IPL Final: ಮತ್ತೆ ಮತ್ತೆ ನೋಡಬೇಕಿನಿಸುವ ಆ ಒಂದು ಓವರ್...!

Published : May 13, 2019, 01:18 PM IST
IPL Final: ಮತ್ತೆ ಮತ್ತೆ ನೋಡಬೇಕಿನಿಸುವ ಆ ಒಂದು ಓವರ್...!

ಸಾರಾಂಶ

ಕೊನೆಯ ಓವರ್’ನಲ್ಲಿ ಚೆನ್ನೈ ಗೆಲ್ಲಲು 9 ರನ್’ಗಳ ಅವಶ್ಯಕತೆಯಿತ್ತು. 16ನೇ ಓವರ್’ನಲ್ಲಿ 20 ರನ್ ನೀಡಿ ದುಬಾರಿಯಾಗಿದ್ದ ಮಾಲಿಂಗ, ಕೊನೆಯ ಓವರ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಹೀಗಿತ್ತು ನೋಡಿ ಆ ಕೊನೆಯ ಓವರ್...

ಬೆಂಗಳೂರು[ಮೇ.13]: ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್’ಕಿಂಗ್ಸ್ ನಡುವಿನ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ 1 ರನ್’ಗಳ ರೋಚಕ ಜಯ ಸಾಧಿಸಿ ದಾಖಲೆಯ 4ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

IPL 2019: ಚೆನ್ನೈಗೆ ಆಘಾತ- ಮುಂಬೈಗೆ ಚಾಂಪಿಯನ್ ಕಿರೀಟ

ಮುಂಬೈ ನೀಡಿದ್ದ 150 ರನ್’ಗಳ ಗುರಿ ಬೆನ್ನತ್ತಿದ್ದ ಚೆನ್ನೈ ಕೊನೆಯ ಓವರ್’ನಲ್ಲಿ ಆಘಾತಕಾರಿ ಸೋಲು ಕಂಡು ಸತತ ಎರಡನೇ ಬಾರಿಗೆ ಕಪ್ ಗೆಲ್ಲುವ ಅವಕಾಶ ಕೈಚೆಲ್ಲಿತು. ಕೊನೆಯ ಓವರ್’ನಲ್ಲಿ ಚೆನ್ನೈ ಗೆಲ್ಲಲು 9 ರನ್’ಗಳ ಅವಶ್ಯಕತೆಯಿತ್ತು. 16ನೇ ಓವರ್’ನಲ್ಲಿ 20 ರನ್ ನೀಡಿ ದುಬಾರಿಯಾಗಿದ್ದ ಮಾಲಿಂಗ, ಕೊನೆಯ ಓವರ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. 20ನೇ ಓವರ್’ನ ಮೊದಲ ಎಸೆತವನ್ನು ವಾಟ್ಸನ್ ಲಾಂಗ್ ಆನ್’ನತ್ತ ಬಾರಿಸಿ ಕೇವಲ ಒಂದು ರನ್ ಗಳಿಸಿದರು. ಲೋ ಫುಲ್ ಟಾಸ್ ಆಗಿ ಬಂದ ಎರಡನೇ ಎಸೆತದಲ್ಲಿ ಜಡೇಜಾ ಒಂದು ರನ್ ಕಲೆಹಾಕಿದರು. ಮೂರನೇ ಎಸೆತದಲ್ಲಿ ವಾಟ್ಸನ್ 2 ರನ್ ಗಳಿಸುವ ಮೂಲಕ ಚೆನ್ನೈಗೆ ಗೆಲುವಿನ ಆಸೆ ಹುಟ್ಟಿಸಿದರು. ಆದರೆ ನಾಲ್ಕನೇ ಎಸೆತದಲ್ಲಿ ಒಂದು ರನ್’ಗಳಿಸಿ ಎರಡನೇ ರನ್ ಕದಿಯುವ ವೇಳೆ ಡಿಕಾಕ್ ಮಾಡಿದ ಅದ್ಭುತ ರನೌಟ್’ಗೆ ವಾಟ್ಸನ್ ಪೆವಿಲಿಯನ್ ಸೇರಿದರು. ಆಗ ಕೊನೆಯ 2 ಎಸೆತಗಳಲ್ಲಿ 4 ರನ್’ಗಳ ಅವಶ್ಯಕತೆಯಿತ್ತು. 5ನೇ ಎಸೆತದಲ್ಲಿ ಶಾರ್ದೂಲ್ ಠಾಕೂರ್ 2 ರನ್ ಗಳಿಸಿದರು. ಕೊನೆಯ ಎಸೆತವನ್ನು ಮಾಲಿಂಗ್ ಸ್ಲೋ ಲೆಗ್’ಕಟ್ಟರ್ ಹಾಕುವ ಮೂಲಕ ಠಾಕೂರ್ ಎಲ್’ಬಿ ಬಲೆಗೆ ಕೆಡವಿದರು. ಈ ಮೂಲಕ ಮುಂಬೈ ಒಂದು ರನ್ ಅಂತರದ ರೋಚಕ ಜಯ ಸಾಧಿಸಿತು.

ಹೀಗಿತ್ತು ನೋಡಿ ಎದೆ ಬಡಿತ ಹೆಚ್ಚಿಸಿದ ಆ ಕೊನೆಯ ಓವರ್:

ಮುಂಬೈ ಇಂಡಿಯನ್ಸ್ ತಂಡ ಈ ಮೊದಲು 2013, 2015, 2017ರಲ್ಲಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ 2019ರಲ್ಲೂ ರೋಹಿತ್ ಕಪ್ ಜಯಿಸಿದ ಸಾಧನೆ ಮಾಡಿದೆ.    
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?