
ದುಬೈ(ಜೂ.29): ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯಲ್ಲಿ ಭಾರತ ಫೈನಲ್ ಪ್ರವೇಶಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಕೊರಿಯಾ ತಂಡವನ್ನ 36 -20 ಅಂಕಗಳ ಅಂತರದಲ್ಲಿ ಮಣಿಸಿ ಫೈನಲ್ಗೆ ಲಗ್ಗೆ ಇಟ್ಟಿದೆ. ಫೈನಲ್ ಪಂದ್ಯದಲ್ಲಿ ಭಾರತ, ಇರಾನ್ ತಂಡವನ್ನ ಎದುರಿಸಲಿದೆ.
ಮೊದಲು ರೈಡ್ ಮಾಡಿದ ಸೌತ್ ಕೊರಿಯಾ ಆರಂಭದಲ್ಲೇ ಅಂಕ ಖಾತೆ ತೆರೆಯಿತು. ಭಾರತ ಮೊದಲ ರೈಡ್ನಲ್ಲಿ ಅಂಕ ಪಡೆಯದೇ ವಾಪಸ್ಸಾಯಿತು. ಆದರೆ ಅಜಯ್ ಠಾಕೂರ್ ಭಾರತಕ್ಕೆ ಮೊದಲ ಅಂಕ ತಂದುಕೊಟ್ಟರು.
7-3 ಅಂಕಗಳ ಮುನ್ನಡೆ ಸಾಧಿಸಿದ ಸೌತ್ ಕೊರಿಯಾ ಭಾರತೀಯ ಪಾಳಯದಲ್ಲಿ ಆತಂಕಕ್ಕೆ ಸೃಷ್ಟಿಸಿತು. ಆದರೆ ಅಜಯ್ ಠಾಕೂರ್ ಸೂಪರ್ ರೈಡ್ ನಿಂದ ಭಾರತ ಸಮಭಲಗೊಳಿಸಿತು. ಮೋನು ಗೊಯತ್ ರೈಡ್ನಿಂದ ಭಾರತ ಮುನ್ನಡೆ ಸಾಧಿಸಿತು. ಮುನ್ನಡೆ ಬಳಿಕ ಭಾರತ ಎಂದಿನ ಆಟಕ್ಕೆ ಮರಳಿತು. ಸೂಪರ್ ರೈಡ್, ಅದ್ಬುತ ಟ್ಯಾಕಲ್ ಮೂಲಕ ಮೊದಲಾರ್ಧದ ಅಂತ್ಯದಲ್ಲಿ 17-10 ಅಂಕಗಳ ಮುನ್ನಡೆ ಸಾಧಿಸಿತು.
ದ್ವಿತಿಯಾರ್ಧದ ಆರಂಭದಲ್ಲೇ ಸೌತ್ ಕೊರಿಯಾ ತಂಡವನ್ನ ಆಲೌಟ್ ಮಾಡಿದ ಭಾರತ ಮುನ್ನಡೆ ಅಂತರವನ್ನ ಹೆಚ್ಚಿಸಿತು. ಅಂತ್ಯದಲ್ಲಿ ಭಾರತ 36-20 ಅಂಕಗಳ ಅಂತರದಲ್ಲಿ ಸೌತ್ ಕೊರಿಯಾ ತಂಡವನ್ನ ಮಣಿಸಿ ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತು. ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ, ಇರಾನ್ ತಂಡವನ್ನ ಎದುರಿಸಲಿದೆ. ನಾಳೆ(ಜೂ.30) ರಾತ್ರಿ 8 ಗಂಟೆಗೆ ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.