ರಣಜಿ ಟ್ರೋಫಿ ಹೈಲೈಟ್ಸ್: ಐತಿಹಾಸಿಕ ಪಂದ್ಯದಲ್ಲಿ ಸೋಲು ತಪ್ಪಿಸಿಕೊಂಡ ಮುಂಬೈ

Published : Nov 12, 2017, 08:23 PM ISTUpdated : Apr 11, 2018, 12:42 PM IST
ರಣಜಿ ಟ್ರೋಫಿ ಹೈಲೈಟ್ಸ್: ಐತಿಹಾಸಿಕ ಪಂದ್ಯದಲ್ಲಿ ಸೋಲು ತಪ್ಪಿಸಿಕೊಂಡ ಮುಂಬೈ

ಸಾರಾಂಶ

ಮುಂಬೈ ರಣಜಿ ತಂಡವು 500ನೇ ಐತಿಹಾಸಿಕ ಪಂದ್ಯವನ್ನಾಡಿತು. ಬರೋಡದ ಮಾರಕ ದಾಳಿಗೆ ತತ್ತರಿಸಿದ ಮುಂಬೈ ಬಹುತೇಕ ಸೋಲಿನ ದವಡೆಯಲ್ಲಿತ್ತು. ಆ ವೇಳೆ ಮುಂಬೈ ಪರ ತಾಳ್ಮೆಯ ಬ್ಯಾಟಿಂಗ್ ನಡೆಸಿದ ಅಭಿಷೇಕ್ ನಾಯರ್ 108 ಎಸೆತಗಳನ್ನು ಎದುರಿಸಿ ಕೇವಲ 8 ರನ್ ಬಾರಿಸುವ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಂತೆ ಮಾಡಿದರು.

ಬೆಂಗಳೂರು(ನ.12): ಬೆಂಗಳೂರು ಹಾಗೂ ಡೆಲ್ಲಿ ನಡುವಿನ ಪಂದ್ಯವೂ ಸೇರಿದಂತೆ ಒಟ್ಟು 9 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ.

ಅದರಲ್ಲೂ ಮುಂಬೈ ರಣಜಿ ತಂಡವು 500ನೇ ಐತಿಹಾಸಿಕ ಪಂದ್ಯವನ್ನಾಡಿತು. ಬರೋಡದ ಮಾರಕ ದಾಳಿಗೆ ತತ್ತರಿಸಿದ ಮುಂಬೈ ಬಹುತೇಕ ಸೋಲಿನ ದವಡೆಯಲ್ಲಿತ್ತು. ಆ ವೇಳೆ ಮುಂಬೈ ಪರ ತಾಳ್ಮೆಯ ಬ್ಯಾಟಿಂಗ್ ನಡೆಸಿದ ಅಭಿಷೇಕ್ ನಾಯರ್ 108 ಎಸೆತಗಳನ್ನು ಎದುರಿಸಿ ಕೇವಲ 8 ರನ್ ಬಾರಿಸುವ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಂತೆ ಮಾಡಿದರು.

ಒಟ್ಟಾರೆ ರಣಜಿ ಕ್ವಿಕ್ ಕವರೇಜ್ ನಿಮ್ಮ ಮುಂದೆ:

ಗುಜರಾತ್ ವಿರುದ್ಧ ಸೌರಾಷ್ಟ್ರಕ್ಕೆ 3 ಅಂಕ:

ಚೇತೇಶ್ವರ್ ಪೂಜಾರ ಮೊದಲ ಇನಿಂಗ್ಸ್'ನಲ್ಲಿ ಬಾರಿಸಿದ 182 ರನ್'ಗಳ ನೆರವಿನಿಂದ ಸೌರಾಷ್ಟ್ರ 570 ರನ್ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಗುಜರಾತ್ 413 ರನ್ ಬಾರಿಸಿ ಸರ್ವಪತನ ಕಂಡಿತು. ಮೊದಲ ಇನಿಂಗ್ಸ್ ಮುನ್ನಡೆ ಪಡೆದ ಸೌರಾಷ್ಟ್ರ 3 ಅಂಕ ಗಳಿಸಿತು.

500ನೇ ಐತಿಹಾಸಿಕ ಪಂದ್ಯದಲ್ಲಿ ಸೋಲು ತಪ್ಪಿಸಿಕೊಂಡ ಮುಂಬೈ:

ರಣಜಿ ಕ್ರಿಕೆಟ್ ಸಾಮ್ರಾಟ ಮುಂಬೈ ತಂಡ ತನ್ನ 500ನೇ ಐತಿಹಾಸಿಕ ಪಂದ್ಯದಲ್ಲಿ ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕಿಳಿದಿತ್ತು. ಆದರೆ ಬರೋಡ ತಂಡದ ಮಾರಕ ದಾಳಿಗೆ ತತ್ತರಿಸಿದ ಮುಂಬೈ ತಂಡ 171 ರನ್'ಗೆ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಬರೋಡ 575/9 ರನ್ ಬಾರಿಸಿ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕುತ್ತರವಾಗಿ 104/4 ರನ್'ಗಳೊಂದಿಗೆ ಕೊನೆಯ ದಿನದಾಟ ಆರಂಭಿಸಿದ ಮುಂಬೈ ಬ್ಯಾಟ್ಸ್'ಮನ್'ಗಳು ನೆಲಕಚ್ಚಿ ಆಡುವ ಮೂಲಕ (ರಹಾನೆ: 45 ರನ್-134 ಎಸೆತ, ಸೂರ್ಯ ಕುಮಾರ್ ಯಾದವ್ 44 ರನ್- 132 ಎಸೆತ, ಸಿದ್ದಾರ್ಥ್ ಲಾಡ್ 71 ರನ್- 238 ಎಸೆತ ಹಾಗೂ ಅಭಿಷೇಕ್ ನಾಯರ್ 08 ರನ್ 108 ಎಸೆತ) 260/7 ರನ್'ಗೆ ಕೊನೆಯ ದಿನದಾಟ ಮುಗಿಸಿ ಡ್ರಾ ಮಾಡಿಕೊಂಡರು.

ಉಳಿದ ಪಂದ್ಯಗಳ ಫಲಿತಾಂಶ:

ಓಡಿಶಾ Vs ತಮಿಳುನಾಡು- ಡ್ರಾ

ಛತ್ತೀಸ್'ಗಡ್ Vs ಹಿಮಾಚಲ ಪ್ರದೇಶ- ಛತ್ತೀಸ್'ಗಡಕ್ಕೆ ಇನಿಂಗ್ಸ್ 114 ರನ್'ಗಳ ಜಯ

ಜಮ್ಮು ಮತ್ತು ಕಾಶ್ಮೀರ Vs ಜಾರ್ಖಂಡ್ - ಜಮ್ಮು ಮತ್ತು ಕಾಶ್ಮೀರಕ್ಕೆ 106 ರನ್'ಗಳ ಜಯ

ಬೆಂಗಾಲ್ Vs ವಿದರ್ಭ - ವಿದರ್ಭಕ್ಕೆ 10 ವಿಕೆಟ್'ಗಳ ಜಯ

ಮಹಾರಾಷ್ಟ್ರ Vs ರೈಲ್ವೇಸ್ - ಡ್ರಾ

ಸರ್ವೀಸಸ್ Vs ಗೋವಾ - ಡ್ರಾ

ಹರ್ಯಾಣ Vs ರಾಜಸ್ಥಾನ - ಡ್ರಾ

ತ್ರಿಪುರ Vs ಆಂಧ್ರ - ಡ್ರಾ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ತಂಡ ಪ್ರತಿನಿಧಿಸಿದ ಪಾಕಿಸ್ತಾನ ಕಬಡ್ಡಿ ಪಟು, ಇಸ್ಲಾಮಾಬಾದ್‌ನಲ್ಲಿ ಕೋಲಾಹಲ
ಐಪಿಎಲ್ ಹರಾಜಿನ ಬಳಿಕ 4 ಬಲಿಷ್ಠ ತಂಡ ಆಯ್ಕೆ ಮಾಡಿದ ಆರ್. ಅಶ್ವಿನ್; ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಿಲ್ಲ ಸ್ಥಾನ!