದ್ದಾರೆ. 

ಸಚಿನ್ ನಿವೃತ್ತಿ ಕುರಿತು ಮಾತನಾಡಿರುವ ಸಂದೀಪ್ ಪಾಟೀಲ್, ಡಿಸೆಂಬರ್ 12 ರಂದು ನಾಗ್ಪುರದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ನಡೆಯುತ್ತಿದ್ದ ವೇಳೆ ಟೀಮ್ ಇಂಡಿಯಾ ಆಯ್ಕೆ ಸಮಿತಿ ಸಚಿನ್ ಅವರನ್ನು ಭೇಟಿ ಮಾಡಿ ಅವರ ಭವಿಷ್ಯದ ಪ್ಲಾನ್ ಗಳ ಕುರಿತು ಮಾತನಾಡಿದ ವೇಳೆ ಸಚಿನ್ ತಮ್ಮ ನಿವೃತ್ತಿಯ ಬಗ್ಗೆ ಯಾವುದೇ ಯೋಜನೆ ಮಾಡಿರಲಿಲ್ಲ, ಇನ್ನು ಹಲವು ದಿನ ಕ್ರಿಕೆಟ್ ಆಡುವ ಬಯಕೆ ವ್ಯಕ್ತಪಡಿಸಿದ್ದರು ಎಂದಿದ್ದಾರೆ. 

ಈ ಕುರಿತಂತೆ ಆಯ್ಕೆ ಸಮಿತಿ ಮತ್ತು ಬಿಸಿಸಿಐ ಮಾತುಕತೆ ನಡೆಸಿ, ಮುಂದಿನ ಏಕದಿನ ಪಂದ್ಯಗಳಿಂದ ಸಚಿನ್ ಅವರನ್ನು ತಂಡದಿಂದ ಹೊರ ಇಡಬೇಕು ಎನ್ನುವ ಆಯೋಚನೆಯಲ್ಲಿದ್ದ ಸಂದರ್ಭದಲ್ಲೇ ಸತ್ಯ ಸಂಗತಿ ಅರಿತ ಸಚಿನ್ ನಿವೃತ್ತಿ ಘೊಷಿಸಿದರು ಎಂದು ಪಾಟೀಲ್ ಹೇಳಿದ್ದಾರೆ. 'ಟೆಸ್ಟ್ ಪಂದ್ಯಗಳ ಕಡೆ ಹೆಚ್ಚಿನ ಗಮನ ಹರಿಸುವ ಸಲುವಾಗಿ ಸಚಿನ್ ಏಕದಿನ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ನಂತರ ಹೇಳಲಾಯಿತು' ಎಂದು ತಿಳಿಸಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?