
ರಾಂಚಿ(ಜೂನ್.4): ಟೀಮ್ಇಂಡಿಯಾ ಕ್ರಿಕೆಟಿಗ ಎಮ್ ಎಸ್ ಧೋನಿ ಪ್ರತಿ ಸರಣಿಗೂ ಮುನ್ನ ಹಾಗೂ ಸರಣಿ ಬಳಿಕ ರಾಂಚಿಯ ಧಿಯೋರಿ ಬಳಿ ಇರುವ ದುರ್ಗಾ ಮಂದಿರಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಹನ್ನೊಂದನೇ ಆವೃತ್ತಿ ಐಪಿಎಲ್ ಟ್ರೋಫಿ ಗೆದ್ದ ಬಳಿಕ ಧೋನಿ ಇದೀಗ ದುರ್ಗಾ ಮಂದಿರಕ್ಕೆ ಭೇಟಿ ನೀಡಡಿ ಪೂಜೆ ಸಲ್ಲಿಸಿದ್ದಾರೆ.
2 ವರ್ಷದ ನಿಷೇಧದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟೂರ್ನಿಗೆ ಮರಳಿತ್ತು. ಎಮ್ ಎಸ್ ಧೋನಿ ನಾಯಕತ್ವದ ಸಿಎಸ್ಕೆ ಈ ಬಾರಿ ಅದ್ಬುತ ಪ್ರದರ್ಶನ ನೀಡಿ 3ನೇ ಬಾರಿಗೆ ಐಪಿಎಲ್ ಟ್ರೋಫಿ ವಶಪಡಿಸಿಕೊಂಡು ದಾಖಲೆ ಬರೆಯಿತು. ಎಂದಿನಂತೆ ಸರಣಿ ಬಳಿಕ ದಿಯೋರಿಯ ದುರ್ಗಾ ಮಂದಿರಕ್ಕೆ ಭೇಟಿ ನೀಡುವ ಧೋನಿ ತನ್ನ ಸಂಪ್ರದಾಯವನ್ನ ತಪ್ಪಿಸಲಿಲ್ಲ.
ದಿಯೋರಿಯ ದುರ್ಗಾ ಮಾತೆ ಮಂದಿರಕ್ಕೆ ತೆರಳಿದ ಧೋನಿ ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸಿದರು. ಈ ವೇಳೆ ಧೋನಿಯನ್ನ ನೋಡಲು ಅಭಿಮಾನಿಗಳು ಸುತ್ತುವರಿದರು. 2010 ಹಾಗೂ 2011ರ ಐಪಿಎಲ್ ಟ್ರೋಫಿ ಗೆದ್ದ ಸಂದರ್ಭದಲ್ಲೂ ಧೋನಿ ಧಿಯೋರಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಇನ್ನು 2011ರ ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕವೂ ಧೋನಿ ದುರ್ಗಾ ಮಾತೆಯ ಆರ್ಶಿರ್ವಾದ ಪಡೆದಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.