
ಬೆಂಗಳೂರು(ಆ.05): ಅದೃಷ್ಟದ ತಾಣ ಕಂಠೀರವ ಕ್ರೀಡಾಂಗಣವನ್ನು ಬಿಟ್ಟು ಹೋಗಲು ಸಿದ್ಧವಿಲ್ಲದ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ತಂಡ, ಕರ್ನಾಟಕ ರಾಜ್ಯ ಕ್ರೀಡಾ ಇಲಾಖೆಯಿಂದ ಏನಾದರೂ ಮಾಡಿ ಕ್ರೀಡಾಂಗಣ ಬಳಕೆಗೆ ಅನುಮತಿ ಪಡೆಯಬೇಕು ಎಂದು ಹೋರಾಡುತ್ತಿದೆ. ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದೆ. ಇಷ್ಟು ದಿನ ಕಂಠೀರವವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ (ಕೆಎಎ) ಒತ್ತಡಕ್ಕೆ ಮಣಿಯುತ್ತಿದೆ ಎಂದು ಅಥ್ಲೆಟಿಕ್ಸ್ ಕೋಚ್ಗಳು ಆರೋಪಿಸಿದ್ದಾರೆ.
BFC ಪ್ರಯತ್ನ ವಿಫಲ; ಕಂಠೀರವದಿಂದ ಫುಟ್ಬಾಲ್ ಔಟ್!
ಯಾವುದೇ ಕಾರಣಕ್ಕೂ ಫುಟ್ಬಾಲ್ ನಡೆಸಲು ಒಪ್ಪುವುದಿಲ್ಲ ಎಂದು ಕೆಎಎ ಸಿಇಒ ಎಲ್ವಿಸ್ ಜೋಸೆಫ್ ಪುನರುಚ್ಚರಿಸಿದ್ದಾರೆ. ಆದರೂ ಕೆಲ ಕೋಚ್ಗಳು ತೆರೆ ಮರೆಯಲ್ಲಿ ಜೆಎಸ್ಡಬ್ಲ್ಯು(ಜಿಂದಾಲ್ ಸೌತ್ ವೆಸ್ಟ್)ಗೆ ಕ್ರೀಡಾಂಗಣ ಬಿಟ್ಟುಕೊಡಲು ವ್ಯವಸ್ಥೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು ಚಾಂಪಿಯನ್ಸ್ ತಂಡಗಳಿಗೆ ಕ್ರೀಡಾಂಗಣ ಸಮಸ್ಯೆ
‘ಅಥ್ಲೆಟಿಕ್ಸ್ ಸಂಸ್ಥೆ ಏನಾದರೂ ಕ್ರೀಡಾಂಗಣವನ್ನು ಜೆಎಸ್ಡಬ್ಲ್ಯುಗೆ ಬಿಟ್ಟುಕೊಟ್ಟು ಅಥ್ಲೀಟ್ಗಳಿಗೆ ತೊಂದರೆಯಾಗುವಂತೆ ಮಾಡಿದರೆ, ಉಗ್ರ ಹೋರಾಟ ನಡೆಸುತ್ತೇವೆ. ಕೋಚ್ಗಳೆಲ್ಲರೂ ಒಗ್ಗಟ್ಟಿನಿಂದಿದ್ದೇವೆ’ ಎಂದು ಹೆಸರು ಹೇಳಲು ಇಚ್ಛಿಸದ ಕೋಚ್ ಒಬ್ಬರು ಸುವರ್ಣನ್ಯೂಸ್.ಕಾಂ ಸಹೋದರ ಸಂಸ್ಥೆ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಕಂಠೀರವಕ್ಕೆ ಜೆಎಸ್ಡಬ್ಲ್ಯು ಭೇಟಿ, ಪರಿಶೀಲನೆ!
JSW(ಜಿಂದಾಲ್ ಸೌತ್ ವೆಸ್ಟ್)ಸಂಸ್ಥೆ ಕ್ರೀಡಾ ಇಲಾಖೆ ಹಾಗೂ ಕೆಎಎ ಜತೆ ನಿರಂತರ ಸಂಪರ್ಕದಲಿದೆ ಎನ್ನಲಾಗಿದ್ದು, ಕೆಲ ದಿನಗಳ ಹಿಂದಷ್ಟೇ ಸಂಸ್ಥೆಯ ಕೆಲ ಅಧಿಕಾರಿಗಳು ಕಂಠೀರವ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ‘ಮೈದಾನದ ಅಳತೆ, ಆಸನ ವ್ಯವಸ್ಥೆ, ನೂತನ ಮಲ್ಟಿಜಿಮ್ನ ಫೋಟೋಗಳನ್ನು ಅಧಿಕಾರಿಗಳು ಕ್ಲಿಕ್ಕಿಸಿಕೊಂಡು ಹೋದರು’ ಎಂದು ಕ್ರೀಡಾಂಗಣದ ಸಿಬ್ಬಂದಿ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು. ಗೊಂದಲ, ವಿರೋಧದ ನಡುವೆಯೂ ಜೆಎಸ್ಡಬ್ಲ್ಯು ಸಂಸ್ಥೆ 6ನೇ ಆವೃತ್ತಿಯ ಐಎಸ್ಎಲ್ ಪಂದ್ಯಗಳನ್ನು ಕಂಠೀರವದಲ್ಲಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.