
ಹೈದರಾಬಾದ್(ಅ.15): ಭಾರತ ಹಾಗೂ ವೆಸ್ಟ್ಇಂಡೀಸ್ ವಿರುದ್ದದ ಟೆಸ್ಟ್ ಸರಣಿ ಅಂತ್ಯಗೊಂಡಿದೆ. ಟೀಂ ಇಂಡಿಯಾ 2-0 ಅಂತರದಲ್ಲಿ ಸರಣಿ ಗೆದ್ದು ಬೀಗಿದೆ. ಹೈದರಾಬಾದ್ ಟೆಸ್ಟ್ ಪಂದ್ಯವನ್ನೂ ಮೂರೇ ದಿನಕ್ಕೆ ಮುಗಿಸಿದ ಹೆಗ್ಗಳಿಕೆಗೆ ವಿರಾಟ್ ಸೈನ್ಯ ಪಾತ್ರವಾಯಿತು.
ಈ ಪಂದ್ಯದಲ್ಲಿ ಭಾರತ ಗೆಲುವಿಗೆ 72 ರನ್ ಗುರಿ ಪಡೆದಿತ್ತು. ಈ ಗುರಿ ಬೆನ್ನಟ್ಟುತ್ತಿದ್ದ ಭಾರತಕ್ಕೆ ಆರಂಭಿಕ ಪೃಥ್ವಿ ಶಾ ಹಾಗೂ ಕೆಎಲ್ ರಾಹುಲ್ ಆಸರೆಯಾಗಿದ್ದರು. ಆದರೆ ಅಂಪೈರ್ ಇಯಾನ್ ಗೋಲ್ಡ್ ಪೃಥ್ವಿ ಶಾಗೆ ಆರಂಭದಲ್ಲೇ ಜೀವದಾನ ನೀಡಿದ್ದರು. ತಮ್ಮ ತೀರ್ಪು ತಪ್ಪೆಂದು ತಿಳಿಯುತ್ತಿದ್ದಂತೆ ಮೈದಾನದಲ್ಲಿ ಗೌಲ್ಡ್ ಕ್ಷಮೆ ಕೇಳಿದ್ದಾರೆ.
2ನೇ ಇನ್ನಿಂಗ್ಸ್ನ 5ನೇ ಓವರ್ನಲ್ಲಿ ವಿಂಡೀಸ್ ವೇಗಿ ಜಾಸನ್ ಹೋಲ್ಡರ್ ಎಸೆತ ನೇರವಾಗಿ ಪೃಥ್ವಿ ಶಾ ಕೈಗೆ ಬಡಿದಿತ್ತು. ಔಟ್ಗಾಗಿ ಮನವಿ ಮಾಡಿದರೂ ಇಯಾನ್ ಗೌಲ್ಡ್ ನಾಟೌಟ್ ತೀರ್ಪು ನೀಡಿದ್ದರು. ಆದರೆ ಇದು ಔಟಾಗಿತ್ತು. ತೀರ್ಪು ನೀಡಿದ ಬಳಿಕ ಅಂಪೈರ್ಗೆ ತಪ್ಪು ಅರಿವಾಗಿದೆ. ತಕ್ಷಣದಲ್ಲೇ ಜಾಸನ್ ಹೋಲ್ಡರ್ ಬಳಿ ಕ್ಷಮೆ ಕೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.