
ನವದೆಹಲಿ: ಭಾರತದ ಹಾಕಿ ತಂಡ ಇತ್ತೀಚೆಗೆ ದೊಡ್ದ ವಿವಾದದಲ್ಲಿ ಸಿಲುಕಿತ್ತು. ಅದಕ್ಕೆ ಕಾರಣ ಟೀಂ ಇಂಡಿಯಾದ ಜೆರ್ಸಿ ಬಣ್ಣ. 2026ರ ಹಾಕಿ ವಿಶ್ವಕಪ್ ಸಮಯದಲ್ಲಿ ಭಾರತ ತಂಡವು ತನ್ನ ಸಾಂಪ್ರದಾಯಿಕ ನೀಲಿ ಜೆರ್ಸಿ ಬಣ್ಣವನ್ನು ಇದ್ದಕ್ಕಿದ್ದಂತೆ ಕಿತ್ತಳೆ ಅಂದರೆ ಕೇಸರಿ ಬಣ್ಣಕ್ಕೆ ಬದಲಾಯಿಸಿತ್ತು.
ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಆ ವಿವಾದವು ದೊಡ್ಡ ತಿರುವನ್ನು ಪಡೆದುಕೊಂಡಿದೆ. ಹಾಕಿ ಇಂಡಿಯಾ ತನ್ನ ಡೈರೆಕ್ಟರ್ ಜನರಲ್ ಕಮಾಂಡರ್ ಆರ್.ಕೆ.ಶ್ರೀವಾಸ್ತವ ಅವರ ಎಲ್ಲಾ ಅಧಿಕಾರಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿ ಆದೇಶ ನೀಡಲಾಗಿದೆ.
ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಅವರು ತಮ್ಮ ವಕೀಲರ ಮೂಲಕ ಶ್ರೀವಾಸ್ತವ ವಿರುದ್ಧ 8 ಗಂಭೀರ ಆರೋಪಗಳನ್ನು ಮಾಡಿ ನೋಟಿಸ್ ಜಾರಿ ಮಾಡಿದ್ದಾರೆ. ಇನ್ನು, ಆರೋಪಗಳಿಗೆ ಉತ್ತರಿಸಲು ನಾಲ್ಕು ವಾರಗಳ ಕಾಲಾವಕಾಶವನ್ನೂ ನೀಡಲಾಗಿದೆ.
ಇಷ್ಟೆಲ್ಲ ಆರೋಪಗಳ ನಡುವೆ ಅವರಿಗೆ ಯಾವುದೇ ಕಾರಣಕ್ಕೂ ವಿದೇಶಗಳಿಗೆ ಹೋಗದಂತೆ ಕಟ್ಟುನಿಟ್ಟಿನ ಅಪ್ಪಣೆ ಹೊರಡಿಸಲಾಗಿತ್ತು. ತಮಗೆ ಬಂದಿರುವ ಆದೇಶವನ್ನು ಗಾಳಿಗೆ ತೂರಿ ಅವರು, ವಿದೇಶ ಪ್ರಯಾಣ ಬೆಳೆಸಿದ್ದರು. ಭಾರತದಲ್ಲಿಯೇ ಇದ್ದುಕೊಂಡು ಇಂಡಿಯಾ ಲೀಗ್ ಸಂಬಂಧಿಸಿ ಕೆಲಸ ಮಾಡಬೇಕು ಅಂತಾ ಹಿರಿಯ ಅಧಿಕಾರಿಗಳು ಸೂಚಿಸಿದ್ದರು. ಆದರೆ ಅವರ ಆದೇಶವನ್ನು ಪಾಲಿಸಿಲ್ಲ.
ಇನ್ನು ವಿಶ್ವಕಪ್ನಲ್ಲಿ ಟೀಂ ಇಂಡಿಯಾದ ಪ್ರದರ್ಶನ ಚೆನ್ನಾಗಿ ಇರಲಿಲ್ಲ. ಜರ್ಸಿ ವಿವಾದ ಒಂದು ಕಡೆಯಾದರೆ, ವಿಶ್ವಕಪ್ನಲ್ಲಿ ನಿರಾಸದಾಯಕ ಪ್ರದರ್ಶನದೊಂದಿಗೆ 8ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಎಲ್ಲಾ ಬೆಳವಣಿಗೆ ನಡುವೆ ಇದೀಗ ಶ್ರೀವಾಸ್ತವ್ ಅವರನ್ನು ಅಮಾನತು ಮಾಡಿ ಆದೇಶ ನೀಡಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.