ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ ಶ್ರೀಲಂಕಾದ ಮಾಜಿ ಕ್ರಿಕೆಟಿಗರಾದ ನುವಾನ್ ಜೋಯ್ಸಾ ಹಾಗೂ ಆವಿಷ್ಕ ಗುಣವರ್ಧನೆಯನ್ನು ಐಸಿಸಿ ತಾತ್ಕಾಲಿಕ ಅಮಾನತುಗೊಳಿಸಿದೆ.
ದುಬೈ[ಮೇ.11]: ಯುಎಇನಲ್ಲಿ ನಡೆದ ಟಿ10 ಲೀಗ್ ಟೂರ್ನಿಯಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದ ಮೇಲೆ ಶ್ರೀಲಂಕಾದ ಮಾಜಿ ಕ್ರಿಕೆಟಿಗರಾದ ನುವಾನ್ ಜೋಯ್ಸಾ ಹಾಗೂ ಆವಿಷ್ಕ ಗುಣವರ್ಧನೆಯನ್ನು ಐಸಿಸಿ ತಾತ್ಕಾಲಿಕ ಅಮಾನತುಗೊಳಿಸಿದೆ.
ಶ್ರೀಲಂಕಾ ಕ್ರಿಕೆಟ್ ತಂಡ ಅತ್ಯಂತ ಭ್ರಷ್ಟ: ಐಸಿಸಿ
ಈ ಪೈಕಿ ಜೋಯ್ಸಾ ಹಿಂದಿನ ಭ್ರಷ್ಟಾಚಾರ ಆರೋಪದಡಿ ಈಗಾಗಲೇ ಅಮಾನತು ಎದುರಿಸುತ್ತಿದ್ದಾರೆ. ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಪರವಾಗಿ ಐಸಿಸಿ, ಜೋಯ್ಸಾ ಮೇಲೆ 4 ಹಾಗೂ ಗುಣವರ್ಧನೆಯನ್ನು 2 ಆರೋಪಗಳಡಿ ಅಮಾನತುಗೊಳಿಸಿದೆ. ತಮ್ಮ ಮೇಲೆ ಸಲ್ಲಿಸಿರುವ ಆರೋಪಗಳಿಗೆ ಉತ್ತರಿಸಲು ಇಬ್ಬರಿಗೂ 14 ದಿನಗಳ ಕಾಲಾವಕಾಶ ನೀಡಲಾಗಿದೆ.
40 ವರ್ಷದ ನುವಾನ್ ಜೋಯ್ಸಾ ಶ್ರೀಲಂಕಾ ಪರ 30 ಟೆಸ್ಟ್ ಹಾಗೂ 95 ಏಕದಿನ ಪಂದ್ಯಳನ್ನಾಡಿದ್ದರೆ, ಗುಣವರ್ಧನೆ ದ್ವೀಪರಾಷ್ಟ್ರದ ಪರ 6 ಟೆಸ್ಟ್ ಹಾಗೂ 61 ಏಕದಿನ ಪಂದ್ಯಗಳನ್ನಾಡಿದ್ದಾರೆ.