
ಮುಂಬೈ(ಅ.03): ಉಚಿತ ಟಿಕೆಟ್ ವಿಚಾರಕ್ಕೆ ನಡೆದ ಜಗಳದಿಂದ ಇದೀಗ ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ 2ನೇ ಏಕದಿನ ಪಂದ್ಯ ಸ್ಥಳಾಂತರಗೊಂಡಿದೆ. ಮಧ್ಯಪ್ರದೇಶದ ಇಂದೋರ್ನಲ್ಲಿ ಆಯೋಜಿಸಲಾಗಿದ್ದ 2ನೇ ಏಕದಿನ ಪಂದ್ಯ ಇದೀಗ ವಿಶಾಖಪಟ್ಟಣಂಗೆ ಸ್ಥಳಾಂತರವಾಗಿದೆ.
ಬಿಸಿಸಿಐ ಮತ್ತು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ನಡುವಿನ ಉಚಿತ ಟಿಕೆಟ್ಗಳ ಹಂಚಿಕೆ ವಿವಾದದಿಂದಾಗಿ ಪಂದ್ಯ ಆಯೋಜಿಸಲು ಮದ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಹಿಂದೇಟು ಹಾಕಿತ್ತು. ಪಟ್ಟು ಸಡಿಲಿಸಿದ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಗೆ ಪಾಠ ಕಲಿಸಲು ಮುಂದಾದ ಬಿಸಿಸಿಐ ಇದೀಗ 2ನೇ ಏಕದಿನ ಪಂದ್ಯವನೇ ಸ್ಥಳಾಂತರವನ್ನ ಮಾಡಿದೆ.
ಬಿಸಿಸಿಐ ನೂತನ ನಿಯಮದ ಪ್ರಕಾರ ಪಂದ್ಯದ ಶೇಕಡಾ 90 ರಷ್ಟು ಟಿಕೆಟ್ಗಳನ್ನ ಸಾರ್ವಜನಿಕರ ಮಾರಾಟಕ್ಕೆ ಇಡಬೇಕು. ಇನ್ನುಳಿದ ಶೇಕಡಾ 10 ರಷ್ಟು ಟಿಕೆಟ್ಗಳನ್ನ ಮಾತ್ರ ಕಾಂಪ್ಲಿಮೆಂಟರಿ ಟಿಕೆಟ್ಗಳಾಗಿ ನೀಡಬೇಕು. ಮಧ್ಯಪ್ರದೇಶದ ಇಂದೋರ್ ಕ್ರೀಡಾಂಗಣದ ಒಟ್ಟು ಸಾಮರ್ಥ್ಯ 27,500. ಹೀಗಾಗಿ ಉಚಿತ ಟಿಕೆಟ್ ಸಂಖ್ಯೆ 2750 ಮಾತ್ರ.
2750 ಉಚಿತ ಟಿಕೆಟ್ಗಳಲ್ಲಿ ಪ್ರಾಯೋಜಕರಿಗೆ ಹಂಚಿಲು ಬಿಸಿಸಿಐ ಸೂಚಿಸಿದೆ. ಇದನ್ನ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ನಿರಾಕರಿಸಿತ್ತು. ಹೀಗಾಗಿ ಬಿಸಿಸಿಐ ಇಂದೋರ್ ಪಂದ್ಯವನ್ನ ವಿಶಾಖಪಟ್ಟಂಗೆ ಸ್ಥಳಾಂತರ ಮಾಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.