ಕರ್ನಾಟಕ ತೊರೆದು ಸೌರಾಷ್ಟ್ರ ಪಾಲಾದ ರಾಬಿನ್ ಉತ್ತಪ್ಪ

Published : Aug 10, 2017, 10:12 PM ISTUpdated : Apr 11, 2018, 12:55 PM IST
ಕರ್ನಾಟಕ ತೊರೆದು ಸೌರಾಷ್ಟ್ರ ಪಾಲಾದ ರಾಬಿನ್ ಉತ್ತಪ್ಪ

ಸಾರಾಂಶ

ಉತ್ತಪ್ಪ ಅವರನ್ನು ಕೇರಳ ಹಾಗೂ ವಿದರ್ಭ ರಾಜ್ಯ ಸಂಸ್ಥೆಗಳೂ ಸಂಪರ್ಕಿಸಿದ್ದವು. ಅಂತಿಮವಾಗಿ ಅವರು ಸೌರಾಷ್ಟ್ರ ಪಾಲಾಗಿದ್ದಾರೆ. ಈ ಮೊದಲು ಉತ್ತಪ್ಪ ಕೇರಳ ಪಾಲಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು

ಬೆಂಗಳೂರು(ಆ.10): ಕರ್ನಾಟಕದ ಅನುಭವಿ ಕ್ರಿಕೆಟಿಗ ರಾಬಿನ್ ಉತ್ತಪ್ಪ, ಪ್ರಸಕ್ತ ಸಾಲಿನ ಅಂದರೆ 2017-18ರ ಸಾಲಿನ ರಣಜಿ ಟೂರ್ನಿಯಲ್ಲಿ ಸೌರಾಷ್ಟ್ರ ತಂಡವನ್ನು ಪ್ರತಿನಿಧಿಸಲಿದ್ದಾರೆ. ಈ ಮೂಲಕ ಉತ್ತಪ್ಪ ಸುತ್ತ ಹರಿದಾಡುತ್ತಿದ್ದ ಸಾಕಷ್ಟು ಊಹಾಪೋಹಗಳಿಗೆ ಕಡಿವಾಣ ಬಿದ್ದಂತಾಗಿದೆ.

‘ರಾಬಿನ್ ಬಿಸಿಸಿಐ, ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಹಾಗೂ ಕರ್ನಾಟಕ ಕ್ರಿಕೆಟ್ ಸಂಸ್ಥೆಯೊಂದಿಗೆ ಅಗತ್ಯ ಔಪಚಾರಿಕತೆಗಳನ್ನು ಪೂರೈಸಿದ್ದಾರೆ. ಸೌರಾಷ್ಟ್ರ ಕ್ರಿಕೆಟ್ ಉತ್ತಪ್ಪ ಅವರನ್ನು ಸ್ವಾಗತಿಸುತ್ತದೆ’ ಎಂದು ಎಸ್‌'ಸಿಎ ಮಾಧ್ಯಮ ವ್ಯವಸ್ಥಾಪಕ ಹಿಮಾಂಶು ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2002-03 ಋತುವಿನಲ್ಲಿ ಕರ್ನಾಟಕ ಪರ ಪಾದಾರ್ಪಣೆ ಮಾಡಿದ್ದ ಉತ್ತಪ್ಪ, ತಂಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಆದರೆ 2016-17ರ ಸಾಲಿನಲ್ಲಿ ನಿರೀಕ್ಷಿತ ಪ್ರದರ್ಶನ ತೋರದ ಹಿನ್ನಲೆಯಲ್ಲಿ, ಕೊನೆ ಲೀಗ್ ಪಂದ್ಯ ಹಾಗೂ ಕ್ವಾರ್ಟರ್ ಫೈನಲ್‌ನಿಂದ ಅವರನ್ನು ಕೈಬಿಡಲಾಗಿತ್ತು. ಅಂತಿಮವಾಗಿ 15 ವರ್ಷಗಳ ಕಾಲ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಉತ್ತಪ್ಪ, ಇದೀಗ ಸೌರಾಷ್ಟ್ರ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಉತ್ತಪ್ಪ ಅವರನ್ನು ಕೇರಳ ಹಾಗೂ ವಿದರ್ಭ ರಾಜ್ಯ ಸಂಸ್ಥೆಗಳೂ ಸಂಪರ್ಕಿಸಿದ್ದವು. ಅಂತಿಮವಾಗಿ ಅವರು ಸೌರಾಷ್ಟ್ರ ಪಾಲಾಗಿದ್ದಾರೆ. ಈ ಮೊದಲು ಉತ್ತಪ್ಪ ಕೇರಳ ಪಾಲಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವರುಣ್ ಗೂಗ್ಲಿಗೆ ಸೌತ್ ಆಫ್ರಿಕಾ ಪಂಚರ್, ಟಿ20 ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ
ಕೇವಲ 16 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಹಾರ್ದಿಕ್ ದಾಖಲೆ, ಸೌತ್ ಆಫ್ರಿಕಾಗೆ 232 ರನ್ ಟಾರ್ಗೆಟ್