ಟೀಂ ಇಂಡಿಯಾ ಅಭಿಮಾನಿಗಳ ಪಾಲಿಗಿದು ಸಿಹಿ ಸುದ್ದಿ...!

Published : Jun 19, 2017, 06:39 PM ISTUpdated : Apr 11, 2018, 01:01 PM IST
ಟೀಂ ಇಂಡಿಯಾ ಅಭಿಮಾನಿಗಳ ಪಾಲಿಗಿದು ಸಿಹಿ ಸುದ್ದಿ...!

ಸಾರಾಂಶ

ಕಳೆದ ವರ್ಷ ಭಾರತದಲ್ಲಿ ನಡೆದ ಟಿ20 ವಿಶ್ವಕಪ್ ಬಳಿಕ ಹರ್ಷಾ ಬೋಗ್ಲೆ ಅವರನ್ನು ಯಾವುದೇ ಕಾರಣ ನೀಡದೇ ಬಿಸಿಸಿಐ ವೀಕ್ಷಕ ವಿವರಣೆ ಪ್ಯಾನಲ್'ನಿಂದ ಹೊರಗಟ್ಟಿತ್ತು.

ಬೆಂಗಳೂರು(ಜೂ.19): ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪಾಕ್ ಎದುರು ಎಡವಿ ಟೀಂ ಇಂಡಿಯಾ ತನ್ನ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದು ಎಲ್ಲರಿಗೂ ಗೊತ್ತೇ ಇದೆ.

ಆದರೆ ಇದೀಗ ಆ ನೋವನ್ನು ಮರೆಸುವ ಹೊಸ ಸುದ್ದಿಯೊಂದು ಟೀಂ ಇಂಡಿಯಾ ಅಭಿಮಾನಿಗಳಿಗಾಗಿ ಹೊರಬಿದ್ದಿದೆ. ಅದೇನಪ್ಪಾ ಸುದ್ದಿ ಅಂತಿರಾ..?

ಹೌದು, ಮುಂಬರುವ ವೆಸ್ಟ್'ಇಂಡಿಸ್ ಪ್ರವಾಸದ ವೇಳೆಗೆ ಖ್ಯಾತ ಮಾತಿನ ಮಲ್ಲ ಹರ್ಷಾ ಬೋಗ್ಲೆ ಕಾಮೆಂಟೇಟರಿ ಬಾಕ್ಸ್ ಕೂಡಿಕೊಳ್ಳಲಿದ್ದಾರೆ.

ಈ ವಿಚಾರವನ್ನು ಹರ್ಷಾ ಬೋಗ್ಲೆ ಸ್ವತಃ ಟ್ವಿಟರ್'ನಲ್ಲಿ ಸ್ಪಷ್ಟಪಡಿಸಿದ್ದು, ನಾನು ವೆಸ್ಟ್'ಇಂಡಿಸ್ ತೆರಳುತ್ತಿದ್ದು, ಅಲ್ಲಿ ಕ್ರಿಕೆಟ್ ಕಾಮೆಂಟರಿ ಮಾಡಲಿದ್ದೇನೆ. ನಿಮ್ಮ ಬೆಂಬಲಕ್ಕೆ ನಾನು ಆಭಾರಿ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷ ಭಾರತದಲ್ಲಿ ನಡೆದ ಟಿ20 ವಿಶ್ವಕಪ್ ಬಳಿಕ ಹರ್ಷಾ ಬೋಗ್ಲೆ ಅವರನ್ನು ಯಾವುದೇ ಕಾರಣ ನೀಡದೇ ಬಿಸಿಸಿಐ ವೀಕ್ಷಕ ವಿವರಣೆ ಪ್ಯಾನಲ್'ನಿಂದ ಹೊರಗಟ್ಟಿತ್ತು.

ಬಿಸಿಸಿಐನ ಈ ಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು.

ವಿಶ್ಲೇಷಣಾತ್ಮಕ ವೀಕ್ಷಕ ವಿವರಣೆಯಿಂದ ತನ್ನದೇ ಆದ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿರುವ ಹರ್ಷಾ ಬೋಗ್ಲೆ, ಆ ನಂತರ ಸಾಮಾಜಿಕ ಜಾಲತಾಣದಲ್ಲಿ ಇನ್ನಷ್ಟು ಸಕ್ರಿಯರಾಗಿದ್ದರು.

ಇದೀಗ ಜೂನ್ 23ರಿಂದ ಆರಂಭವಾಗಲಿರುವ ಭಾರತ-ವೆಸ್ಟ್'ಇಂಡಿಸ್  ಏಕದಿನ ಪಂದ್ಯದಲ್ಲಿ ಹರ್ಷಾ ಬೋಗ್ಲೆ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾದಿಂದ ಹೊರಬಿದ್ದ ಟಾಪ್-5 ಆಟಗಾರರಿವರು! ಪಟ್ಟಿಯಲ್ಲಿವೆ ಅಚ್ಚರಿ ಹೆಸರು
ಶುಭ್‌ಮನ್ ಗಿಲ್ ಕೈಬಿಟ್ಟಿಕ್ಕೇಕೆ?: ಫಾರ್ಮ್ ಅಲ್ಲ, ಬೇರೆಯೇ ಕಾರಣ ಎಂದ ಅಜಿತ್ ಅಗರ್ಕರ್!