2 ಕೋಟಿ ಬಹುಮಾನ ಕೇಳಿದ್ದಕ್ಕೆ ಸಚಿವನಿಗೆ ಸಿಟ್ಟು..!

By Web DeskFirst Published Jan 6, 2019, 4:19 PM IST
Highlights

‘ಭಾಕರ್, ಸಾಮಾಜಿಕ ತಾಣದಲ್ಲಿ ಮಾತನಾಡುವುದಕ್ಕಿಂತ ಮೊದಲು ಕ್ರೀಡಾ ಇಲಾಖೆಯೊಂದಿಗೆ ಮಾತ ನಾಡಬೇಕು. ಅವರ ಭಾಷೆ ಸರ್ಕಾರದ ಘನತೆಯನ್ನು ತಗ್ಗಿಸುವಂಥದ್ದಾಗಿದೆ’ ಎಂದು ಸಚಿವ ಅನಿಲ್ ಹೇಳಿದ್ದರು. 

ಚಂಡೀಗಢ(ಜ.06): ಅಂತಾರಾಷ್ಟ್ರೀಯ ಯುವ ಶೂಟರ್ ಮನು ಭಾಕರ್, ಸರ್ಕಾರದ ವಿರುದ್ಧ ನೀಡಿದ್ದ ತಮ್ಮ ಹೇಳಿಕೆಗೆ ಕ್ಷಮೆಕೋರಬೇಕೆಂದು ಹೇಳಿದ್ದಕ್ಕೆ ಹರ್ಯಾಣ ಸರ್ಕಾರದ ಕ್ರೀಡಾ ಸಚಿವ ಅನಿಲ್ ವಿಜ್ ಸಾರ್ವಜನಿಕರಿಂದ ಟೀಕೆಗೆ ಗುರಿಯಾಗಿದ್ದಾರೆ. 

ಯೂತ್ ಒಲಿಂಪಿಕ್ಸ್: ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ವೇಟ್ ಲಿಫ್ಟರ್ ಜೆರೆಮಿ!

‘ಭಾಕರ್, ಸಾಮಾಜಿಕ ತಾಣದಲ್ಲಿ ಮಾತನಾಡುವುದಕ್ಕಿಂತ ಮೊದಲು ಕ್ರೀಡಾ ಇಲಾಖೆಯೊಂದಿಗೆ ಮಾತ ನಾಡಬೇಕು. ಅವರ ಭಾಷೆ ಸರ್ಕಾರದ ಘನತೆಯನ್ನು ತಗ್ಗಿಸುವಂಥದ್ದಾಗಿದೆ’ ಎಂದು ಸಚಿವ ಅನಿಲ್ ಹೇಳಿದ್ದರು. 

ಯೂತ್‌ ಒಲಿಂಪಿಕ್‌: 16 ವರ್ಷದ ಮನು ಭಾಕರ್‌ ಧ್ವಜಧಾರಿ

2018ರ ಯೂತ್ ಒಲಿಂಪಿಕ್ಸ್'ನಲ್ಲಿ ಮನು ಭಾಕರ್ ಚಿನ್ನ ಗೆದ್ದಿದ್ದಕ್ಕೆ ಹರ್ಯಾಣ ಸರ್ಕಾರ ₹2 ಕೋಟಿ ನಗದು ಬಹುಮಾನ ಘೋಷಿಸಿತ್ತು. ಆದರೆ ಸರ್ಕಾರ ಈವರೆಗೂ ಬಹುಮಾನ ನೀಡದೇ ಇದ್ದುದಕ್ಕೆ ಭಾಕರ್, ತಮ್ಮ ಟ್ವೀಟರ್ ಖಾತೆಯಲ್ಲಿ ಅಸಮಾಧಾನ ಹೊರಹಾಕಿದ್ದರು. ಇದು ಸಚಿವ ಅನಿಲ್ ವಿಜ್ ಅಸಮಾಧಾನಕ್ಕೆ ಕಾರಣವಾಗಿತ್ತು.

click me!