ಗೆಲುವಿನ ಓಟ ಮುಂದುವರೆಸಿದ ಶ್ರೀಕಾಂತ್

Published : Jun 24, 2017, 08:47 AM ISTUpdated : Apr 11, 2018, 12:43 PM IST
ಗೆಲುವಿನ ಓಟ ಮುಂದುವರೆಸಿದ ಶ್ರೀಕಾಂತ್

ಸಾರಾಂಶ

ಭಾರತೀಯ ಎದುರಾಳಿ ಬಿ.ಸಾಯಿ ಪ್ರಣೀತ್‌ ಜತೆ ಕ್ವಾರ್ಟರ್‌ ಫೈನಲ್‌'ನಲ್ಲಿ ಸೆಣೆಸಿದ ಶ್ರೀಕಾಂತ್‌, ಸಿಂಗಾಪುರ್‌ ಓಪನ್‌ ಫೈನಲ್‌ನಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡರು.

ಸಿಡ್ನಿ(ಜೂ.24): ಕಳೆದ ವಾರವಷ್ಟೇ ಇಂಡೋನೇಷ್ಯಾ ಓಪನ್‌ ಪ್ರಶಸ್ತಿ ಗೆದ್ದಿದ್ದ ಭಾರತದ ಕಿದಾಂಬಿ ಶ್ರೀಕಾಂತ್‌, ಆಸ್ಪ್ರೇಲಿಯಾ ಸೂಪರ್‌ ಸೀರಿಸ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌'ಗೆ ಲಗ್ಗೆಯಿಟ್ಟಿದ್ದಾರೆ. 
ಆದರೆ ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಸೈನಾ ನೆಹ್ವಾಲ್‌ ಹಾಗೂ ಪಿ.ವಿ ಸಿಂಧು ಕ್ವಾರ್ಟರ್‌ ಫೈನಲ್‌'ನಲ್ಲಿ ಮುಗ್ಗರಿಸಿ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ.

ಭಾರತೀಯ ಎದುರಾಳಿ ಬಿ.ಸಾಯಿ ಪ್ರಣೀತ್‌ ಜತೆ ಕ್ವಾರ್ಟರ್‌ ಫೈನಲ್‌'ನಲ್ಲಿ ಸೆಣೆಸಿದ ಶ್ರೀಕಾಂತ್‌, ಸಿಂಗಾಪುರ್‌ ಓಪನ್‌ ಫೈನಲ್‌ನಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡರು. ಕೇವಲ 43 ನಿಮಿಷ ನಡೆದ ಕಾದಾಟದಲ್ಲಿ 25-23, 21-17 ನೇರ ಸೆಟ್'ಗಳಲ್ಲಿ ಪ್ರಣೀತ್ ಅವರನ್ನು ಮಣಿಸಿದರು.

ಇನ್ನು ಸೆಮಿಫೈನಲ್‌'ನಲ್ಲಿ ಶ್ರೀಕಾಂತ್‌, ಚೀನಾದ ಯುಕಿ ಶಿ ವಿರುದ್ಧ ಸೆಣಸಾಡಲಿದ್ದಾರೆ.

ಸಿಂಧು, ಸೈನಾಗೆ ನಿರಾಸೆ: ವಿಶ್ವದ ನಂ.1 ಆಟಗಾರ್ತಿ ಚೈನೀಸ್‌ ತೈಪೆಯ ತೈ ತ್ಸು ಯಿಂಗ್‌ ವಿರುದ್ಧ ಸೆಣಸಾಟದಲ್ಲಿ ಪಿ.ವಿ.ಸಿಂಧು ಸೋಲು ಕಂಡರೆ, ಹಾಲಿ ಚಾಂಪಿಯನ್‌ ಸೈನಾ ನೆಹ್ವಾಲ್‌ ವಿಶ್ವದ 6ನೇ ಶ್ರೇಯಾಂಕಿತೆ ಕಳೆದ ಬಾರಿ ರನ್ನರ್‌ ಅಪ್‌ ಆಗಿದ್ದ ಸುನ್‌ ಯು ವಿರುದ್ಧ ಪರಾಭವಗೊಂಡರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?