
ಕರಾಚಿ(ಮಾ.04): ದುಬೈನಲ್ಲಿ ಆಯೋಜಿಸಲಾಗಿದೆ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿ ಮೊದಲ ಹಂತದ ಪಂದ್ಯಗಳು ಮುಕ್ತಾಯಗೊಂಡಿದೆ. ಇದೀಗ ಟೂರ್ನಿ ಪಾಕಿಸ್ತಾನದಲ್ಲಿ ನಡೆಯುತ್ತಿದೆ. ಪುಲ್ವಾಮಾ ದಾಳಿ ಬಳಿಕ ಲಾಹೋರ್ನಲ್ಲಿ ಆಯೋಜಿಸಲಾದ ಪಂದ್ಯಗಳು ಇದೀಗ ಕರಾಚಿಗೆ ಸ್ಥಳಾಂತರವಾಗಿದೆ. ಇದರ ಬೆನ್ನಲ್ಲೇ PSL ಟೂರ್ನಿಗೆ ಮತ್ತೊಂದು ಶಾಕ್ ಎದುರಾಗಿದೆ.
ಇದನ್ನೂ ಓದಿ: ವೈರಲ್ ಆಯ್ತು ಎಬಿ ಡಿವಿಲಿಯರ್ಸ್ ಸ್ವಿಚ್ ಹಿಟ್ ಸಿಕ್ಸ್!
ಲಾಹೋರ್ ಕ್ವಾಲಂಡರ್ಸ್ ತಂಡದ ಸ್ಟಾರ್ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಇಂಜುರಿ ಸಮಸ್ಯೆಯಿಂದ PSL ಟೂರ್ನಿ ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ವಾಪಾಸಾಗಿದ್ದಾರೆ. ಬೆನ್ನು ನೋವಿಗೆ ತುತ್ತಾಗಿರುವ ಎಬಿ ಡಿವಿಯರ್ಸ್ಗೆ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಎಡಿಬಿ ತವರಿಗೆ ವಾಪಾಸ್ ಆಗಿದ್ದಾರೆ.
ಇದನ್ನೂ ಓದಿ: ಲಕ್ಕಿ ಬ್ಯಾಟ್’ಗೆ ಧೋನಿ ಗುಡ್’ಬೈ..! ಭಾರತೀಯ ಬ್ಯಾಟ್’ಗೆ ಜೈ..!
ವಿದೇಶಿ ಆಟಗಾರರು ಹಾಗೂ ಸ್ಟಾರ್ ಆಟಗಾರರ ಕೊರತೆಯಿಂದ PSL ಟೂರ್ನಿ ಹಲವು ಸಮಸ್ಯೆ ಎದುರಿಸುತ್ತಿದೆ. ಇಷ್ಟೇ ಅಲ್ಲ ಪುಲ್ವಾಮಾ ದಾಳಿ ಬಳಿಕ ಟೂರ್ನಿ ಪ್ರಸಾರದಿಂದ IMG ರಿಲಾಯನ್ಸ್ ಹಿಂದೆ ಸರಿದಿತ್ತು. ಭಾರತದಲ್ಲೂ PSL ಟೂರ್ನಿಯನ್ನ ನಿರ್ಬಂಧಿಸಲಾಗಿದೆ. ಇದೀಗ ಎಬಿ ಡಿವಿಲಿಯರ್ಸ್ ಅಲಭ್ಯತೆ ಟೂರ್ನಿ ಮೇಲೆ ಪರಿಣಾಮ ಬೀರಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.