
ನವದೆಹಲಿ(ಫೆ.10): ಇದೇ 25ರಿಂದ ಆರಂಭವಾಗಲಿರುವ ವಿಜಯ್ ಹಜಾರೆ ಟೂರ್ನಿಯಲ್ಲಿ ದೆಹಲಿ ತಂಡದ ನಾಯಕರಾಗಿ ಯುವ ಬ್ಯಾಟ್ಸ್ಮನ್ ರಿಷಭ್ ಪಂತ್ ಆಯ್ಕೆಯಾಗಿದ್ದಾರೆ. ಅನುಭವಿ ಗೌತಮ್ ಗಂಭೀರ್'ಗೆ ನಾಯಕತ್ವ ಸ್ಥಾನದಿಂದ ಕೋಕ್ ನೀಡಲಾಗಿದೆ.
ಆರಂಭದಲ್ಲಿ ಶಿಖರ್ ಧವನ್ ಅವರಿಗೆ ತಂಡದ ನಾಯಕತ್ವ ಜವಾಬ್ದಾರಿ ನೀಡಬೇಕು ಎನ್ನುವ ಮಾತು ಕೇಳಿ ಬಂದಿತ್ತು. ಆ ನಂತರ ಆಯ್ಕೆ ಸಮಿತಿ ರಿಷಬ್ ಅವರನ್ನು ನಾಯಕರಾಗಿ ನೇಮಿಸಿದೆ.
ರಿಷಭ್, ಇಂಗ್ಲೆಂಡ್ ವಿರುದ್ಧದ ಬೆಂಗಳೂರಿನಲ್ಲಿ ನಡೆದ ಟಿ20 ಟೂರ್ನಿಯ ಕೊನೆಯ ಪಂದ್ಯದಲ್ಲಿ ರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಅದು ಕೇವಲ 3 ಎಸೆತಗಳಿಂದ 5 ರನ್'ಗಳಿಸಲಷ್ಟೇ ಸಾಧ್ಯವಾಗಿತ್ತು. 2016-17ನೇ ಸಾಲಿನ ರಣಜಿ ಟೂರ್ನಿಯ 8 ಪಂದ್ಯಗಳಲ್ಲಿ ಪಂತ್ 81ರ ಸರಾಸರಿಯಲ್ಲಿ 972 ರನ್ ಕಲೆಹಾಕಿದ್ದರು.
ಮುಂದಿನ ದಿನಗಳಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಉತ್ಸುಕರಾಗಿರುವ ರಿಷಭ್'ಗೆ ತಂಡದ ನಾಯಕತ್ವ ನೀಡಿರುವುದು ಅನುಕೂಲವಾಗಲಿದೆ ಎಂಬುದು ಆಯ್ಕೆಸಮಿತಿಯ ಲೆಕ್ಕಚಾರವಾಗಿದೆ.
ಈ ಮೊದಲು ದೆಹಲಿ ತಂಡವನ್ನು ಎಡಗೈ ಬ್ಯಾಟ್ಸ್'ಮನ್ ಗೌತಮ್ ಗಂಭೀರ್ ಮುನ್ನೆಡೆಸುತ್ತಿದ್ದರು.
ಇದೀಗ ಯುವ ಕ್ರಿಕೆಟಿಗ ಪಂತ್ ಆಶೀಷ್ ನೆಹ್ರಾ, ಗೌತಮ್ ಗಂಭೀರ್, ಇಶಾಂತ್ ಶರ್ಮಾ, ಶಿಖರ್ ಧವನ್ ಅವರಂತಹ ಹಿರಿಯ ಆಟಗಾರರನ್ನು ಹೇಗೆ ನಿಭಾಯಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.