
ನವದೆಹಲಿ(ಜ.16): ಧೋನಿ ಟೀಂ ಇಂಡಿಯಾ ನಾಯಕತ್ವಕ್ಕೆ ರಾಜಿನಾಮೆ ಕೊಟ್ಟಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇಂಗ್ಲೆಂಡ್ ವಿರುದ್ಧ ಭಾನುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿಗಿಂತ ಮೊದಲೇ ಡಿಆರ್'ಎಸ್'ಗೆ ಮನವಿ ಮಾಡುವ ಮೂಲಕ ಸಾಕಷ್ಟು ಅಚ್ಚರಿ ಮೂಡಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಇಯಾನ್ ಮಾರ್ಗನ್ ಬ್ಯಾಟ್ ಸವರಿದ ಚೆಂಡು ಕೀಪರ್ ಧೋನಿಯ ಕೈ ಸೇರಿತು. ಪಾಂಡ್ಯ ಸೇರಿದಂತೆ ಇಡೀ ತಂಡವೇ ಔಟ್'ಗೆ ಮನವಿ ಮಾಡಿದರೂ ಅಂಪೈರ್ ಅವರ ಮನವಿಯನ್ನು ಪುರಸ್ಕರಿಸಲಿಲ್ಲ. ಈ ವೇಳೆ ತಡ ಮಾಡದ ಧೋನಿ ನಾಯಕ ಕೊಹ್ಲಿಗಿಂತ ಮೊದಲ ಡಿಆರ್'ಎಸ್'ಗಾಗಿ ಮನವಿ ಮಾಡಿದರು...
ನಿಯಮದಂತೆ ಕ್ಷೇತ್ರ ರಕ್ಷಣೆ ಮಾಡುವ ತಂಡದ ನಾಯಕ ಅಂಪೈರ್ ಬಳಿ ಡಿಆರ್'ಎಸ್'ಗೆ ಮನವಿ ಮಾಡಬೇಕು. ಆದರೆ ಇಲ್ಲಿ ಧೋನಿಯೇ ಮೊದಲು ಡಿಆರ್'ಎಸ್'ಗೆ ಮನವಿ ಸಲ್ಲಿಸಿದ್ದು ನೋಡಿದರೆ, ಧೋನಿಯ ಹವಾ ಇನ್ನೂ ಚಾಲ್ತಿಯಲ್ಲಿದೆ ಇನ್ನುವುದಕ್ಕೆ ಇದೊಂದು ನಿದರ್ಶನವಷ್ಟೆ....
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.