
ಕೋಲ್ಕತ್ತಾ(ಸೆ.29): ಭಾರತ-ನ್ಯೂಜಿಲೆಂಡ್ ನಡುವೆ ನಾಳೆಯಿಂದ 2ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಮೊದಲ ಟೆಸ್ಟ್ ಗೆದ್ದು ಬೀಗುತ್ತಿರುವ ಭಾರತ ತಂಡ ನಂಬರ್ ಒನ್ ಸ್ಥಾನಕ್ಕೇರಲು 2ನೇ ಟೆಸ್ಟ್ ಸಹ ಗೆಲ್ಲುವ ತವಕದಲ್ಲಿದೆ.
ಕಾನ್ಪುರದಲ್ಲಿ 500ನೇ ಪಂದ್ಯವಾಡಿದ ಭಾರತ ತಂಡ ಕೋಲ್ಕತ್ತಾದಲ್ಲಿ 250ನೇ ಪಂದ್ಯವನ್ನಾಡುತ್ತಿರುವುದು ವಿಶೇಷ. ಗಾಯಾಳು ಕೆ.ಎಲ್. ರಾಹುಲ್ ಬದಲಿಗೆ ಗೌತಮ್ ಗಂಬೀರ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಇಶಾಂತ್ ಶರ್ಮಾ ಸಹ ಚಿಕುನ್ ಗುನ್ಯಾದಿಂದ ಬಳಲುತ್ತಿದ್ದು, ಆಫ್ ಸ್ಪಿನ್ನರ್ ಜಯಂತ್ ಯಾದವ್`ಗೆ ಬುಲಾವ್ ನೀಡಲಾಗಿದೆ.
ಇನ್ನುಳಿದಂತೆ, ಭಾರತದಲ್ಲಿ ನಾವೇ ಕೀಮಗ್ ಎನ್ನುವುದನ್ನ ಸ್ಪಿನ್ನರ್ಸ್ ಸಾಬೀತುಪಡಿಸಿದ್ದು, 2ನೇ ಟೆಸ್ಟ್`ನಲ್ಲಿ ಮುಂದುವರೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.