ಮುಂದಿನ ಐಪಿಎಲ್‌ಗೆ ತಮಿಳು ಕಲೀತಾರೆ ಧೋನಿ- ಕೊಹ್ಲಿ ಕನ್ನಡ ಕಲೀತಾರ?

Published : Aug 05, 2018, 06:12 PM IST
ಮುಂದಿನ ಐಪಿಎಲ್‌ಗೆ ತಮಿಳು ಕಲೀತಾರೆ ಧೋನಿ- ಕೊಹ್ಲಿ ಕನ್ನಡ ಕಲೀತಾರ?

ಸಾರಾಂಶ

ಐಪಿಎಲ್ ಟೂರ್ನಿಯ ಅತ್ಯಂತ ಯಶಸ್ವಿ ನಾಯಕ ಎಂ ಎಸ್ ಧೋನಿ ಇದೀಗ ತಮಿಳು ಕಲಿಯಲು ಮುಂದಾಗಿದ್ದಾರೆ. ತಮಿಳುನಾಡು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗಾಗಿ ಧೋನಿ ತಮಿಳು ಕಲಿಯಲು ನಿರ್ಧರಿಸಿದ್ದಾರೆ. ಆದರೆ ಕನ್ನಡಿಗರಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕನ್ನಡ ಕಲಿಯೋದು ಯಾವಾಗ? ಇಲ್ಲಿದೆ ಉತ್ತರ.

ಚೆನ್ನೈ(ಆ.05): ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿಯ ಎರಡನೇ ತವರು ಚೆನ್ನೈ. ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಮುನ್ನಡೆಸುತ್ತಿರುವ ಧೋನಿ ಎಂದರೆ ತಮಿಳುನಾಡಿ ಜನತೆಗೆ ತಲೈವಾ. ಧೋನಿ ಕೂಡ ಅಷ್ಟೇ ಚೆನ್ನೆೈ ಹಾಗೂ ತಮಿಳುನಾಡಿನ ಜನರ ಮೇಲೆ ವಿಶೇಷ ಪ್ರೀತಿ ಹೊಂದಿದ್ದಾರೆ.

ಐಪಿಎಲ್ ಟೂರ್ನಿ ವೇಳೆ ಧೋನಿ ಹಲವು ಬಾರಿ ತಮಿಳಿನಲ್ಲಿ ಕೆಲ ಶಬ್ದ ಮಾತನಾಡಿದ್ದಾರೆ. ಇದೀಗ ಮುಂದಿನ ಐಪಿಎಲ್ ಟೂರ್ನಿ ವೇಳೆಗೆ ಪಕ್ಕಾ ತಮಿಳು ಮಾತನಾಡೋದಾಗಿ ಧೋನಿ ಭರವಸೆ ನೀಡಿದ್ದಾರೆ. 

ತಮಿಳುನಾಡು ಪ್ರಿಮಿಯರ್ ಲೀಗ್ ಟೂರ್ನಿಗೆ ದಿಢೀರ್ ಭೇಟಿ ನೀಡಿ ಎಂ ಎಸ್ ಧೋನಿ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದರು. ಮಧುರೈ ಪ್ಯಾಂಥರ್ಸ್ ಹಾಗೂ ಕೊವೈ ಕಿಂಗ್ಸ್ ನಡುವಿನ ಪಂದ್ಯಕ್ಕೆ ಹಾಜರಾದ ಧೋನಿಗೆ ಅಭಿಮಾನಿಗಳು ಅಭೂತಪೂರ್ವ ಸ್ವಾಗತ ನೀಡಿದರು. ಟಾಸ್ ವೇಳೆ ತಮಿಳಿನಲ್ಲಿ ಮಾತನಾಡಲು ಪ್ರಯತ್ನಿಸಿದ ಧೋನಿ ಮುಂದಿನ ಐಪಿಎಲ್ ಟೂರ್ನಿ ವೇಳೆ ಸ್ಪಷ್ಟ ತಮಿಳು ಮಾತನಾಡೋದಾಗಿ ಹೇಳಿದ್ದಾರೆ.

 

 

ಧೋನಿ ಈಗಾಗಲೇ ಹಲವು ಭಾರಿ ತಮಿಳಿನಲ್ಲಿ ಮಾತನಾಡಿ ತಮಿಳುನಾಡಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಧೋನಿ ಮಾತ್ರವಲ್ಲ ಕಳೆದ 11 ವರ್ಷಗಳಿಂದ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವನ್ನ ಪ್ರತಿನಿಧಿಸುತ್ತಿರುವ ವಿರಾಟ್ ಕೊಹ್ಲಿ ಕೂಡ ಕನ್ನಡದಲ್ಲಿ ಮಾತನಾಡಿದ್ದಾರೆ.  ಮುಂದಿನ ಐಪಿಎಲ್ ಟೂರ್ನಿ ವೇಳೆಗೆ ಧೋನಿ ರೀತಿ, ಕೊಹ್ಲಿ ಕೂಡ ಕನ್ನಡ ಮಾತನಾಡಲು ಪ್ರಯತ್ನಿಸಿದ್ದರೆ ಅದಕ್ಕಿಂತ ಹೆಮ್ಮೆಯ ವಿಚಾರ ಮತ್ತೊಂದಿಲ್ಲ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Gambhir vs Sreesanth: 'ದೇಶದ್ರೋಹಿ' ಪದ ಬಳಕೆ; ಭಾರತಕ್ಕೆ ಗೌತಮ್ ಗಂಭೀರ್‌ನಂತಹ ಕೋಚ್ ಬೇಕಿಲ್ಲ-ಶ್ರೀಶಾಂತ್!
ಇಂಗ್ಲೆಂಡ್ ಎದುರಿನ ಸರಣಿಯಿಂದಲೂ ಹೊರಬಿದ್ದ ಹಾರ್ದಿಕ್ ಪಾಂಡ್ಯ; ಕೊಹ್ಲಿ ಬಗ್ಗೆಯೂ ಸಿಕ್ತು ಮಹತ್ವದ ಅಪ್‌ಡೇಟ್