
ನಿನ್ನೆ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಬಿ ಗುಂಪಿನ ಭಾರತ-ಪಾಕ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಭಾರತ ತಂಡ 164 ಕ್ಕೆ ಆಲ್'ಔಟ್ ಮಾಡಿ 124 ರನ್'ಗಳ ಭಾರಿ ಅಂತರದಿಂದ ಮಣಿಸಿತ್ತು.
ಈ ವಿಜಯಕ್ಕೆ ಭಾರತದಾದ್ಯಂತ ಟೀ ಇಂಡಿಯಾಗೆ ಅಭಿನಂದನೆಗಳ ಮಹಪೂರವೇ ವ್ಯಕ್ತವಾಗಿದ್ದರೆ, ಪಾಕಿಸ್ತಾನಲ್ಲಿ ಆಟಗಾರರಿಗೆ ಬೈಗುಳವೆ ಬೈಗುಳ. ಗಣ್ಯರಿಂದ ಹಿಡಿದು ಸಾಮಾನ್ಯ ಜನರು ಪಾಕ್'ನ ಕಳಪೆಯಾಟದ ಬಗ್ಗೆ ಟೀಕಿಸುತ್ತಿದ್ದಾರೆ.
1992ರ ಏಕದಿನ ವಿಶ್ವಕಪ್ ಗೆಲ್ಲಲು ಪಾಕ್ ತಂಡದ ನೇತೃತ್ವ ವಹಿಸಿದ್ದ ಮಾಜಿ ನಾಯಕ ಹಾಗೂ ಹಾಲಿ ರಾಜಕಾರಣಿ ಇಮ್ರಾನ್ ಖಾನ್ ಅಂತೂ ತಂಡ ಹಾಗೂ ಆಟಗಾರರ ಬಗ್ಗೆ ತುಂಬ ಕೋಪದ್ರಕ್ತರಾಗಿದ್ದಾರೆ. ಟ್ವೀಟ್'ಗಳ ಸರಮಾಲೆಯನ್ನೇ ಮಾಡಿರುವ ಅವರು ' ಪಂದ್ಯವೆಂದ ಮೇಲೆ ಸೋಲು ಗೆಲುವು ಇದ್ದಿದ್ದೆ ಆದರೆ ಪಾಕ್ ತಂಡ ಸ್ವಲ್ಪವೂ ಹೋರಾಟ ನಡಸದೆ ಸೋತಿದೆ. ಪಾಕ್ ತಂಡ ಹಾಗೂ ಮಂಡಳಿಯನ್ನು ಪುನರಚಿಸದೆ ಇದ್ದರೆ ಸೋಲುಗಳ ಸರಮಾಲೆ ಮುಂದುವರಿಯುವುದು ಖಂಡಿತ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.