ಪಟ್ಟು ಬಿಡದ ಮುಂಬೈನಿಂದ ಮರು ಹೋರಾಟ

Published : Jan 12, 2017, 03:19 PM ISTUpdated : Apr 11, 2018, 12:46 PM IST
ಪಟ್ಟು ಬಿಡದ ಮುಂಬೈನಿಂದ ಮರು ಹೋರಾಟ

ಸಾರಾಂಶ

ಪಂದ್ಯದ ನಾಲ್ಕನೇ ದಿನದಂದು ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕುವುದರೊಂದಿಗೆ ಗುಜರಾತ್‌ಗೆ ದಿಟ್ಟ ಪೈಪೋಟಿ ನೀಡಲು ನಿರ್ಧರಿಸಿರುವ ತಂಡದ ಪರ ನಾಯಕ ಆದಿತ್ಯ ತಾರೆ 13 ಮತ್ತು ಸೂರ್ಯಕುಮಾರ್ ಯಾದವ್ 45 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಇಂದೋರ್(ಜ.12): ಬರೋಬ್ಬರಿ ನೂರು ರನ್‌'ಗಳ ಮೊದಲ ಇನ್ನಿಂಗ್ಸ್ ಹಿನ್ನಡೆಯ ಬಳಿಕ ಮತ್ತೆ ಪುಟಿದೆದ್ದು ನಿಂತಿರುವ ಹಾಲಿ ಚಾಂಪಿಯನ್ ಮುಂಬೈ, ಪ್ರತಿಷ್ಠಿತ ರಣಜಿ ಟ್ರೋಫಿ ಫೈನಲ್ ಹಣಾಹಣಿಯಲ್ಲಿ ಗುಜರಾತ್ ವಿರುದ್ಧ ಮರು ಹೋರಾಟಕ್ಕೆ ಇಳಿದಿದೆ.

ಇಲ್ಲಿನ ಹೋಳ್ಕರ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದ ಅಂತ್ಯಕ್ಕೆ ಮುಂಬೈ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 67 ಓವರ್‌ಗಳಲ್ಲಿ 3 ವಿಕೆಟ್‌ಗೆ 208 ರನ್ ಕಲೆಹಾಕಿದ್ದು, ಆ ಮೂಲಕ 108 ರನ್ ಮುನ್ನಡೆ ಕಂಡಿದೆ.

ಪಂದ್ಯದ ನಾಲ್ಕನೇ ದಿನದಂದು ಸ್ಪರ್ಧಾತ್ಮಕ ಮೊತ್ತವನ್ನು ಕಲೆಹಾಕುವುದರೊಂದಿಗೆ ಗುಜರಾತ್‌ಗೆ ದಿಟ್ಟ ಪೈಪೋಟಿ ನೀಡಲು ನಿರ್ಧರಿಸಿರುವ ತಂಡದ ಪರ ನಾಯಕ ಆದಿತ್ಯ ತಾರೆ 13 ಮತ್ತು ಸೂರ್ಯಕುಮಾರ್ ಯಾದವ್ 45 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಶ್ರೇಯಸ್ ಅರ್ಧಶತಕ

ಇತ್ತ ಗುಜರಾತ್‌ನ ಮೊದಲ ಹಂತದ ಹೋರಾಟ ಮುಗಿದ ಬಳಿಕ ದ್ವಿತೀಯ ಇನ್ನಿಂಗ್ಸ್‌ಗೆ ಇಳಿದ ಮುಂಬೈ ಎಚ್ಚರಿಕೆಯ ಹೆಜ್ಜೆ ಇರಿಸಿತು. ಆರಂಭಿಕರಾದ ಅಖಿಲ್ ಹೆರ್ವಾಡ್ಕರ್ (16) ಹಾಗೂ ಪೃಥ್ವಿ ಶಾ (44) ಮೊದಲ ವಿಕೆಟ್‌ಗೆ 54 ರನ್ ಕಲೆಹಾಕಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಅರ್ಧಶತಕ ದಾಖಲಿಸಿದ್ದ ಪೃಥ್ವಿ ಶಾ, ಕೇವಲ 6 ರನ್‌ಗಳಿಂದ ಮತ್ತೊಮ್ಮೆ ಈ ಸಾಧನೆಯಿಂದ ವಂಚಿತರಾದರೆ, ಹೆರ್ವಾಡ್ಕರ್ ಅಸ್ಥಿರ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ, ಈ ಹಂತದಲ್ಲಿ ಜತೆಯಾದ ಶ್ರೇಯಸ್ ಅಯ್ಯರ್ (82) ಹಾಗೂ ಸೂರ್ಯಕುಮಾರ್ ಯಾದವ್ (45) ಮೂರನೇ ವಿಕೆಟ್‌'ಗೆ ಮನೋಜ್ಞ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿಯ 127 ರನ್‌'ಗಳ ಅದ್ಭುತ ಜತೆಯಾಟವು ಗುಜರಾತ್ ಹಿನ್ನಡೆ ಅನುಭವಿಸಲು ಕಾರಣವಾಯಿತು. ಸೂರ್ಯಕುಮಾರ್ ನಿಧಾನಗತಿಯ ಆಟಕ್ಕೆ ಮೊರೆ ಹೋದರೆ, ಶ್ರೇಯಸ್ ಅಯ್ಯರ್ ಆಕ್ರಮಣಕಾರಿ ಆಟದಿಂದ ಯಶಸ್ವಿ ಅರ್ಧಶತಕ ಪೂರೈಸಿದರೂ, ಶತಕದಿಂದ ವಂಚಿತವಾದರು.

ಮಧ್ಯಮ ವೇಗಿ ಚಿಂತನ್ ಗಜ ಮೂರು ವಿಕೆಟ್ ಗಳಿಸಿದರೆ, ಮಿಕ್ಕವರು ವಿಕೆಟ್ ಪಡೆಯುವಲ್ಲಿ ವಿಫಲವಾದರು.

ಮೂರಂಕಿ ಮುನ್ನಡೆ

ಇದಕ್ಕೂ ಮುನ್ನ ಎರಡನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್‌ಗೆ 291 ರನ್‌'ಗಳಿಂದ ಆಟ ಮುಂದುವರೆಸಿದ ಗುಜರಾತ್, ಬಾಲಂಗೋಚಿಗಳ ತಿಣುಕಾಟದ ಆಟದೊಂದಿಗೆ ಪ್ರಯಾಸದಿಂದಲೇ 100 ರನ್ ಮುನ್ನಡೆ ಕಂಡಿತು. ಉಳಿದ ನಾಲ್ಕು ವಿಕೆಟ್‌'ಗಳಿಂದ ಅದು ಗಳಿಸಿದ್ದು ಕೇವಲ 37 ರನ್‌'ಗಳನ್ನಷ್ಟೆ. ಹದಿನಾರು ರನ್ ಗಳಿಸಿದ್ದ ರುಶ್ ಕುಲಾರಿಯಾ ಅದಕ್ಕೆ 11 ರನ್ ಪೇರಿಸಿ ಬಲ್ವೀಂದರ್ ಸಿಂಗ್ ಬೌಲಿಂಗ್‌ನಲ್ಲಿ ಎಲ್‌'ಬಿ ಬಲೆಗೆ ಬಿದ್ದರೆ, ಯಾವುದೇ ರನ್ ಗಳಿಸದೆ ಕ್ರೀಸ್‌'ನಲ್ಲಿದ್ದ ಚಿರಾಗ್ ಗಾಂಧಿ 17 ರನ್‌'ಗೆ ವಿಕೆಟ್ ಒಪ್ಪಿಸಿದರು. ಮಿಕ್ಕವರ ಪೈಕಿ ಚಿಂತನ್ ಗಜ 11 ರನ್ ಗಳಿಸಿ ಅಜೇಯರಾಗುಳಿದರೆ, ಆರ್.ಪಿ. ಸಿಂಗ್ (8) ಮತ್ತು ಹಾರ್ದಿಕ್ ಪಟೇಲ್ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಮುಂಬೈ ಪರ ವೇಗಿ ಶಾರ್ದೂಲ್ ಠಾಕೂರ್ 84ಕ್ಕೆ 4 ವಿಕೆಟ್ ಗಳಿಸಿದರೆ, ಬಲ್ವೀಂದರ್ ಸಂಧು ಮತ್ತು ಅಭಿಷೇಕ್ ನಾಯರ್ ತಲಾ ಮೂರು ವಿಕೆಟ್ ಉರುಳಿಸಿದರು.

ಸ್ಕೋರ್ ವಿವರ

ಮುಂಬೈ ಮೊದಲ ಇನ್ನಿಂಗ್ಸ್: 228

ಗುಜರಾತ್ ಮೊದಲ ಇನ್ನಿಂಗ್ಸ್: 328

ಮುಂಬೈ ದ್ವಿತೀಯ ಇನ್ನಿಂಗ್ಸ್: 208/3

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?