
ನವದೆಹಲಿ(ಡಿ.20): ನಿನ್ನೆ ಇಂಗ್ಲೆಂಡ್ ವಿರುದ್ಧ ಭರ್ಜರಿ ತ್ರಿಶತಕ ಸಿಡಿಸಿದ ಕನ್ನಡಿಗ ಕರುಣ್ ನಾಯರ್ ಸಾಧನೆಯನ್ನ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹಾಡಿ ಹೊಗಳಿದ್ಧಾರೆ. ಕರುಣ್ ನಾಯರ್ ಅವರ ಈ ಸಾಧನೆ ಹಿಂದೆ ಅಂಡರ್-19 ತಂಡದ ಕೋಚ್ ರಾಹುಲ್ ದ್ರಾವಿಡ್ ಪರಿಶ್ರಮವಿದೆ ಎಂದು ಅವರು ಹೇಳಿದ್ದಾರೆ.
ಅಂಡರ್-19 ತಂಡದಲ್ಲಿ ರಾಹುಲ್ ದ್ರಾವಿಡ್ ನೀಡಿರುವ ತರಬೇತಿಯಿಂದಾಗಿ ಯುವ ಕ್ರಿಕೆಟಿಗರು ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಠಾಕೂರ್ ಅಭಿಪ್ರಾಯಪಟ್ಟಿದ್ಧಾರೆ.
`ಮೊದಲಿಗೆ ಅದ್ಬುತ ಪ್ರದರ್ಶನ ನೀಡಿರುವ ಭಾರತ ತಂಡವನ್ನ ನಾನು ಪ್ರಶಸಂಸಿಸುತ್ತೇನೆ. ಯುವ ಕ್ರಿಕೆಟಿಗ ಕರುಣ್ ನಾಯರ್ ತಮ್ಮ 3ನೇ ಇನ್ನಿಂಗ್ಸ್`ನಲ್ಲಿ ತ್ರಿಶತಕ ಸಿಡಿಸಿದ್ದಾರೆ. ಇದು ಯುವ ಕ್ರಿಕೆಟಿಗರ ಪರಿಶ್ರಮದ ಫಲ, ಇದರ ಹಿಂದೆ ಅಂಡರ್-19 ತಂಡದಲ್ಲಿ ಯುವಕರನ್ನ ಹುರಿಗೊಳಿಸಿದ ರಾಹುಲ್ ದ್ರಾವಿಡ್ ಅವರ ಶ್ರಮವೂ ಇದೆ. ಅಲ್ಲಿ ಸಿಕ್ಕ ಅತ್ಯುತ್ತಮ ತರಬೇತಿ ಈ ಪ್ರದರ್ಶನಕ್ಕೆ ಸಹಕಾರಿಯಾಗಿದೆ' ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.