
ಚಂಡೀಗಢ(ಜ.06): ಅಂತಾರಾಷ್ಟ್ರೀಯ ಯುವ ಶೂಟರ್ ಮನು ಭಾಕರ್, ಸರ್ಕಾರದ ವಿರುದ್ಧ ನೀಡಿದ್ದ ತಮ್ಮ ಹೇಳಿಕೆಗೆ ಕ್ಷಮೆಕೋರಬೇಕೆಂದು ಹೇಳಿದ್ದಕ್ಕೆ ಹರ್ಯಾಣ ಸರ್ಕಾರದ ಕ್ರೀಡಾ ಸಚಿವ ಅನಿಲ್ ವಿಜ್ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದ್ದಾರೆ.
‘ಭಾಕರ್, ಸಾಮಾಜಿಕ ತಾಣದಲ್ಲಿ ಮಾತನಾಡುವುದಕ್ಕಿಂತ ಮೊದಲು ಕ್ರೀಡಾ ಇಲಾಖೆಯೊಂದಿಗೆ ಮಾತ ನಾಡಬೇಕು. ಅವರ ಭಾಷೆ ಸರ್ಕಾರದ ಘನತೆಯನ್ನು ತಗ್ಗಿಸುವಂಥದ್ದಾಗಿದೆ’ ಎಂದು ಸಚಿವ ಅನಿಲ್ ಹೇಳಿದ್ದರು.
2018ರ ಯೂತ್ ಒಲಿಂಪಿಕ್ಸ್'ನಲ್ಲಿ ಮನು ಭಾಕರ್ ಚಿನ್ನ ಗೆದ್ದಿದ್ದಕ್ಕೆ ಹರ್ಯಾಣ ಸರ್ಕಾರ ₹2 ಕೋಟಿ ನಗದು ಬಹುಮಾನ ಘೋಷಿಸಿತ್ತು. ಆದರೆ ಸರ್ಕಾರ ಈವರೆಗೂ ಬಹುಮಾನ ನೀಡದೇ ಇದ್ದುದಕ್ಕೆ ಭಾಕರ್, ತಮ್ಮ ಟ್ವೀಟರ್ ಖಾತೆಯಲ್ಲಿ ಅಸಮಾಧಾನ ಹೊರಹಾಕಿದ್ದರು. ಇದು ಸಚಿವ ಅನಿಲ್ ವಿಜ್ ಅಸಮಾಧಾನಕ್ಕೆ ಕಾರಣವಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.