
ಚೆನ್ನೈ(ಡಿ.20): ಚೆನ್ನೈ ಟೆಸ್ಟ್`ನ ನಿನ್ನೆಯ ಆಟ ಎಂದೆಂದಿಗೂ ನೆನಪಿನಲ್ಲಿ ಉಳಿಯುವಂಥದ್ದು. ಕರ್ನಾಟಕದ ಬ್ಯಾಟ್ಸ್`ಮನ್ ಕರುಣ್ ನಾಯರ್ ರನ್ ಹೊಳೆ ಹರಿಸಿದ ಸಂಭ್ರಮದ ದಿನ. ಕರುಣ್ ನಾಯರ್ ತ್ರಿಶತಕವನ್ನ ಇಡೀ ದೇಶದ ಅಭಿಮಾನಿಗಳು ಸಂಭ್ರಮಿಸಿದ್ಧಾರೆ. ಇಂತಹ ಸಂಭ್ರಮದಲ್ಲೂ ಕರುಣ್ ನಾಯರ್ ತಮ್ಮ ಜೀವನದಲ್ಲಿ ಮರೆಯಲಾಗದ ಕ್ಷಣವೊಂದನ್ನ ಮೆಲುಕು ಹಾಕಿದ್ದಾರೆ.
`ಈ ವರ್ಷಾರಂಭದಲ್ಲಿ ಕೇರಳದಲ್ಲಿ ಬೋಟ್ ಅಪಘಾತದಲ್ಲಿ ಪಾರಾಗಿ ಬಂದ ಬಗ್ಗೆ ಕರುಣ್ ನಾಯರ್ ಹೇಳಿಕೊಂಡಿದ್ದಾರೆ. `ನನಗೆ ಈಜು ಬರುತ್ತಿರಲಿಲ್ಲ. ಅಲ್ಲಿದ್ದ ಜನ ನನ್ನನ್ನ ರಕ್ಷಿಸಿದರು. ನಾನು ನಿಜವಾಗಿಯೂ ಲಕ್ಕಿ ಅದಕ್ಕೆ ಇನ್ನೂ ಬದುಕಿದ್ದೇನೆ' ಎಂದಿದ್ದಾರೆ.
ಇದೇವೇಳೆ, ಮೈದಾನದಲ್ಲಿ ತನ್ನ ಬೆನ್ನು ತಟ್ಟಿ ಬೆಂಬಲಿಸಿದ ಕೆ.ಎಲ್. ರಾಹುಲ್, ಜಡೇಜಾ ಮತ್ತು ಅಶ್ವಿನ್ ಅವರನ್ನ ಕರುಣ್ ಸ್ಮರಿಸಿದ್ಧಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.