ಕೆಪಿಎಲ್: ಇಂದು ಬೆಂಗಳೂರು-ಮೈಸೂರಿನ ನಡುವೆ ಮೊದಲ ಸೆಮೀಸ್ ಕಾದಾಟ

Published : Sep 04, 2018, 12:44 PM ISTUpdated : Sep 09, 2018, 08:49 PM IST
ಕೆಪಿಎಲ್: ಇಂದು ಬೆಂಗಳೂರು-ಮೈಸೂರಿನ ನಡುವೆ ಮೊದಲ ಸೆಮೀಸ್ ಕಾದಾಟ

ಸಾರಾಂಶ

ಲೀಗ್ ಹಂತದಲ್ಲಿ ಅಜೇಯವಾಗಿ ಉಳಿದ ರಾಬಿನ್ ಉತ್ತಪ್ಪ ನೇತೃತ್ವದ ಬೆಂಗಳೂರು ಬ್ಲಾಸ್ಟರ್ಸ್ ಅಂಕಪಟ್ಟಿಯಲ್ಲಿ (11) ಅಗ್ರಸ್ಥಾನ ಪಡೆದಿದ್ದರೆ, 9 ಅಂಕ ಕೂಡಿ ಹಾಕಿರುವ ಹುಬ್ಬಳ್ಳಿ ಟೈಗರ್ಸ್ 2ನೇ ಸ್ಥಾನದಲ್ಲಿದೆ. ಬಿಜಾಪುರ ಬುಲ್ಸ್ (8 ಅಂಕ) ಮತ್ತು ಮೈಸೂರು ವಾರಿಯರ್ಸ್‌ (6 ಅಂಕ) ಕ್ರಮವಾಗಿ 3 ಮತ್ತು 4ನೇ ಸ್ಥಾನ ಪಡೆದು ಉಪಾಂತ್ಯ ಪ್ರವೇಶಿಸಿವೆ. 

ಮೈಸೂರು[ಸೆ.04]: 7ನೇ ಆವೃತ್ತಿಯ ಕೆಪಿಎಲ್ ಪಂದ್ಯಾವಳಿಯ ಲೀಗ್ ಹಂತದ ಪಂದ್ಯಗಳಿಗೆ ಸೋಮವಾರ ತೆರೆಬಿದ್ದಿದ್ದು, ಇಂದು ಹಾಗೂ ನಾಳೆ ಸೆಮಿಫೈನಲ್ ನಡೆಯಲಿದೆ. ಹಾಲಿ ಚಾಂಪಿಯನ್ ಬೆಳಗಾವಿ ಪ್ಯಾಂಥರ್ಸ್‌ ಆಡಿರುವ 6 ಪಂದ್ಯಗಳಲ್ಲಿ ಕೇವಲ 2ರಲ್ಲಿ ಮಾತ್ರ ಜಯ ಸಾಧಿಸಿ ಪಟ್ಟಿಯಲ್ಲಿ 5ನೇ ಸ್ಥಾನದೊಂದಿಗೆ ಸೆಮೀಸ್ ರೇಸ್‌ನಿಂದ ಹೊರಬಿದ್ದಿದೆ. 

ಲೀಗ್ ಹಂತದಲ್ಲಿ ಅಜೇಯವಾಗಿ ಉಳಿದ ರಾಬಿನ್ ಉತ್ತಪ್ಪ ನೇತೃತ್ವದ ಬೆಂಗಳೂರು ಬ್ಲಾಸ್ಟರ್ಸ್ ಅಂಕಪಟ್ಟಿಯಲ್ಲಿ (11) ಅಗ್ರಸ್ಥಾನ ಪಡೆದಿದ್ದರೆ, 9 ಅಂಕ ಕೂಡಿ ಹಾಕಿರುವ ಹುಬ್ಬಳ್ಳಿ ಟೈಗರ್ಸ್ 2ನೇ ಸ್ಥಾನದಲ್ಲಿದೆ. ಬಿಜಾಪುರ ಬುಲ್ಸ್ (8 ಅಂಕ) ಮತ್ತು ಮೈಸೂರು ವಾರಿಯರ್ಸ್‌ (6 ಅಂಕ) ಕ್ರಮವಾಗಿ 3 ಮತ್ತು 4ನೇ ಸ್ಥಾನ ಪಡೆದು ಉಪಾಂತ್ಯ ಪ್ರವೇಶಿಸಿವೆ.  ಬಳ್ಳಾರಿ ಮತ್ತು ಶಿವಮೊಗ್ಗ ಆಡಿರುವ 5 ಪಂದ್ಯಗಳಲ್ಲೂ ಸೋತು ಟೂರ್ನಿಯಿಂದ ಹೊರ ನಡೆದಿವೆ. 

ಇಂದು ನಡೆಯುವ ಮೊದಲ ಸೆಮೀಸ್‌ನಲ್ಲಿ ಬೆಂಗಳೂರು, ಮೈಸೂರು ಸವಾಲನ್ನು ಎದುರಿಸಲಿದೆ. ಬುಧವಾರ ನಡೆಯಲಿರುವ 2ನೇ ಸೆಮಿಫೈನಲ್‌ನಲ್ಲಿ ಮಾಜಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್‌, ಹಾಲಿ ರನ್ನರ್ ಅಪ್ ಬಿಜಾಪುರ ಬುಲ್ಸ್ ಎದುರು ಸೆಣಸಲಿದೆ.  ಸೆ.6ರ ಗುರುವಾರ ಫೈನಲ್ ಪಂದ್ಯ ನಡೆಯಲಿದೆ. ಪಂದ್ಯಗಳು ಮೈಸೂರಿನ ಒಡೆಯರ್ ಮೈದಾನದಲ್ಲಿ ಸಂಜೆ 6.30ಕ್ಕೆ ಆರಂಭವಾಗಲಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಮಾನದಲ್ಲಿ ಚಾಹಲ್ ಕೈಯಲ್ಲಿ ಇ-ಸಿಗರೇಟ್? ಅರ್ಶದೀಪ್ ವಿಡಿಯೋದಿಂದ ಶುರುವಾಯ್ತು ಸಂಕಷ್ಟ
T20 World Cup ಗೆದ್ದರೂ ಸೂರ್ಯಕುಮಾರ್‌ಗೆ ಬಂತು ಕುತ್ತು ! ಟೀಂ ಇಂಡಿಯಾ ಕ್ಯಾಪ್ಟನ್‌ ಆಗಿ ಹೊಸ ಆಟಗಾರ ಎಂಟ್ರಿ?