ಸೂಪರ್ ಓವರ್'ನಲ್ಲಿ ಕಮಾಲ್ ಮಾಡಿದ ಬುಮ್ರಾ

Published : Apr 29, 2017, 07:02 PM ISTUpdated : Apr 11, 2018, 01:07 PM IST
ಸೂಪರ್ ಓವರ್'ನಲ್ಲಿ ಕಮಾಲ್ ಮಾಡಿದ ಬುಮ್ರಾ

ಸಾರಾಂಶ

ಕೊನೆ ಎಸೆತದಲ್ಲಿ ಜಡೇಜಾ ಮತ್ತೊಮ್ಮೆ ತಮ್ಮ ಅದ್ಭುತ ಕ್ಷೇತ್ರರಕ್ಷಣೆ ಮೂಲಕ ಕೃನಾಲ್‌'ರನ್ನು ರನೌಟ್ ಮಾಡಿ ಸೂಪರ್ ಓವರ್‌ಗೆ ಕಾರಣರಾದರು.

ರಾಜ್‌'ಕೋಟ್(ಏ.30): ಗುಜರಾತ್ ಲಯನ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವು 10ನೇ ಆವೃತ್ತಿಯ ಐಪಿಎಲ್'ನಲ್ಲಿ ಮೊದಲ ಸೂಪರ್ ಓವರ್‌ಗೆ ಸಾಕ್ಷಿಯಾಯಿತು.

ಉಭಯ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಸ್ಕೋರ್ ಟೈ ಆದ ಕಾರಣ ಪಂದ್ಯದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಬೇಕಾಯಿತು. ಮೊದಲು ಬ್ಯಾಟ್ ಮಾಡಿದ ಮುಂಬೈ ಜೇಮ್ಸ್ ಫಾಲ್ಕನರ್ ಬೌಲಿಂಗ್'ನಲ್ಲಿ 2 ವಿಕೆಟ್ ಕಳೆದುಕೊಂಡು 11 ರನ್ ಗಳಿಸಿದರೆ, ಜಸ್‌ಪ್ರೀತ್ ಬೂಮ್ರಾ ದಾಳಿಗೆ ತತ್ತರಿಸಿದ ಗುಜರಾತ್ ಕೇವಲ 6 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್‌'ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಮುಂಬೈ 20 ಓವರ್‌'ಗಳಲ್ಲಿ 153 ರನ್ ಗಳಿಸಿ ಆಲೌಟ್ ಆಯಿತು. ಸಾಧಾರಣ ಗುರಿ ಬೆನ್ನತ್ತಿದ ಮುಂಬೈಗೆ ಪಾರ್ಥೀವ್ ಪಟೇಲ್ (70) ಆಟ ಸುಲಭ ಗೆಲುವಿನ ಸೂಚನೆ ನೀಡಿತ್ತು. ಆದರೆ ಮಧ್ಯಮ ಕ್ರಮಾಂಕ ದಿಢೀರ್ ಕುಸಿದ ಕಾರಣ, ಕೈಯಲ್ಲಿದ್ದ ಪಂದ್ಯವನ್ನು ಮುಂಬೈ ತನ್ನದಾಗಿಸಿಕೊಳ್ಳಲು ಸಂಕಷ್ಟ ಎದುರಿಸಬೇಕಾಯಿತು.

ಕೊನೆ ಓವರ್‌'ನಲ್ಲಿ ಮುಂಬೈ ಗೆಲ್ಲಲು 12 ರನ್‌'ಗಳ ಅವಶ್ಯಕತೆ ಇತ್ತು. ಕೃನಾಲ್ ಪಾಂಡ್ಯ, ಪಠಾಣ್‌ ಎಸೆದ ಮೊದಲ ಎಸೆತವನ್ನ ಸಿಕ್ಸರ್‌'ಗಟ್ಟಿದರು. ಆದರೆ 2ನೇ ಎಸೆತದಲ್ಲಿ ಒಂಟಿ ರನ್ ಪಡೆದು ನಾನ್-ಸ್ಟ್ರೈಕರ್ ಬದಿಗೆ ತೆರಳಿದರು. 3ನೇ ಎಸೆತದಲ್ಲಿ ಜಡೇಜಾ ಮಾಡಿದ ಚುರುಕಿನ ಕ್ಷೇತ್ರರಕ್ಷಣೆಯಿಂದಾಗಿ ಬೂಮ್ರಾ ರನೌಟ್ ಆದರು. 4ನೇ ಎಸೆತದಲ್ಲಿ 2 ಹಾಗೂ 5ನೇ ಎಸೆತದಲ್ಲಿ ಕೃನಾಲ್ ಒಂದು ರನ್ ಪಡೆದರು. ಕೊನೆ ಎಸೆತದಲ್ಲಿ ಜಡೇಜಾ ಮತ್ತೊಮ್ಮೆ ತಮ್ಮ ಅದ್ಭುತ ಕ್ಷೇತ್ರರಕ್ಷಣೆ ಮೂಲಕ ಕೃನಾಲ್‌'ರನ್ನು ರನೌಟ್ ಮಾಡಿ ಸೂಪರ್ ಓವರ್‌ಗೆ ಕಾರಣರಾದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?