
ಮೊಹಾಲಿ(ಡಿ. 08): ರಣಜಿ ಟ್ರೋಫಿಯ ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವ ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಧದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆ ಗಳಿಸಿದೆ. ಮಹಾರಾಷ್ಟ್ರದ 163 ರನ್'ಗಳ ಮೊದಲ ಇನ್ನಿಂಗ್ಸ್ ಸ್ಕೋರಿಗೆ ಪ್ರತಿಯಾಗಿ ಕರ್ನಾಟಕ ಎರಡನೇ ದಿನಾಂತ್ಯದಲ್ಲಿ 9 ವಿಕೆಟ್ ನಷ್ಟಕ್ಕೆ 313 ರನ್ ಕಲೆಹಾಕಿದೆ. ಈ ಮೂಲಕ 150 ರನ್'ಗಳ ಭರ್ಜರಿ ಮುನ್ನಡೆ ಗಳಿಸಲು ಯಶಸ್ವಿಯಾಗಿದೆ.
ನಿನ್ನೆ 1 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿದ್ದ ಕರ್ನಾಟಕ ಇಂದು ರನ್ ಬೇಟೆ ಮುಂದುವರಿಸಿತು. ಆರ್.ಸಮರ್ಥ್, ಪವನ್ ದೇಶಪಾಂಡೆ ಅಮೋಘ ಅರ್ಧಶತಕ ದಾಖಲಿಸಿದರು. ಕೌನೇನ್ ಅಬ್ಬಾಸ್, ಸ್ಟುವರ್ಟ್ ಬಿನ್ನಿ ಮತ್ತು ನಾಯಕ ವಿನಯ್ ಕುಮಾರ್ ಉತ್ತಮ ಆಟವಾಡಿದರು.
ಮಹಾರಾಷ್ಟ್ರ ಮೊದಲ ಇನ್ನಿಂಗ್ಸ್ 56 ಓವರ್ 163 ರನ್ ಆಲೌಟ್
(ರೋಹಿತ್ ಮೋಟ್ವಾನಿ 32, ಸ್ವಪ್ನಿಲ್ ಗುಗಲೆ 25 ರನ್ - ಆರ್.ವಿನಯ್ ಕುಮಾರ್ 46/5, ಎಸ್.ಅರವಿಂದ್ 32/2, ಸ್ಟುವರ್ಟ್ ಬಿನ್ನಿ 40/2)
ಕರ್ನಾಟಕ ಮೊದಲ ಇನ್ನಿಂಗ್ಸ್ 101 ಓವರ್ 313/9
(ಪವನ್ ದೇಶಪಾಂಡೆ 70, ಆರ್.ಸಮರ್ಥ್ 64, ಸ್ಟುವರ್ಟ್ ಬಿನ್ನಿ 46, ಕೌನೇನ್ ಅಬ್ಬಾಸ್ 41, ಆರ್.ವಿನಯ್ ಕುಮಾರ್ ಅಜೇಯ 36, ಸಿಎಂ ಗೌತಮ್ 26 ರನ್ - ಅನುಪಮ್ ಸಂಕ್ಲೇಚಾ 69/3, ಮೊಹ್ಸಿನ್ ಸಯ್ಯದ್ 42/2, ಪ್ರದೀಪ್ ಡಾದೆ 80/2)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.