ಮಳೆ ತಂದ ಅವಾಂತರ : ಕ್ವಾಲಿಫೈಯರ್ ತಲುಪಿದ ಕೋಲ್ಕತ್ತಾ

Published : May 18, 2017, 01:30 AM ISTUpdated : Apr 11, 2018, 01:02 PM IST
ಮಳೆ ತಂದ ಅವಾಂತರ : ಕ್ವಾಲಿಫೈಯರ್ ತಲುಪಿದ ಕೋಲ್ಕತ್ತಾ

ಸಾರಾಂಶ

ಕೋಲ್ಕತ್ತಾ ತಂಡ ಫೈನಲ್ ತಲುಪ ಬೇಕಾದರೆ ಮೇ.19ರಂದು ನಡೆಯುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆಲುವು ಸಾಧಿಸಬೇಕಿದೆ.

ಬೆಂಗಳೂರು(ಮೇ.18):  ಸಿಲಿಕಾನ್ ಸಿಟಿಯಲ್ಲಿ ಮಳೆ ಸುರಿದು ಕೋಲ್ಕತ್ತಾ ಗೆಲುವಿಗೆ ನೀರೆರೆಯಿತು. 2 ಗಂಟೆಗೂ ಹೆಚ್ಚು ಕಾಲ ಮಳೆ ಬಂದ ಕಾರಣ  ಪಂದ್ಯ ರಾತ್ರಿ 12.55 ಆರಂಭವಾಗಿ ಕೋಲ್ಕತ್ತಾಗೆ 6 ಓವರ್'ಗಳಲ್ಲಿ 48 ಗುರಿ ನೀಡಲಾಯಿತು. ಕಡಿಮೆ ಮೊತ್ತವಾದ ಕಾರಣ  3 ವಿಕೇಟ್ ಕಳೆದುಕೊಂಡ ಗಂಭೀರ್ ಪಡೆ 4.5 ಓವರ್'ಗಳಲ್ಲಿ  ಗೆಲುವು ಪಡೆದು ಕ್ವಾಲಿಫೈಯರ್ ಪ್ರವೇಶಿಸಿತು.

ಕೋಲ್ಕತ್ತಾ ತಂಡ ಫೈನಲ್ ತಲುಪ ಬೇಕಾದರೆ ಮೇ.19ರಂದು ನಡೆಯುವ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆಲುವು ಸಾಧಿಸಬೇಕಿದೆ.

ಟಾಸ್ ಗೆದ್ದ ನೈಟ್ ರೈಡರ್ಸ್ ಪಡೆ ಹೈದರಾಬಾದ್ ತಂಡಕ್ಕೆ ಬ್ಯಾಟಿಂಗ್ ಆಹ್ವಾನಿಸಿತು.ಮೊದಲು ಬ್ಯಾಟ್ ಬೀಸಿದ ಹೈದರಾಬಾದ್ 20 ಓವರ್'ಗಳಲ್ಲಿ  7 ವಿಕೇಟ್ 128 ಕಡಿಮೆ ಮೊತ್ತ ದಾಖಲಿಸಿತು. ವಾರ್ನರ್(37), ವಿಲಿಯಮ್ಸ್'ನ್(24) ಹಾಗೂ ಶಂಕರ್(22) ರನ್ ದಾಖಲಿಸಿದರು.  ಉಳಿದ ದಾಂಡಿಗರು ಬಾರಿಸಿದ್ದು ಒಂದಂಕಿಯ ಮೊತ್ತ ಮಾತ್ರ.

ಮಳೆಯಿಂದ 6 ಓವರ್'ಗಳಲ್ಲಿ 48 ರನ್ ಗುರಿ ಪಡೆದುಕೊಂಡು ಬ್ಯಾಟಿಂಗ್ ಆರಂಭಿಸಿದ ಕೋಲ್ಕತ್ತಾ ತಂಡ 2 ಓವರ್'ಗಳಿಲ್ಲಿಯೇ 3 ವಿಕೇಟ್ ಕಳೆದು ಆತಂಕಕ್ಕೀಡಾದರೂ 4.5 ಓವರ್'ಗಳಲ್ಲಿ ಗೆಲುವಿನ ದಡ ಸೇರಿತು. 18 ಎಸೆತಗಳಲ್ಲಿ 31 ರನ್' ಗಳಿಸಿದ ಗಂಭೀರ್ ಗೆಲುವಿನ ರುವಾರಿಯಾದರು

ಸ್ಕೋರ್

ಸನ್ ರೈಸರ್ಸ್ ಹೈದರಾಬಾದ್ : 128/7(20/20)

ಕೋಲ್ಕತ್ತಾ ನೈಟ್ ರೈಡರ್ಸ್: 48/3(4.5/6)

ಕೋಲ್ಕತ್ತಾ'ಗೆ 7 ವಿಕೇಟ್ ಜಯ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಜಯ್‌ ಹಜಾರೆ ಟ್ರೋಫಿ ದಾಖಲೆ, ಜಾರ್ಖಂಡ್‌ ವಿರುದ್ಧ 413 ರನ್‌ ಬೆನ್ನಟ್ಟಿ ಗೆದ್ದ ಕರ್ನಾಟಕ!
ವಿಜಯ್ ಹಜಾರೆ ಟ್ರೋಫಿ ಕಮ್‌ಬ್ಯಾಕ್‌ ಪಂದ್ಯದಲ್ಲಿ ಶತಕ ಚಚ್ಚಿದ ಕಿಂಗ್ ಕೊಹ್ಲಿ! ವಿರಾಟ್‌ಗಿದು ಕಳೆದ 4 ಪಂದ್ಯಗಳಲ್ಲಿ 3ನೇ ಶತಕ