ಕಠಿಣ ಪರಿಶ್ರಮ ಫಲವೇ ನಾನೀಗ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಪಾತ್ರರಾಗಲು ಎಂಬರ್ಥದಲ್ಲಿ ಜಡ್ಡು ಟ್ವೀಟ್ ಮಾಡಿದ್ದಾರೆ.
ಬೆಂಗಳೂರು(ಆ.06): ರವೀಂದ್ರ ಜಡೇಜಾ ಅವರ ಅದ್ಭುತ ಆಲ್ರೌಂಡ್ ಆಟದ ನೆರವಿನಿಂದ ಟೀಂ ಇಂಡಿಯಾ, ಶ್ರೀಲಂಕಾ ಎದುರು ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಬ್ಯಾಟಿಂಗ್'ನಲ್ಲಿ ಅಜೇಯ 70 ರನ್ ಹಾಗೂ ಬೌಲಿಂಗ್'ನಲ್ಲಿ 7 ವಿಕೆಟ್ ಕಿತ್ತು ಟೀಂ ಇಂಡಿಯಾ ಗೆಲುವಿನಲ್ಲಿ ಜಡೇಜಾ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಸೌರಾಷ್ಟ್ರದ ಆಲ್ರೌಂಡರ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಪಾತ್ರರಾದ ಬಳಿಕ ಟ್ವೀಟ್ ಮಾಡಿರುವ ಜಡೇಜಾ, ಮಾಜಿ ರಾಷ್ಟ್ರಪತಿ ದಿ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಖ್ಯಾತ ಸಂದೇಶವೊಂದನ್ನು ಟ್ವೀಟ್ ಮಾಡಿದ್ದಾರೆ. 'ಕನಸೆಂದರೆ ನಿದ್ರೆ ಮಾಡುವಾಗ ಕಾಣುವಂತದ್ದಲ್ಲ, ಬದಲಾಗಿ ನಿದ್ರೆಯಲ್ಲೂ ಕಾಣುವಂತದ್ದು' ಎಂದು ಟ್ವೀಟ್ ಮಾಡಿದ್ದಾರೆ. ಕಠಿಣ ಪರಿಶ್ರಮ ಫಲವೇ ನಾನೀಗ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಪಾತ್ರರಾಗಲು ಎಂಬರ್ಥದಲ್ಲಿ ಜಡ್ಡು ಟ್ವೀಟ್ ಮಾಡಿದ್ದಾರೆ
ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-0 ಅಂತರದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸರಣಿಯನ್ನು ತನ್ನದಾಗಿಸಿಕೊಂಡಿದೆ.