
ಮೈಸೂರು(ಆ.29): ಶಿವಮೊಗ್ಗ ಲಯನ್ಸ್ ತಂಡಕ್ಕೆ ನಾಯಕ ಅಭಿಮನ್ಯು ಮಿಥುನ್ ವಾಪಾಸ್ಸಾದರೂ ಗೆಲುವು ಮಾತ್ರ ಸಿಗುತ್ತಿಲ್ಲ. ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ನಡೆದ ಕೆಪಿಎಲ್ 16ನೇ ಲೀಗ್ ಪಂದ್ಯದಲ್ಲಿ ಶಿವಮೊಗ್ಗ ಮತ್ತೆ ಸೋಲಿನ ಕಹಿ ಅನುಭವಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಶಿವಮೊಗ್ಗ ಲಯನ್ಸ್ 8 ವಿಕೆಟ್ ನಷ್ಟಕ್ಕೆ 163 ರನ್ ಸಿಡಿಸಿತು. ನಿಹಾಲ್ ಉಲ್ಲಾಲ್ 34 ಹಾಗೂ ಅನಿರುದ್ ಜೋಶಿ 54 ರನ್ ಕಾಣಿಕೆ ನೀಡಿದರು. ಭಾರತ ಎ ತಂಡದಿಂದ ಮರಳಿದ ಅಭಿಮನ್ಯು ಮಿಥುನ್ 23 ರನ್ ಸಿಡಿಸಿದರು.
164 ರನ್ ಟಾರ್ಗೆಟ್ ಪಡೆದ ಬೆಳಗಾವಿ ಪ್ಯಾಂಥರ್ಸ್ ದಿಟ್ಟ ಹೋರಾಟ ನೀಡಿತು. ದಿಕ್ಷಾಂಶು ನೇಗಿ 54 ರನ್ ಸಿಡಿಸಿದರು. ನಾಯಕ ಸ್ಟುವರ್ಟ್ ಬಿನ್ನಿ 32 ರನ್ ಸಿಡಿಸಿದರು. ಅವಿನಾಶ್ ಡಿ ಅಜೇಯ 35 ರನ್ ಸಿಡಿಸೋ ಮೂಲಕ ಬೆಳಗಾವಿ 19.3 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.