
ಮುಂಬೈ : ರಾಜ್ಯಸಭಾ ಎಂಪಿಯಾಗಿದ್ದ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಅವರ ಮೇಲೆ ಇದ್ದ ಆರೋಪವೆಂದರೆ ಅವರು ಅತ್ಯಂತ ಕಡಿಮೆ ದಿನ ರಾಜ್ಯಸಭೆಗೆ ಹಾಜರಾಗಿದ್ದಾರೆ ಎನ್ನುವುದಾಗಿದೆ.
ಇದೀಗ ಸಚಿನ್ ತೆಂಡುಲ್ಕರ್ ಅವರು ಸಂಸದರಾಗಿದ್ದಕ್ಕೆ ದೊರೆತ ಸಂಪೂರ್ಣ ವೇತನ ಹಾಗೂ ಭತ್ಯೆಯನ್ನೂ ಕೂಡ ಪ್ರಧಾನಿ ಪರಿಹಾರ ನಿಧಿಗೆ ದಾನವಾಗಿ ನೀಡಿದ್ದಾರೆ.
ಕಳೆದ 6 ವರ್ಷಗಳಲ್ಲಿ ತೆಂಡೂಲ್ಕರ್ ಅವರಿಗೆ ಸಂಬಳ ಹಾಗೂ ತಿಂಗಳ ಭತ್ಯೆ ಎಲ್ಲವೂ ಸೇರಿ 90 ಲಕ್ಷ ದೊರಕಿದ್ದು, ಸಂಪೂರ್ಣ ಹಣವನ್ನೂ ಕೂಡ ಪ್ರಧಾನಿ ಪರಿಹಾರ ನಿಧಿಗೆ ನೀಡಿದ್ದಾರೆ.
ಈ ವರ್ಷ ಸಂಸತ್’ಗೆ ಅತ್ಯಂತ ಕಡಿಮೆ ಹಾಜರಾತಿ ಹೊಂದಿದ್ದಾರೆ ಎಂದು ತೆಂಡೂಲ್ಕರ್ ಹಾಗೂ ರೇಖಾ ವಿರುದ್ಧ ರೋಪಗಳು ಕೇಳಿ ಬಂದಿದ್ದವು. ಆದರೆ ಇದೀಗ ಅವರು ಸಂಪೂರ್ಣ ಹಣವನ್ನೂ ಕೂಡ ಪ್ರಧಾನಿ ಪರಿಹಾರ ನಿಧಿಗೆ ನೀಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.