ಅನಿಲ್ ಕುಂಬ್ಳೆಗೆ ಹರ್ಭಜನ್ ಬರೆದ ಪತ್ರದಲ್ಲೇನಿದೆ?

Published : May 18, 2017, 09:50 AM ISTUpdated : Apr 11, 2018, 01:00 PM IST
ಅನಿಲ್ ಕುಂಬ್ಳೆಗೆ ಹರ್ಭಜನ್ ಬರೆದ ಪತ್ರದಲ್ಲೇನಿದೆ?

ಸಾರಾಂಶ

ರಾಷ್ಟ್ರೀಯ ತಂಡದಿಂದ ಹೊರಗುಳಿದಿರುವ ಹರ್ಭಜನ್‌ ಸಿಂಗ್‌'ಗೆ ದೇಸಿ ಕ್ರಿಕೆಟಿಗರು ಎದುರಿಸುತ್ತಿರುವ ವೇತನ ಸಮಸ್ಯೆ ಕಣ್ಣಿಗೆ ಬಿದ್ದಿದ್ದು, ಇದಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ತಮ್ಮ ಮಾಜಿ ನಾಯಕ ಹಾಗೂ ಭಾರತ ತಂಡದ ಹಾಲಿ ಕೋಚ್‌ ಅನಿಲ್‌ ಕುಂಬ್ಳೆಗೆ ಪತ್ರವೊಂದನ್ನು ಬರೆದಿದ್ದಾರೆ. ಕುಂಬ್ಳೆ ಇದೇ 21ರಂದು ರಾಷ್ಟ್ರೀಯ ಆಟಗಾರರ ವೇತನ ಹೆಚ್ಚಳಕ್ಕೆ ಸಂಬಂಧ ಸರ್ವೋಚ್ಚ ನ್ಯಾಯಾಲಯ ನೇಮಿತ ಬಿಸಿಸಿಐ ಆಡಳಿತ ಸಮಿತಿ ಮುಂದೆ ಪ್ರಸ್ತುತಿ ಸಲ್ಲಿಸಲಿದ್ದು, ಈ ವೇಳೆ ದೇಸಿ ಕ್ರಿಕೆಟಿಗರ ವೇತನ ಹೆಚ್ಚಳ ವಿಷಯವನ್ನೂ ಪ್ರಸ್ತಾಪಿಸುವಂತೆ ಹರ್ಭಜನ್‌, ಪತ್ರದಲ್ಲಿ ಕೇಳಿಕೊಂಡಿದ್ದಾರೆ.

ನವದೆಹಲಿ(ಮೇ.18): ರಾಷ್ಟ್ರೀಯ ತಂಡದಿಂದ ಹೊರಗುಳಿದಿರುವ ಹರ್ಭಜನ್‌ ಸಿಂಗ್‌'ಗೆ ದೇಸಿ ಕ್ರಿಕೆಟಿಗರು ಎದುರಿಸುತ್ತಿರುವ ವೇತನ ಸಮಸ್ಯೆ ಕಣ್ಣಿಗೆ ಬಿದ್ದಿದ್ದು, ಇದಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ತಮ್ಮ ಮಾಜಿ ನಾಯಕ ಹಾಗೂ ಭಾರತ ತಂಡದ ಹಾಲಿ ಕೋಚ್‌ ಅನಿಲ್‌ ಕುಂಬ್ಳೆಗೆ ಪತ್ರವೊಂದನ್ನು ಬರೆದಿದ್ದಾರೆ. ಕುಂಬ್ಳೆ ಇದೇ 21ರಂದು ರಾಷ್ಟ್ರೀಯ ಆಟಗಾರರ ವೇತನ ಹೆಚ್ಚಳಕ್ಕೆ ಸಂಬಂಧ ಸರ್ವೋಚ್ಚ ನ್ಯಾಯಾಲಯ ನೇಮಿತ ಬಿಸಿಸಿಐ ಆಡಳಿತ ಸಮಿತಿ ಮುಂದೆ ಪ್ರಸ್ತುತಿ ಸಲ್ಲಿಸಲಿದ್ದು, ಈ ವೇಳೆ ದೇಸಿ ಕ್ರಿಕೆಟಿಗರ ವೇತನ ಹೆಚ್ಚಳ ವಿಷಯವನ್ನೂ ಪ್ರಸ್ತಾಪಿಸುವಂತೆ ಹರ್ಭಜನ್‌, ಪತ್ರದಲ್ಲಿ ಕೇಳಿಕೊಂಡಿದ್ದಾರೆ.

ಪತ್ರದಲ್ಲಿ ಭಜ್ಜಿ ‘‘ಕಳೆದ 2-3 ವರ್ಷಗಳಿಂದ ನಾನು ರಣಜಿ ಟ್ರೋಫಿಯಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದೇನೆ. ದೇಸಿ ಪಂದ್ಯಾವಳಿಯಲ್ಲಿ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವ ಆಟಗಾರ ಪ್ರತಿ ಪಂದ್ಯಕ್ಕೆ ಕೇವಲ .1.5 ಲಕ್ಷ ಪಡೆಯುತ್ತಾನೆ. ಒಂದು ಋುತುವಿನಲ್ಲಿ ಆತನಿಗೆ ಎಷ್ಟುಪಂದ್ಯದಲ್ಲಿ ಅವಕಾಶ ಸಿಗಲಿದೆ ಎನ್ನುವುದರ ಕುರಿತು ನಿಶ್ಚಿತ ಮಾಹಿತಿ ಇರುವುದಿಲ್ಲ. ಹೀಗಾಗಿ ಆ ಕ್ರಿಕೆಟ್‌ ನಂಬಿಕೊಂಡೇ ಜೀವನ ರೂಪಿಸಿಕೊಳ್ಳಲು ಸಾಧ್ಯವಿಲ್ಲ'' ಎಂದು ಬರೆದಿದ್ದಾರೆ. ಜತೆಗೆ ‘‘ಎಲ್ಲರಿಗೂ ಐಪಿಎಲ್‌ ಅವಕಾಶವೂ ಸಿಗುವುದಿಲ್ಲ. ಹೀಗಾಗಿ ನೀವು ಬಿಸಿಸಿಐ ಅಧಿಕಾರಿಗಳ ಜತೆ ಮಾತುಕಥೆ ನಡೆಸಬೇಕು. ಸಚಿನ್‌, ದ್ರಾವಿಡ್‌, ಲಕ್ಷ್ಮಣ್‌, ಸೆಹ್ವಾಗ್‌ರಂತಹ ಹಿರಿಯರೂ ಈ ಕುರಿತು ಗಮನ ಹರಿಸಬೇಕು ಎಂದು ಮನವಿ ಮಾಡುತ್ತೇನೆ'' ಎಂದು ಹರ್ಭಜನ್‌ ಪತ್ರದಲ್ಲಿ ತಿಳಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಜಯ್‌ ಹಜಾರೆ ಟ್ರೋಫಿ ದಾಖಲೆ, ಜಾರ್ಖಂಡ್‌ ವಿರುದ್ಧ 413 ರನ್‌ ಬೆನ್ನಟ್ಟಿ ಗೆದ್ದ ಕರ್ನಾಟಕ!
ವಿಜಯ್ ಹಜಾರೆ ಟ್ರೋಫಿ ಕಮ್‌ಬ್ಯಾಕ್‌ ಪಂದ್ಯದಲ್ಲಿ ಶತಕ ಚಚ್ಚಿದ ಕಿಂಗ್ ಕೊಹ್ಲಿ! ವಿರಾಟ್‌ಗಿದು ಕಳೆದ 4 ಪಂದ್ಯಗಳಲ್ಲಿ 3ನೇ ಶತಕ