
ಚೆನ್ನೈ(ಏ.09): ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ನಿರ್ಧಾರ, ಬೌಲರ್ ರೋಟೇಶನ್, ಫೀಲ್ಡಿಂಗ್ ಸೆಟಪ್ ಮುಂದೆ ಕೋಲ್ಕತಾ ನೈಟ್ ರೈಡರ್ಸ್ ತಂಡ ಮಕಾಡೆ ಮಲಗಿದೆ. ಆ್ಯಂಡ್ರೆ ರಸೆಲ್ ಹೊರತು ಪಡಿಸಿದರೆ ಉಳಿದ ಘಟಾನುಘಟಿ ಬ್ಯಾಟ್ಸ್ಮನ್ಗಳಾದ ಕ್ರಿಸ್ ಲಿನ್, ರಾಬಿನ್ ಉತ್ತಪ್ಪ ಸೇರಿದಂತೆ ಹಲವು ಬ್ಯಾಟ್ಸ್ಮನ್ಗಳು CSK ದಾಳಿಗೆ ತತ್ತರಿಸಿದರು. ಹೀಗಾಗಿ 108 ರನ್ಗೆ ಆಲೌಟ್ ಆಗಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಕೆಕೆಆರ್ಗೆ ಆರಂಭದಲ್ಲೇ ದೀಪಕ್ ಚಹಾರ್ ಹಾಗೂ ಹರ್ಭಜನ್ ಸಿಂಗ್ ಶಾಕ್ ನೀಡಿದರು. ಕ್ರಿಸ್ ಲಿನ್ ಶೂನ್ಯ, ಸುನಿಲ್ ನರೈನ್ 6, ನಿತೀಶ್ ರಾಣಾ ಡೌಕೌಟ್ ಆದರು. ಇನ್ನು ರಾಬಿನ್ ಉತ್ತಪ್ಪ 11, ನಾಯಕ ದಿನೇಶ್ ಕಾರ್ತಿಕ್ 19 ರನ್ ಸಿಡಿಸಿ ಔಟಾದರು. ಶುಭಮಾನ್ ಗಿಲ್ ಕೇವಲ 9 ರನ್ ಸಿಡಿಸಿ ಔಟಾದರು.
ಪವರ್ ಹಿಟ್ಟರ್ ಆ್ಯಂಡ್ರೆ ರಸೆಲ್ ಒಂದೆಡೆ ಹೋರಾಟ ಆರಂಭಿಸಿದರು. ಅಷ್ಟರಲ್ಲೇ ಧೋನಿ ಸ್ಪಿನ್ನರ್ಗಳಿಗೆ ಹೆಚ್ಚು ಒತ್ತು ನೀಡಿದರು. ಹೀಗಾಗಿ ರಸೆಲ್ ಅಬ್ಬರಿಸಲು ಸಾಧ್ಯವಾಗಲಿಲ್ಲ. ಇನ್ನು ಪಿಯೂಷ್ ಚಾವ್ಲಾ, ಕುಲ್ದೀಪ್ ಯಾದವ್ ಹಾಗೂ ಪ್ರಸಿದ್ಧ ಕೃಷ್ಣ ಬಹುಬೇಗನೆ ಪೆಲಿಯನ್ ಸೇರಿಕೊಂಡರು.
ಏಕಾಂಗಿ ಹೋರಾಟ ನೀಡಿದ ರಸೆಲ್ ಅಜೇಯ 50 ರನ್ ಸಿಡಿಸಿದರು. ಈ ಮೂಲಕ ಕೆಕೆಆರ್ 108 ರನ್ ಸಿಡಿಸಿತು. ದೀಪಕ್ ಚಹಾರ್ 3, ಹರ್ಭಜನ್ ಸಿಂಗ್ ಹಾಗೂ ಇಮ್ರಾನ್ ತಾಹೀರ್ ತಲಾ 2 ವಿಕೆಟ್ ಪಡೆದು ಮಿಂಚಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.