ರಣಜಿ ಟ್ರೋಫಿ: ಸ್ಟಾರ್ ಆಟಗಾರರಿಲ್ಲದೇ ಕಣಕ್ಕಿಳಿಯುತ್ತಿದೆ ವಿನಯ್ ಕುಮಾರ್ ಪಡೆ

Published : Oct 08, 2017, 12:03 PM ISTUpdated : Apr 11, 2018, 12:49 PM IST
ರಣಜಿ ಟ್ರೋಫಿ: ಸ್ಟಾರ್ ಆಟಗಾರರಿಲ್ಲದೇ ಕಣಕ್ಕಿಳಿಯುತ್ತಿದೆ ವಿನಯ್ ಕುಮಾರ್ ಪಡೆ

ಸಾರಾಂಶ

ರಾಷ್ಟ್ರೀಯ ತಂಡದಲ್ಲಿ ಪ್ರಭಾವಿ ಪ್ರದರ್ಶನ ತೋರುತ್ತಿರುವ ಮನೀಶ್ ಪಾಂಡೆ ಹಾಗೂ ರಾಹುಲ್ ಅನುಪಸ್ಥಿತಿಯಲ್ಲಿ ರಾಜ್ಯ ತಂಡ ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಬೆಂಗಳೂರು(ಅ.08): ಪ್ರಸಕ್ತ ರಣಜಿ ಟ್ರೋಫಿ ಪಂದ್ಯಾವಳಿಗಾಗಿ 16 ಆಟಗಾರರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು ಸ್ಟಾರ್ ಆಟಗಾರರಾದ ಮನೀಶ್ ಪಾಂಡೆ, ಕರುಣ್ ನಾಯರ್, ಕೆ.ಎಲ್. ರಾಹುಲ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದೆ.

ರಾಷ್ಟ್ರೀಯ ತಂಡದಲ್ಲಿ ಪ್ರಭಾವಿ ಪ್ರದರ್ಶನ ತೋರುತ್ತಿರುವ ಮನೀಶ್ ಪಾಂಡೆ ಹಾಗೂ ರಾಹುಲ್ ಅನುಪಸ್ಥಿತಿಯಲ್ಲಿ ರಾಜ್ಯ ತಂಡ ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಈ ಬಾರಿ ಯುವ ಆಟಗಾರ ಶರತ್ ಶ್ರೀನಿವಾಸ್ ಅವರಿಗೆ 2ನೇ ವಿಕೆಟ್ ಕೀಪರ್ ರೂಪದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಇನ್ನುಳಿದಂತೆ ಈ ಹಿಂದಿನ ಋತುವಿನಲ್ಲಿದ್ದ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಎಂದಿನಂತೆ ಆರ್. ವಿನಯ್ ಕುಮಾರ್ ನಾಯಕರಾಗಿದ್ದಾರೆ.

‘ಎ’ ಗುಂಪಿನಲ್ಲಿರುವ ಕರ್ನಾಟಕ ತಂಡ ಅ.14 ರಂದು ಅಸ್ಸಾಂ ಎದುರು ಸೆಣಸಲಿದೆ.

ಕರ್ನಾಟಕ ತಂಡದ ಪಂದ್ಯಗಳು

* ಅ.14 ರಿಂದ 17 ಅಸ್ಸಾಂ ಎದುರು (ಮೈಸೂರು)

* ಅ.24 ರಿಂದ 27 ಹೈದರಾಬಾದ್ ವಿರುದ್ಧ (ಶಿವಮೊಗ್ಗ)

* ನ.1 ರಿಂದ 4 ಮಹಾರಾಷ್ಟ್ರ ಎದುರು (ಪುಣೆ)

* ನ.9 ರಿಂದ 12 ದೆಹಲಿ ವಿರುದ್ಧ (ಆಲೂರು-೨)

* ನ.17 ರಿಂದ 20 ಉತ್ತರ ಪ್ರದೇಶ ಎದುರು (ಕಾನ್ಪುರ)

* ನ.25 ರಿಂದ 28 ರೈಲ್ವೇಸ್ ವಿರುದ್ಧ (ರೈಲ್ವೇಸ್)

ತಂಡ:

ವಿನಯ್ ಕುಮಾರ್ (ನಾಯಕ), ಆರ್. ಸಮರ್ಥ, ಅಭಿಷೇಕ್ ರೆಡ್ಡಿ, ಮಾಯಾಂಕ್ ಅಗರ್‌ವಾಲ್, ಮಿರ್ ಕುನೈನ್ ಅಬ್ಬಾಸ್, ಪವನ್ ದೇಶಪಾಂಡೆ, ಗೌತಮ್, ಬಿನ್ನಿ, ಮಿಥುನ್, ಎಸ್. ಅರವಿಂದ್, ಶ್ರೇಯಸ್ ಗೋಪಾಲ್, ಜೆ. ಸುಚಿತ್, ನಿಶ್ಚಲ್, ಶರತ್ ಶ್ರೀನಿವಾಸ, ರೋನಿತ್ ಮೋರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?