
ಕೊಲೊಂಬೊ(ಜೂ.27): ಶ್ರೀಲಂಕಾದ ಕ್ರೀಡಾ ಸಚಿವ ದಯಸಿರಿ ಜಯಶೇಖರ ಅವರನ್ನು ‘ಕೋತಿ’ಗೆ ಹೋಲಿಸಿದ್ದ ಲಸಿತ್ ಮಾಲಿಂಗ ಅವರ ವಿಚಾರಣೆ ನಡೆಸಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
ಈ ಸಂಬಂಧ ತ್ರಿಸದಸ್ಯ ಸಮಿತಿಯೊಂದನ್ನು ರಚನೆ ಮಾಡಲಾಗಿದ್ದು ಲಂಕಾ ಮಂಡಳಿ ಕಾರ್ಯದರ್ಶಿ ಮೊಹನ್ ಡಿ ಸಿಲ್ವಾ ಹಾಗೂ ಸಿಇಓ ಆಶ್ಲೆ ಡಿ ಸಿಲ್ವಾ ಈ ಸಮಿತಿಯಲ್ಲಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಲೀಗ್ ಹಂತದಲ್ಲೇ ನಿರ್ಗಮಿಸಿದ ಲಂಕಾ ತಂಡದ ಆಟಗಾರರ ದೈಹಿಕ ಕ್ಷಮತೆಯನ್ನು ಕ್ರೀಡಾ ಸಚಿವರು ಪ್ರಶ್ನಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡುವಾಗ ಮಾಲಿಂಗ, ಸುಮ್ಮನೆ ಕುರ್ಚಿ ಬಿಸಿ ಮಾಡುವವರ ಟೀಕೆಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಕ್ರಿಕೆಟ್ ಬಗ್ಗೆ ಆ ಮಂಗನಿಗೇನು ಗೊತ್ತು ಎಂಬರ್ಥದಲ್ಲಿ ಶ್ರೀಲಂಕಾ ವೇಗಿ ವ್ಯಂಗ್ಯವಾಡಿದ್ದರು.
ಲೀಗ್ ಹಂತದಲ್ಲೇ ಹೊರಬಿದ್ದ ತಂಡವನ್ನು ಟೀಕಿಸುವ ಎಲ್ಲಾ ಅಧಿಕಾರ ಶ್ರೀಲಂಕಾ ಕ್ರೀಡಾ ಸಚಿವರಿಗಿದೆ. ಆದರೆ ಮಾಲಿಂಗ ಪರಿಸ್ಥಿತಿಯನ್ನು ಮೃದುವಾಗಿ ನಿಭಾಯಿಸಬಹುದಿತ್ತು. ಆದರೆ ಕ್ರೀಡಾ ಸಚಿವರ ಮೇಲೆ ವೈಯುಕ್ತಿಕ ಟೀಕೆ ಮಾಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಂತಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.