
ನವದೆಹಲಿ(ಮಾ.07): 20017-18ರ ದೇಸಿ ಋತು ಮುಕ್ತಾಯಗೊಳ್ಳುವ ಸಮಯ ಹತ್ತಿರ ಬಂದರೂ, ಸತತ 2ನೇ ವರ್ಷ ಬಿಸಿಸಿಐ ತನ್ನ ದೇಸಿ ಕ್ರಿಕೆಟಿಗರಿಗೆ ನೀಡಬೇಕಿರುವ ವೇತನ ಪಾವತಿಸಿಲ್ಲ. ಬಹುತೇಕ ರಾಜ್ಯ ಕ್ರಿಕೆಟ್ ಸಂಸ್ಥೆಗಳು ತನ್ನ ಆಟಗಾರರಿಗೆ ಸಂಭಾವನೆ ನೀಡಿದೆಯಾದರೂ, ಬಿಸಿಸಿಐನಿಂದ ಬರಬೇಕಿರುವ ಹಣ ಇನ್ನೂ ಕೈಸೇರಿಲ್ಲ.
ಬಿಸಿಸಿಐನ ವೇತನ ನಿಯಮದ ಪ್ರಕಾರ, ಒಟ್ಟು ಆದಾಯದ ಶೇ.10.6ರಷ್ಟನ್ನು ದೇಸಿ ಕ್ರಿಕೆಟಿಗರಿಗೆ ಸಂಭಾವನೆ ರೂಪದಲ್ಲಿ ನೀಡಬೇಕು. ರಣಜಿ ಟ್ರೋಫಿ ಹಾಗೂ ಸೀಮಿತ ಓವರ್ ಪಂದ್ಯಾವಳಿಯಲ್ಲಿ ಕಾಯಂ ಆಗಿ ಆಡುವ ಆಟಗಾರರಿಗೆ ವಾರ್ಷಿಕ ₹12-15 ಲಕ್ಷ ನೀಡಬೇಕಿದೆ. ವೇತನ ವಿಳಂಬಕ್ಕೆ ಸುಪ್ರೀಂ ಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಸಮಿತಿ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳ ನಡುವಿನ ನ್ಯಾ.ಲೋಧಾ ಸಮಿತಿ ಶಿಫಾರಸು ಹಗ್ಗಜಗ್ಗಾಟವೇ ಕಾರಣ ಎನ್ನಲಾಗಿದೆ. ಜತೆಗೆ ಆಡಳಿತ ಸಮಿತಿ ನೂತನ ವೇತನ ಮಾದರಿಯನ್ನು ಅಳವಡಿಸಲು ಯೋಜನೆ ರೂಪಿಸುತ್ತಿದೆ. ಬಿಸಿಸಿಐನ ಒಟ್ಟು ಆದಾಯದಲ್ಲಿ ಶೇ.26ರಷ್ಟನ್ನು ಆಟಗಾರರಿಗೆ ಮೀಸಲಿಡಬೇಕಿದೆ. ಇದರಲ್ಲಿ ಶೇ.13ರಷ್ಟು ಅಂ.ರಾ.ತಾರೆಯರಿಗೆ, ಶೇ.10.6ರಷ್ಟು ದೇಸಿ ಕ್ರಿಕೆಟಿಗರಿಗೆ ಹಾಗೂ ಇನ್ನುಳಿದಿದ್ದು ಮಹಿಳಾ ಹಾಗೂ ಕಿರಿಯ ಕ್ರಿಕೆಟಿಗರಿಗೆ ನೀಡಬೇಕಿದೆ.
ಸುಮಾರು 25 ರಾಜ್ಯ ಸಂಸ್ಥೆಗಳು ಬಿಸಿಸಿಐನಿಂದ ವೇತನ ಪಾವತಿಯಾಗಿಲ್ಲವೆಂದು ದೃಢಪಡಿಸಿವೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಶ್ರೀಮಂತ ಕ್ರಿಕೆಟ್ ಸಂಸ್ಥೆಯ ನಡೆ ಭಾರೀ ಟೀಕೆಗೆ ಗುರಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.